AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೀಕರ ಮಳೆಗೆ ದುರ್ಗದಲ್ಲಿ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲ ಕುಸಿತ, ಅಚ್ಚರಿ ಮೂಡಿಸಿದ ಗರ್ಭಗುಡಿ ವಿಗ್ರಹ

ಚಿತ್ರದುರ್ಗ: ಎಲ್ಲೋ ದೂರದ ಕೇದಾರನಾಥ ಅಂತಹ ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿ ಬೆಟ್ಟಗಳು ಕುಸಿದವಂತೆ, ದೇಗುಲಗಳು ಕೊಚ್ಚಿ ಹೋದವಂತೆ, ದೊಡ್ಡದಾದ ಗುಡ್ಡ ಕುಸಿತವಾದವಂತೆ ಅಂತೆಲ್ಲಾ ನಾವು ಕೇಳುತ್ತಿದ್ದೆವು. ಆದರೆ ಈಗ ನಮ್ಮ ಮಧ್ಯೆಯೇ ಇಂತಹ ರುದ್ರ ಭಯಂಕರ ದೃಶ್ಯವನ್ನು ಕಾಣಬೇಕಾಯಿತು, ಅನುಭವಿಸುವಂತೆಯೋ ಆಗಿದೆ. ರಾಜ್ಯದಲ್ಲಿ ಈ ವರ್ಷ ಹಿಂದೆಂದು ಸುರಿಯದ ಭೀಕರ ಮಳೆಯೇ ಇದಕೆಲ್ಲ ಕಾರಣವಾಗಿದೆ. ಕೇದಾರನಾಥದಲ್ಲಿ ಅಲ್ಲ, ಇಲ್ಲೇ ದುರ್ಗದ ಬಳಿ ಮಳೆಗೆ ಕೊಚ್ಚಿಹೋದ ಪುರಾತನ ದೇವಸ್ಥಾನ ಬರದ ನಾಡು ಚಿತ್ರದುರ್ಗದಲ್ಲಿ ಒಂದೇ ಸಮನೆ ಮಳೆಯಾಗುತ್ತಿದ್ದು ಬೃಹತ್ […]

ಭೀಕರ ಮಳೆಗೆ ದುರ್ಗದಲ್ಲಿ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲ ಕುಸಿತ, ಅಚ್ಚರಿ ಮೂಡಿಸಿದ ಗರ್ಭಗುಡಿ ವಿಗ್ರಹ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 22, 2019 | 3:57 PM

Share

ಚಿತ್ರದುರ್ಗ: ಎಲ್ಲೋ ದೂರದ ಕೇದಾರನಾಥ ಅಂತಹ ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿ ಬೆಟ್ಟಗಳು ಕುಸಿದವಂತೆ, ದೇಗುಲಗಳು ಕೊಚ್ಚಿ ಹೋದವಂತೆ, ದೊಡ್ಡದಾದ ಗುಡ್ಡ ಕುಸಿತವಾದವಂತೆ ಅಂತೆಲ್ಲಾ ನಾವು ಕೇಳುತ್ತಿದ್ದೆವು. ಆದರೆ ಈಗ ನಮ್ಮ ಮಧ್ಯೆಯೇ ಇಂತಹ ರುದ್ರ ಭಯಂಕರ ದೃಶ್ಯವನ್ನು ಕಾಣಬೇಕಾಯಿತು, ಅನುಭವಿಸುವಂತೆಯೋ ಆಗಿದೆ. ರಾಜ್ಯದಲ್ಲಿ ಈ ವರ್ಷ ಹಿಂದೆಂದು ಸುರಿಯದ ಭೀಕರ ಮಳೆಯೇ ಇದಕೆಲ್ಲ ಕಾರಣವಾಗಿದೆ.

ಕೇದಾರನಾಥದಲ್ಲಿ ಅಲ್ಲ, ಇಲ್ಲೇ ದುರ್ಗದ ಬಳಿ ಮಳೆಗೆ ಕೊಚ್ಚಿಹೋದ ಪುರಾತನ ದೇವಸ್ಥಾನ ಬರದ ನಾಡು ಚಿತ್ರದುರ್ಗದಲ್ಲಿ ಒಂದೇ ಸಮನೆ ಮಳೆಯಾಗುತ್ತಿದ್ದು ಬೃಹತ್ ಬೆಟ್ಟವೇ ಕುಸಿದಿದೆ. ಅದರ ಜೊತೆಗೆ ಬೆಟ್ಟದಲ್ಲಿದ್ದ ಪುರಾತನ ದೇಗುಲವೂ ಕುಸಿದು ಬಿದ್ದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ರಾತ್ರಿ‌ ಧಾರಾಕಾರ ಮಳೆ ಸುರಿದ ಹಿನ್ನೆಲೆ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದ ಬಳಿಯ ಐತಿಹಾಸಿಕ ಬೆಟ್ಟ ಕುಸಿತವಾಗಿದ್ದು, ಬೆಟ್ಟದಲ್ಲಿನ ಇತಿಹಾಸ ಪ್ರಸಿದ್ಧ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲ ಕುಸಿತವಾಗಿದೆ. ಆದರೆ ಬೆಟ್ಟ ಕುಸಿತದ ನಡುವೆ ಅಚ್ಚರಿ ರೀತಿಯಲ್ಲಿ ದೇಗುಲದ ಗರ್ಭಗುಡಿಯಲ್ಲಿರುವ ರಂಗನಾಥಸ್ವಾಮಿ ವಿಗ್ರಹ ಮಾತ್ರ ಉಳಿದುಕೊಂಡಿದೆ. ಬೆಟ್ಟದ ಕೆಳಭಾಗದಲ್ಲಿನ ಹನುಮಪ್ಪ ದೇಗುಲಕ್ಕೂ ಹಾನಿಯಾಗಿದೆ. ಕುಸಿದ ದೇಗುಲ ನೋಡಲು ಊರಿನ ಜನ ಕುತೂಹಲದಿಂದ ಬೆಟ್ಟದತ್ತ ತೆರಳುತ್ತಿದ್ದಾರೆ.

https://www.instagram.com/p/B36ilQ3Hpzm/?utm_source=ig_web_copy_link

Published On - 2:02 pm, Tue, 22 October 19

Follow Us
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ