AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಯಿಂದಾಗಿ ತುಂಬಿದ ಕೆರೆ ಕಟ್ಟೆ, ಹಸಿರ ಸೊಬಗಿನಲ್ಲಿ ಹಕ್ಕಿಗಳ ಚಿಲಿಪಿಲಿ ಕಲರವ

ಹಾವೇರಿ: ಹಚ್ಚ ಹಸಿರ ಸೀರೆಯುಟ್ಟು ಕಂಗೊಳಿಸುತ್ತಿರುವ ಪ್ರಕೃತಿ ಮಾತೆ. ಪ್ರಕೃತಿ ಮಾತೆ ಮಡಿಲಲ್ಲ ತುಂಬಿ ತುಳುಕುತ್ತಿರುವ ಕೆರೆ. ಕೆರೆಯ ಸುತ್ತ ಕಾಣೋ ಹಸಿರ ಸಿರಿ. ಹಸಿರ ಮರದಲ್ಲಿ ಹಕ್ಕಿಯೊಂದು ಪುಟ್ಟ ಗೂಡು ಕಟ್ಟಿಕೊಳ್ಳುತ್ತಿದ್ರೆ, ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಓಡಾಡುತ್ತಿರುವ ಗಿಣಿರಾಮ. ಕೆರೆಯ ಕಟ್ಟೆ ಮೇಲೆ ಒಂದಿಷ್ಟು ಹಕ್ಕಿಗಳು ಸಾಲಾಗಿ ಕುಳಿತ್ತಿದ್ರೆ, ಪ್ರಕೃತಿ ಮಾತೆಗೆ ಮತ್ತಷ್ಟು ಮೆರಗು ತಂದಿರುವ ಬಣ್ಣಬಣ್ಣದ ಹೂವುಗಳು. ಎಲ್ಲದ್ದಕ್ಕಿಂತ ಹೆಚ್ಚಾಗಿ ಹಸಿರು ತುಂಬಿದ ಮರಕ್ಕೆ ಬೆಳ್ಳಿ ಚುಕ್ಕಿ ಇಟ್ಟಂತೆ ಭಾಸವಾಗುತ್ತಿರುವ ಬೆಳ್ಳಕ್ಕಿ ಹಿಂಡು. ಅಬ್ಬಬ್ಬ […]

ಮಳೆಯಿಂದಾಗಿ ತುಂಬಿದ ಕೆರೆ ಕಟ್ಟೆ, ಹಸಿರ ಸೊಬಗಿನಲ್ಲಿ ಹಕ್ಕಿಗಳ ಚಿಲಿಪಿಲಿ ಕಲರವ
Follow us
ಸಾಧು ಶ್ರೀನಾಥ್​
|

Updated on:Dec 08, 2019 | 2:09 PM

ಹಾವೇರಿ: ಹಚ್ಚ ಹಸಿರ ಸೀರೆಯುಟ್ಟು ಕಂಗೊಳಿಸುತ್ತಿರುವ ಪ್ರಕೃತಿ ಮಾತೆ. ಪ್ರಕೃತಿ ಮಾತೆ ಮಡಿಲಲ್ಲ ತುಂಬಿ ತುಳುಕುತ್ತಿರುವ ಕೆರೆ. ಕೆರೆಯ ಸುತ್ತ ಕಾಣೋ ಹಸಿರ ಸಿರಿ. ಹಸಿರ ಮರದಲ್ಲಿ ಹಕ್ಕಿಯೊಂದು ಪುಟ್ಟ ಗೂಡು ಕಟ್ಟಿಕೊಳ್ಳುತ್ತಿದ್ರೆ, ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಓಡಾಡುತ್ತಿರುವ ಗಿಣಿರಾಮ. ಕೆರೆಯ ಕಟ್ಟೆ ಮೇಲೆ ಒಂದಿಷ್ಟು ಹಕ್ಕಿಗಳು ಸಾಲಾಗಿ ಕುಳಿತ್ತಿದ್ರೆ, ಪ್ರಕೃತಿ ಮಾತೆಗೆ ಮತ್ತಷ್ಟು ಮೆರಗು ತಂದಿರುವ ಬಣ್ಣಬಣ್ಣದ ಹೂವುಗಳು. ಎಲ್ಲದ್ದಕ್ಕಿಂತ ಹೆಚ್ಚಾಗಿ ಹಸಿರು ತುಂಬಿದ ಮರಕ್ಕೆ ಬೆಳ್ಳಿ ಚುಕ್ಕಿ ಇಟ್ಟಂತೆ ಭಾಸವಾಗುತ್ತಿರುವ ಬೆಳ್ಳಕ್ಕಿ ಹಿಂಡು. ಅಬ್ಬಬ್ಬ ಈ ಪ್ರಕೃತಿ ಮಾತೆಯ ಸೊಬಗನ್ನ ವರ್ಣಿಸೋಕೆ ಸಾಧ್ಯನೇ ಇಲ್ಲ.

ಹಾವೇರಿ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ಎಡೆಬಿಡದೆ ಸುರಿದ ಮಳೆಗೆ ಜಿಲ್ಲೆಯಲ್ಲಿನ ಬಹುತೇಕ ಕೆರೆಗಳೆಲ್ಲಾ ತುಂಬಿಕೊಂಡಿವೆ. ಕೆರೆಗಳು ತುಂಬಿದ್ದರಿಂದ ಕೆರೆಗಳ ಸುತ್ತ ಸುಂದರ ಹಸಿರಿನ ನಿಸರ್ಗವೇ ನಿರ್ಮಾಣವಾಗಿದೆ. ಹಸಿರಿನ ಗುಡ್ಡಗಳಲ್ಲಿ ಬಣ್ಣಬಣ್ಣದ ಹೂವುಗಳು ಅರಳಿ ನಿಂತಿವೆ. ಅದ್ರಲ್ಲೂ ಗೂಡು ಕಟ್ಟುತ್ತಿರೋ ಹಕ್ಕಿ, ಗಿಳಿಗಳ ಓಡಾಟ, ಬೀಡು ಬಿಟ್ಟಿರೋ ಬೆಳ್ಳಕ್ಕಿಗಳ ಹಿಂಡು ಹೀಗೆ ಸುಂದರ ವಾತಾವರಣವೇ ನಿರ್ಮಾಣವಾಗಿದೆ.

ಕೆರೆ ನೀರಿನಿಂದ ಕೆರೆಯ ಸುತ್ತಮುತ್ತ ಸುಂದರ ಹಸಿರ ಸೊಬಗು ಮೈದಳೆದು ನಿಂತಿದೆ. ಹಕ್ಕಿಗಳಿಗಂತೂ ಈ ಸುಂದರ ಹಸಿರ ನಿಸರ್ಗ ಹೇಳಿ ಮಾಡಿಸಿದ ತಾಣದಂತಿವೆ. ಪಕ್ಷಿಗಳು ಸಂತಾನೋತ್ಪತ್ತಿಗೆ ಗೂಡು ಕಟ್ಟುತ್ತಾ, ಮರಗಳ ಮೇಲೆ ಸ್ವಚ್ಛಂದವಾಗಿ ಹಾರಾಡಿಕೊಂಡಿವೆ. ಇನ್ನು ಬೆಳ್ಳಕ್ಕಿಗಳ ಹಿಂಡು ಕೆರೆಯ ಸುತ್ತಮುತ್ತಲಿನ ಮರಗಳ ಮೇಲೆಯೇ ಬಿಡಾರ ಹೂಡಿವೆ.

Published On - 2:05 pm, Sun, 8 December 19

ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ