ಪತ್ನಿಗೆ ಮೆಸೇಜ್ ಮಾಡಿದಕ್ಕೆ ಟೈಲರ್​ನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್

ಟೈಲರ್​ ಶಾಪ್​ಗೆ ನುಗ್ಗಿ ಎಳೆದೊಯ್ದು ದೊಣ್ಣೆಯಿಂದ ಬಡಿದು ಕೊಲೆ ಮಾಡಲಾಗಿತ್ತು. ಸದ್ಯ ಈ ಪ್ರಕರಣ ಸಂಬಂಧ ಭರತ್, ಅಭಿಷೇಕ್, ಕುಮಾರ್, ಚಿರಂಜೀವಿ, ಅಭಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಪತ್ನಿಗೆ ಮೆಸೇಜ್ ಮಾಡಿದಕ್ಕೆ ಟೈಲರ್​ನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್
ಪ್ರಾತಿನಿಧಿಕ ಚಿತ್ರ
Edited By: ಆಯೇಷಾ ಬಾನು

Updated on: Oct 29, 2022 | 11:38 AM

ಹಾಸನ: ಪತ್ನಿಗೆ ಮೆಸೇಜ್ ಮಾಡಿದ್ದ ಟೈಲರ್​ ಮೇಲೆ ಹಲ್ಲೆಗೈದು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನ ಚನ್ನರಾಯಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅ.13ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜನಿವಾರ ಗ್ರಾಮದ ಬಳಿ ಟೈಲರ್​ ಗಂಗಾಧರ್(39)​ ಬರ್ಬರ ಹತ್ಯೆ ನಡೆದಿತ್ತು. ಟೈಲರ್​ ಶಾಪ್​ಗೆ ನುಗ್ಗಿ ಎಳೆದೊಯ್ದು ದೊಣ್ಣೆಯಿಂದ ಬಡಿದು ಕೊಲೆ ಮಾಡಲಾಗಿತ್ತು. ಸದ್ಯ ಈ ಪ್ರಕರಣ ಸಂಬಂಧ ಭರತ್, ಅಭಿಷೇಕ್, ಕುಮಾರ್, ಚಿರಂಜೀವಿ, ಅಭಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಡೆಲಿವರಿ ಬಾಯ್​​ಗೆ ಚಾಕು ಇರಿದು ಸುಲಿಗೆ ಮಾಡಿದ್ದವರು ಅರೆಸ್ಟ್

​ಡೆಲಿವರಿ ಬಾಯ್​​ಗೆ ಚಾಕು ಇರಿದು ಸುಲಿಗೆ ಮಾಡಿದ್ದ ಸಜ್ಜಾದ್​ ಖಾನ್​, ಸೈಫ್​ ಮೌಲಾನನನ್ನು ಬಂಧಿಸಿದ ಅಶೋಕನಗರ ಠಾಣೆ ಪೊಲೀಸರು; ಅ.10ರಂದು ಮೊಬೈಲ್​​ ಕಿತ್ತುಕೊಂಡು ಚಾಕು ಇರಿದಿದ್ದ ಆರೋಪಿಗಳು; ಆರೋಪಿಗಳ ಬಂಧನ ಬಳಿಕ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪತ್ತೆ; ಚಾಮರಾಜಪೇಟೆ, ವಿಲ್ಸನ್​ ಗಾರ್ಡನ್​, ಕಲಾಸಿಪಾಳ್ಯ ವ್ಯಾಪ್ತಿಯಲ್ಲಿ ಸುಲಿಗೆ ಮಾಡಿದ್ದ ಆರೋಪಿಗಳು

ಸ್ವಿಗ್ಗಿ ಡೆಲಿವರಿ ಬಾಯ್ ಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಿದ್ದ ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಜ್ಜಾದ್ ಖಾನ್, ಸೈಫ್ ಮೌಲಾನ ಬಂಧಿತ ಆರೋಪಿಗಳು. ರಾತ್ರಿ ವೇಳೆ ಒಬ್ಬಂಟಿಯಾಗಿ ತೆರಳುವ ಸ್ವಿಗ್ಗಿ ಡೆಲಿವರಿ ಬಾಯ್ಸ್ ಗಳನ್ನೇ ಟಾರ್ಗೇಟ್ ಮಾಡ್ತಿದ್ದ ಆರೋಪಿಗಳು ಕಳೆದ 10 ನೇ ತಾರೀಕಿನಂದು ಒನ್ ಪ್ಲಸ್ ಮೊಬೈಲ್ ಗಾಗಿ ಚಾಕುವಿನಿಂದ ಇರಿದಿದ್ದರು. ಅಪಾಚಿ ಗಾಡಿಯಲ್ಲಿ ಬಂದು ಚಾಕುವಿನಿಂದ ಆರೋಪಿಗಳು ಇರಿದಿದ್ದರು. ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಅಶೊಕ್ ನಗರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರೋದು ಪತ್ತೆಯಾಗಿದೆ. ಚಾಮರಾಜಪೇಟೆ, ವಿಲ್ಸನ್ ಗಾರ್ಡನ್, ಕಲಾಸಿಪಾಳ್ಯ ವ್ಯಾಪ್ತಿಯಲ್ಲಿ ಸುಲಿಗೆ ಮಾಡಿದ್ದರು. ಇದನ್ನೂ ಓದಿ: ಕೇಸರಿ ಹೂವು -ಪುರುಷರಿಗೆ ಪ್ರಕೃತಿಯ ಕೊಡುಗೆ: ಪ್ರತಿದಿನ ಕೇಸರಿ ಸೇವಿಸಿ, ಆ ಸಾಮರ್ಥ್ಯ ಹೆಚ್ಚಾಗುವುದು!

ಡಿವೈಡರ್ ಗೆ ಬೈಕ್ ಡಿಕ್ಕಿ ಸವಾರ ಸಾವು

ಮೈಸೂರು: ಟಿ.ನರಸೀಪುರದ ಕಪಿಲಾ ನದಿ ಸೇತುವೆ ಡಿವೈಡರ್​ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ವಾಟಾಳು ಗ್ರಾಮದ ಚೇತನ್(23) ಮೃತ ದುರ್ದೈವಿ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹ ಗೃಹಣಿ ಆತ್ಮಹತ್ಯೆ

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಕೆರೆಗೆ ಹಾರಿ ಗೃಹಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಲ್ಲವಿ(33) ಮೃತ ದುರ್ದೈವಿ. ಪಲ್ಲವಿ ನಿನ್ನೆ ರಾತ್ರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹೊರತೆಗೆದಿದ್ದಾರೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Loading...
Unable to load recommendations.
Follow Us