AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಹತ್ತು ರೂಪಾಯಿ ತೆಗೆದುಕೊಳ್ಳದೆ ಕೆಲಸ ಕೊಟ್ಟೆ, ಈಗ ಜನರ ಸೇವೆ ಮಾಡಿ ಅಂದ್ರೆ ನಾಟಕ ಆಡ್ತೀರಾ? KPTCL ಸಹಾಯಕ ಇಂಜಿನಿಯರ್​ಗೆ ರೇವಣ್ಣ ಕ್ಲಾಸ್

ಹಾಸನ ತಾಲೂಕಿನ ಮೆಳಗೋಡು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಹವಾಲು ಸ್ವೀಕಾರ ಮತ್ತು ಗ್ರಾಮಸಭೆಯಲ್ಲಿ ಅಧಿಕಾರಿ ಅರ್ಜುನ್ ವಿರುದ್ಧ ಮಾಜಿ ಸಚಿವ ಹೆಚ್​ಡಿ ರೇವಣ್ಣ ಕೆಂಡಕಾರಿದ್ದಾರೆ.

ಆಯೇಷಾ ಬಾನು
ಆಯೇಷಾ ಬಾನು|

Updated on:Mar 06, 2023 | 11:05 AM

Share

ಹಾಸನ: KPTCL ಸಹಾಯಕ ಇಂಜಿನಿಯರ್ ಅರ್ಜುನ್ ವಿರುದ್ಧ ಹೆಚ್​ಡಿ ರೇವಣ್ಣ(HD Revanna) ಗರಂ ಆಗಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.​ ಹಾಸನ ತಾಲೂಕಿನ ಮೆಳಗೋಡು ಗ್ರಾಮದಲ್ಲಿ ಅಹವಾಲು ಸ್ವೀಕಾರ ಮತ್ತು ಗ್ರಾಮಸಭೆಯಲ್ಲಿ H.D.ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಹತ್ತು ರೂಪಾಯಿಯನ್ನೂ ತೆಗೆದುಕೊಳ್ಳದೆ ಕೆಲಸ ಕೊಟ್ಟೆ. ಈಗ ಜನರ ಸೇವೆ ಮಾಡಿ ಅಂದ್ರೆ ನಾಟಕ ಆಡ್ತೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾಸನ ತಾಲೂಕಿನ ಮೆಳಗೋಡು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಹವಾಲು ಸ್ವೀಕಾರ ಮತ್ತು ಗ್ರಾಮಸಭೆಯಲ್ಲಿ ಅಧಿಕಾರಿ ಅರ್ಜುನ್ ವಿರುದ್ಧ ಮಾಜಿ ಸಚಿವ ಹೆಚ್​ಡಿ ರೇವಣ್ಣ ಕೆಂಡಕಾರಿದ್ದಾರೆ. ನಾನು ಹತ್ತು ರೂಪಾಯಿಯನ್ನೂ ತೆಗೆದುಕೊಳ್ಳದೆ ಕೆಲಸ ಕೊಟ್ಟೆ. ಈಗ ಜನರ ಸೇವೆ ಮಾಡಿ ಅಂದ್ರೆ ನಾಟಕ ಆಡ್ತೀರಾ ಹಳ್ಳಿಯವರಿಗೆ ಬೇಕಾಗಿರೋದು ಕುಡಿಯುವ ನೀರು, ಚರಂಡಿ ಮತ್ತು ವಿದ್ಯುತ್‌ ಇನ್ನೇನು ಕೇಳ್ತಾರೆ. ತಿಂಗಳಾದ್ರೂ ಒಂದು ಟ್ರಾನ್ಸ್‌‌ಫಾರ್ಮರ್ ಚೇಂಜ್ ಮಾಡಿಲ್ಲ ಅಂದ್ರೆ ಏನ್ ಕೆಲಸ ಮಾಡ್ತೀರಾ ನೀವು. ಇನ್ನು ಎರಡು ತಿಂಗಳು ನಿಮ್ಮ ಅಧಿಕಾರಿ ಸಿಗದೆ ಎಲ್ಲೂ ಹೋಗಲ್ಲ ಬಲಿ ಹಾಕ್ತಿನಿ ನಂಗೆ ಗೊತ್ತಿದೆ ಎಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ಅರ್ಜುನ್‌ ವಿರುದ್ಧ ಹೆಚ್.ಡಿ.ರೇವಣ್ಣ ಸಿಟ್ಟಾದ್ರು.

ಇದನ್ನೂ ಓದಿ: ತುಮಕೂರು: ಕ್ರೇನ್​​ನಿಂದ ಕಳಜಿ ಬಿದ್ದ ಮೂಸಂಬಿ, ಸೇಬಿನ ಹಾರ; ಅಪಾಯದಿಂದ ಪಾರಾದ ಪರಮೇಶ್ವರ

ಸಭೆ ವೇಳೆ, ಆಶ್ರಯ ಮನೆ ಕೇಳಿದ ಜನರಿಗೆ ರೇವಣ್ಣ ಸಮಾಧಾನದ ಮಾತುಗಳನ್ನಾಡಿದ್ದಾರೆ. ಈಗಿರೋದು ಕೇವಲ. 1.20 ಲಕ್ಷದ ಮನೆ ಯೋಜನೆ. ಈ ಯೋಜನೆಯಲ್ಲಿ ಮನೆ ತಗೊಂಡ್ರೆ ನೀವು ಅಡಿಪಾಯ ಕೂಡ ಹಾಕೋಕೆ ಆಗಲ್ಲ. ಈಗ ಬೇಡಾ ಸುಮ್ನಿರಿ, ಇನ್ನು ಎರಡು ತಿಂಗಳು ಕಾಯಿರಿ. ಮತ್ತೆ ಕುಮಾರಣ್ಣ ಬರ್ತಾರೆ, ಆಗ ಒಂದು ಆಶ್ರಯ ಮನೆಗೆ ಐದು ಲಕ್ಷ ಮಾಡಿಸ್ತಿನಿ ಆಗ ನಿಮಗೆ ಮನೆ ಕೊಡ್ತಿನಿ. ಐದು ಲಕ್ಷದ ಜೊತೆಗೆ ನೀವೊಂದು ಎರಡು ಲಕ್ಷ ಸೇರಿಸಿದ್ರೆ ಒಳ್ಳೆ ಮನೆ ಆಗುತ್ತೆ ಎಂದು ಸಮಾಧಾನ ಹೇಳಿದ್ರು. ಬೇಕಿದ್ರೆ ಹೇಳಿ ಒಂದು ಸಾವಿರ ಮನೆ ರೆಡಿ ಇದಾವೆ ಆದ್ರೆ ಬರಿ ಒಂದು ಲಕ್ಷದ 20 ಸಾವಿರ ಮಾತ್ರ ಸಿಗೋದು. ಆಗ ಮಳೆಯಲ್ಲಿ ಮನೆ ಬಿದ್ದಾಗ ನಾನು ಎಲ್ಲರಿಗು ಐದು ಲಕ್ಷದ ಮನೆ ಕೊಡಿಸ್ಲಿಲ್ವಾ? ಹಾಗೆ ಎಲ್ಲರಿಗೂ ಮನೆ ಕೊಡಿಸ್ತಿನಿ ಸುಮ್ಮನಿರಿ ಎಂದು ಜನರಿಗೆ ಅಶ್ವಾಸನೆ ನೀಡಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:10 am, Mon, 6 March 23

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ