
ಹುಬ್ಬಳ್ಳಿ, ಏಪ್ರಿಲ್ 30: ಕೇಂದ್ರ ಸರ್ಕಾರದ (Central Government) ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ (Congress) ನಾಯಕರು ಗುರುವಾರ (ಮೆ.01) ರಂದು ಹುಬ್ಬಳ್ಳಿಯಲ್ಲಿ (Hubballi) ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಅವರು ಬಹಿರಂಗ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಮತ್ತು ಹಾಗೂ ಕಾಂಗ್ರೆಸ್ ಪಕ್ಷವನ್ನು ಪ್ರಹ್ಲಾದ್ ಜೋಶಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
– ಜನಸಾಮಾನ್ಯರ ಮೇಲೆ 48 ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಿದ್ದಿರುವ ಬರೆ ಮರೆಸುವ ಪ್ರತಿಭಟನೆಯೇ?
– ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಈ ಪ್ರತಿಭಟನೆಯು?
– ರಾಜ್ಯದ ಆರ್ಥಿಕ ದುರ್ವ್ಯವಸ್ಥೆಯನ್ನು ಜನರಿಂದ ಮರೆಮಾಚಲು ಈ ಪ್ರತಿಭಟನೆ?
– ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ, ಅಭಿವೃಧಿಯೆ ಕಾಣದೇ ರಾಜ್ಯವನ್ನು ಅಧೋಗತಿಗೆ ತಳ್ಳಿದ ಪ್ರತೀಕವೇ ಈ ಪ್ರತಿಭಟನೆ?
– ಆರ್ಥಿಕವಾಗಿ ಸದೃಢವಾಗಿದ್ದ ರಾಜ್ಯವನ್ನು ಇಂದು ₹5.5 ಲಕ್ಷ ಕೋಟಿ ಸಾಲದ ಹೊರೆಯಲ್ಲಿ ದಬ್ಬಿರುವ ಸಾಧನೆಯ ಪ್ರದರ್ಶನವೇ ಈ ಪ್ರತಿಭಟನೆ?
ಮೂರು ಬಾರಿ ಹಾಲಿನ ದರ ₹9 ಏರಿಕೆ; ಮೊದಲು ₹2, ಎರಡನೇ ಬಾರಿ ₹3 , ಮೂರನೇ ಬಾರಿ ₹4 ಹೆಚ್ಚಿಸಿ ರೈತರಿಗೆ ಕೊಟ್ಟದ್ದು ಚೊಂಬು.
ಡಿಸೇಲ್ ಬೆಲೆ ₹ 2 ಹೆಚ್ಚಳ
ಬಸ್ ಪ್ರಯಾಣ ದರ ಶೇ.20ರಷ್ಟು ಅಧಿಕಗೊಳಿಸಿ ಜನರಿಗೆ ದುಬಾರಿಯಾದ ಕಾಂಗ್ರೆಸ್ ಸರ್ಕಾರ.
₹ 10 ಇದ್ದ ಪಹಣಿ ಶುಲ್ಕ ಒಮ್ಮೆಲೇ ₹25ಗೆ ಏರಿಕೆ ಮಾಡಿ ರೈತ ವಿರೋಧಿ ನಡೆ.
ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಬರೋಬ್ಬರಿ ₹ 200ರವರೆಗೆ ಹೆಚ್ಚಳ
ವಿದ್ಯುತ್ ಪ್ರತಿ ಯುನಿಟ್ 36 ಪೈಸೆ ಹೆಚ್ಚಿಸಿ ಜನರಿಗೆ ಕರೆಂಟ್ ಶಾಕ್ ಕೊಟ್ಟ ಸರ್ಕಾರ.
₹ 20 ಇದ್ದ ಬಾಂಡ್ ಪೇಪರ್ ₹ 100ಗೆ ಏರಿಕೆ; ಮುದ್ರಾಂಕ ಶುಲ್ಕ ₹ 500 ಕ್ಕೇ ಹೆಚ್ಚಳ.
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ₹75ರಿಂದ 80 ಸಾವಿರ ಕೋಟಿ ಕರ ವಸೂಲಿ.
ಮನೆಯ ಕಸಕ್ಕೆ ₹400 ರವರೆಗೆ ಶುಲ್ಕ ಹೆಚ್ಚಳ; 4 ಸಾವಿರ ಚದರಡಿ ಮನೆಗೆ ಮಾಸಿಕ ₹400ರಂತೆ ವಾರ್ಷಿಕ ₹4,800 ಶುಲ್ಕ ಹೆಚ್ಚಳ.
ಲಿಫ್ಟ್, ಜನರೇಟರ್ ಪರಿಶೀಲನೆ ಮತ್ತು ರಿನಿವಲ್ಗೆ ₹800 ಇದ್ದ ದರ ಇದೀಗ ₹ 5,000-₹8,000 ವರೆಗೆ ಹೆಚ್ಚಳ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಮಧ್ಯಂತರ ತಡೆ
– ಭಾರತದ ಇತಿಹಾಸದಲ್ಲಿ ಸಂವಿಧಾನದ ವಿಧಿ 356 ಅನ್ನು 125ಕ್ಕೂ ಹೆಚ್ಚು ಬಾರಿ ಕಾಂಗ್ರೆಸ್ ಪಕ್ಷ ದುರುಪಯೋಗಿಸಿಕೊಂಡಿದೆ.
– ಇಂದಿರಾ ಗಾಂಧಿಯವರ ಕಾಲದಲ್ಲಿ 1966 ರಿಂದ 1977 ರವರೆಗೆ ಸುಮಾರು 50 ಬಾರಿ ಈ ವಿಧಿಯನ್ನು ಬಳಸಿದ್ದಾರೆ ಬಹುತೇಕ ಬೇರೆ ಪಕ್ಷದ ರಾಜ್ಯ ಸರ್ಕಾರಗಳನ್ನು ಕೆಡವಿದ್ದಾರೆ.
– ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ 1954 ಬಂಡಾರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲಿಸಿ ಅವಮಾನ
– ನಾರಾಯಣ ಎಸ್ ಕಜೋರ್ಲ್ಕರ್ ಗೆ 1970ರಲ್ಲಿ ಬಾಬಾ ಸಾಹೇಬರನ್ನು ಅವಮಾನಿಸಲೆಂದೇ ಪದ್ಮಭೂಷಣ ಪ್ರಶಸ್ತಿ
– ಬಾಬಾ ಸಾಹೇಬರನ್ನು ಭಾರತ ರತ್ನ ಪುರಸ್ಕಾರಕ್ಕೆ ಕಾಂಗ್ರೆಸ್ ಪರಿಗಣಿಸಲೇ ಇಲ್ಲ. ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಅಂಬೇಡ್ಕರ್ ರವರಿಗೆ 1990 ರಲ್ಲಿ ಭಾರತ್ ರತ್ನ.
– ಒಂದು ಸಮುದಾಯಕ್ಕೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದಿದ್ದು ಉಪ ಮುಖ್ಯಮಂತ್ರಿಗಳು
– ಸಂವಿಧಾನದ ಆಶಯ ವಿರೋಧಿಸಿ ಒಂದು ಸಮುದಾಯಕ್ಕಾಗಿ ಮೀಸಲಾತಿ
– ಉಪ ಮುಖ್ಯಮಂತ್ರಿಗಳ ಧಮ್ಕಿ ರಾಜಕಾರಣವನ್ನು ಏನೆಂದು ಹೇಳಬೇಕು
– ವಿದೇಶಿ ನೆಲದಲ್ಲಿ ಭಾರತದ ವಿರುದ್ಧ ಮಾತನಾಡುವ ಕಾಂಗ್ರೆಸ್ ಹಾಗೂ ಅವರ ಪಕ್ಷದ ನಾಯಕರು ಸಂವಿಧಾನಕ್ಕೆ ಅಗೌರವ ತೋರುತಿಲ್ಲವೇ
– ಪಾಕಿಸ್ತಾನದ ವಿರುದ್ದ ಯುದ್ದದ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸಚಿವರುಗಳು ಪಾಕಿಸ್ತಾನ ಮಾತನಾಡುವ ರೀತಿಯಲ್ಲೇ ಮಾತನಾಡುತ್ತಾರೆ.
– ವಾಲ್ಮಿಕಿ ಅಭಿವೃದ್ದಿ ನಿಗಮದ ಹಗರಣ
– SC/ST ಯೋಜನೆಗಳಿಗೆ ಮೀಸಲಾದ ರೂ. 8,094 ದುರ್ಬಳಕೆ
– ಮುಡಾ ಹಗರಣ
– ಟೆಂಡರ್ ಮಾಫಿಯಾ -ಶೇ 60% ಕಮಿಷನ್.
– ಸ್ಮಾರ್ಟ್ ಮೀಟರ್ ಹಗರಣ
– ಪಿಎಸ್ಐ ನೇಮಕಾತಿ ಹಗರಣ
– ಮೂಡ ಹಗರಣ
– ಯೋಜನೆಗಳ ಅನುದಾನ ಬಿಡುಗಡೆಯಲ್ಲಿ ಹಗರಣ
– ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಗಳ ವಸ್ತುಗಳ ಖರೀದಿಯಲ್ಲಿ ಅಕ್ರಮ.
– ಔಷಧ ಖರೀದಿಯಲ್ಲಿ ಬಾರಿ ಗೋಲ್ಮಾಲ್- ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರದಲ್ಲಿ ಖರೀದಿ
– ವಾಲ್ಮಿಕಿ ಅಭಿವೃದ್ದಿ ನಿಗಮದ ಹಗರಣ
– SC/ST ಯೋಜನೆಗಳಿಗೆ ಮೀಸಲಾದ ರೂ. 8,094 ದುರ್ಬಳಕೆ
– ಮುಡಾ ಹಗರಣ
– ಟೆಂಡರ್ ಮಾಫಿಯಾ -ಶೇ 60% ಕಮಿಷನ್.
– ಸ್ಮಾರ್ಟ್ ಮೀಟರ್ ಹಗರಣ
– ಪಿಎಸ್ಐ ನೇಮಕಾತಿ ಹಗರಣ
– ಮೂಡ ಹಗರಣ
– ಯೋಜನೆಗಳ ಅನುದಾನ ಬಿಡುಗಡೆಯಲ್ಲಿ ಹಗರಣ
– ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಗಳ ವಸ್ತುಗಳ ಖರೀದಿಯಲ್ಲಿ ಅಕ್ರಮ.
– ಔಷಧ ಖರೀದಿಯಲ್ಲಿ ಬಾರಿ ಗೋಲ್ಮಾಲ್- ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರದಲ್ಲಿ ಖರೀದಿ
– ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ, ಠಾಣೆಯ ಮೇಲೆ ದಾಳಿ.
– ಮೈಸೂರಿನ ಉದಯಗಿರಿ, ಬೆಂಗಳೂರಿನ ಕೆಜೆ ಹಳ್ಳಿಯಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರು ಅಮಾಯಕರು. ಅವರನ್ನು ಬಂಧಿಸಿದ ಪೊಲೀಸರನ್ನೇ ದೂರಿದ ಕಾಂಗ್ರಸ್ ಸಚಿವರು.
– ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಕೇಸ್ ವಾಪಸ್- ಸಚಿವ ಸಂಪುಟದ ನಿರ್ಧಾರ. ಮತಾಂಧತೆಯ ಪ್ರದರ್ಶನ- ತುಷ್ಟಿಕರಣ ನೀತಿಯನ್ನು ತೋರಿಸುತ್ತದೆ.
– ಸೈಬರ್ ಅಪರಾಧಗಳು 2023 ರಿಂದ ಶೇ. 30 ರಷ್ಟು ಹೆಚ್ಚಾಗಿದೆ.
– ರಾಜ್ಯದಲ್ಲಿ ಮಿತಿ ಮೀರಿದ ದರೋಡೆ ಮತ್ತು ಕಳ್ಳತನದ ಪ್ರಕರಣಗಳು, ಗುಂಡಾಗಳ ಗುಂಪುಗಳು ಮತ್ತು ರೌಡಿಗಳ ಚಟುವಟಿಕೆ ಹೆಚ್ಚಾಗಿದೆ. ಆದರೂ ಮೌನವೇಕೆ?
ನೀವು ಮತ್ತು ನಿಮ್ಮ ಪಕ್ಷದ ಮುಖಂಡರ ವರ್ತನೆಯಿಂದಾಗಿ ರಾಜ್ಯದ ಅಧಿಕಾರಿಗಳ ಮನೋಬಲ ಕುಗ್ಗುತ್ತಿದೆ. ಅವರ ನೋವನ್ನು ಮರೆಮಾಚಲು ಈ ಪ್ರತಿಭಟನೆಯೇ?
– ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಎಎಸ್ಪಿಗೆ ಹೊಡೆಯಲು ಮುಂದಾಗಿದ್ದು ಸಿಎಂ ಸಿದ್ದರಾಮಯ್ಯ.
– ಅಧಿಕಾರಿಗಳ ಮೇಲೆ ದರ್ಪ ತೋರುವುದು
– ನಿಮ್ಮ ನಡೆಗೆ ಸರ್ಕಾರಿ ನೌಕರರು,…
— Pralhad Joshi (@JoshiPralhad) April 30, 2025
– ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಎಎಸ್ಪಿಗೆ ಹೊಡೆಯಲು ಮುಂದಾಗಿದ್ದು ಸಿಎಂ ಸಿದ್ದರಾಮಯ್ಯ.
– ಅಧಿಕಾರಿಗಳ ಮೇಲೆ ದರ್ಪ ತೋರುವುದು.
– ನಿಮ್ಮ ನಡೆಗೆ ಸರ್ಕಾರಿ ನೌಕರರು, ಅಧಿಕಾರಿಗಳ ನೈತಿಕತೆ ಕುಗ್ಗಿಹೋಗಿದೆ.
– ನಿಮ್ಮ ಪಕ್ಷದ ನಾಯಕರು ಅಧಿಕಾರಿಗಳು ಹಾಗೂ ಪೊಲೀಸರ ಜೊತೆ ನಡೆದುಕೊಳ್ಳುವ ರೀತಿ ಬೇಸರ ತರುತ್ತಿದೆ.
Published On - 6:09 pm, Wed, 30 April 25