AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹು-ಧಾ ಪಾಲಿಕೆಗೆ ಮತ್ತೆ ತಲೆನೋವು ತಂದಿರುವ ನಕಲಿ ಫ್ಲ್ಯಾಟ್ ಹಾವಳಿ

ಹುಬ್ಬಳ್ಳಿ: ನಾಲ್ಕೈದು ತಿಂಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ತಲೆನೋವಾಗಿದ್ದ ನಕಲಿ ಫ್ಲ್ಯಾಟ್ ಹಾವಳಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಹಳೇ ಹುಬ್ಬಳ್ಳಿ ಭಾಗದಲ್ಲಿ ರಾಜಕಾಲುವೆ ಮತ್ತು ಪಾಲಿಕೆ ಜಾಗವನ್ನ ಸಾರ್ವಜನಿಕರಿಗೆ ಮಾರಿರೋ ಶಾಕಿಂಗ್ ಸುದ್ದಿ ನಡುವೆ, ಪಾಲಿಕೆ ಕೈಗೊಂಡಿರುವ ನಿರ್ಧಾರ ಜನರ ನಿದ್ದೆಗೆಡಿಸಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೇಣು ಜಾಗಕ್ಕೂ ಬಂಗಾರದ ಬೆಲೆ. ಹೀಗಾಗಿ ಇಲ್ಲಿ ಭೂಗಳ್ಳರು ದುರ್ಬೀನು ಹಾಕಿಕೊಂಡು ಕೂತಿರ್ತಾರೆ. ಸ್ವಲ್ಪ ಜಾಗ ಸಿಕ್ಕರೂ ಬೇಲಿ ಹಾಕೋರೆ ಜಾಸ್ತಿ. ಅದು ಸರ್ಕಾರದ್ದಾಗಿರಲಿ ಅಥವಾ ಖಾಸಗಿ ಆಸ್ತಿಯೇ […]

ಹು-ಧಾ ಪಾಲಿಕೆಗೆ ಮತ್ತೆ ತಲೆನೋವು ತಂದಿರುವ ನಕಲಿ ಫ್ಲ್ಯಾಟ್ ಹಾವಳಿ
ಸಾಧು ಶ್ರೀನಾಥ್​
|

Updated on: Dec 02, 2019 | 2:43 PM

Share

ಹುಬ್ಬಳ್ಳಿ: ನಾಲ್ಕೈದು ತಿಂಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ತಲೆನೋವಾಗಿದ್ದ ನಕಲಿ ಫ್ಲ್ಯಾಟ್ ಹಾವಳಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಹಳೇ ಹುಬ್ಬಳ್ಳಿ ಭಾಗದಲ್ಲಿ ರಾಜಕಾಲುವೆ ಮತ್ತು ಪಾಲಿಕೆ ಜಾಗವನ್ನ ಸಾರ್ವಜನಿಕರಿಗೆ ಮಾರಿರೋ ಶಾಕಿಂಗ್ ಸುದ್ದಿ ನಡುವೆ, ಪಾಲಿಕೆ ಕೈಗೊಂಡಿರುವ ನಿರ್ಧಾರ ಜನರ ನಿದ್ದೆಗೆಡಿಸಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೇಣು ಜಾಗಕ್ಕೂ ಬಂಗಾರದ ಬೆಲೆ. ಹೀಗಾಗಿ ಇಲ್ಲಿ ಭೂಗಳ್ಳರು ದುರ್ಬೀನು ಹಾಕಿಕೊಂಡು ಕೂತಿರ್ತಾರೆ. ಸ್ವಲ್ಪ ಜಾಗ ಸಿಕ್ಕರೂ ಬೇಲಿ ಹಾಕೋರೆ ಜಾಸ್ತಿ. ಅದು ಸರ್ಕಾರದ್ದಾಗಿರಲಿ ಅಥವಾ ಖಾಸಗಿ ಆಸ್ತಿಯೇ ಆಗಿರಲಿ. ಇನ್ನು ನಿವೇಶನದ ಪಕ್ಕ ರಾಜಕಾಲುವೆ ಸಿಕ್ಕರೆ ಬಿಡ್ತಾರಾ ಹೇಳಿ. ಇಲ್ಲೂ ಹಾಗೇ ಆಗಿರೋದು. ಯಾವುದೇ ಆಲೋಚನೆ ಇಲ್ಲದೆ ರಾಜಕಾಲುವೆ ಒತ್ತುವರಿ ಮಾಡಿಕೊಂಡವರಿಗೆ ಈಗ ಸಂಕಟ ಶುರುವಾಗಿದೆ.

ಮನೆ ಖಾಲಿ ಮಾಡಲು ಪಾಲಿಕೆ ಸೂಚನೆ: 3 ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಯಾರದ್ದೋ ಜಾಗದಲ್ಲಿ ನೆಲಸಿದ್ದ 50ಕ್ಕೂ ಹೆಚ್ಚು ಕುಟುಂಬಗಳನ್ನ ಕೋರ್ಟ್​ ಆದೇಶದ ಮೇರೆಗೆ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಖಾಲಿ ಮಾಡಿಸಿತ್ತು. ಎಲ್ಲರೂ ದುಡ್ಡು ಕೊಟ್ಟು ಜಾಗ ಖರೀದಿ ಮಾಡಿದ್ದರು. ಆದ್ರೆ ಜಾಗದ ಮೂಲ ಮಾಲೀಕರೇ ಬೇರೆಯವರಾಗಿದ್ದರು. ಇಂತಹದ್ದೇ ಮತ್ತೊಂದು ಕೇಸ್ ಹುಬ್ಬಳ್ಳಿಯಲ್ಲಿ ನಡೆದಿದೆ.

ಪಾಂಡುರಂಗ ಕಾಲೋನಿ ನಿವಾಸಿಗಳಿಗೆ ಈಗಾಗ್ಲೇ ಪಾಲಿಕೆ ಆಯುಕ್ತರು ಮನೆ ತೆರವು ಮಾಡಲು ನೋಟಿಸ್ ನೀಡಿದ್ದಾರೆ. ರಾಜಕಾಲುವೆಯಲ್ಲಿ ವಾಸವಿದ್ದೀರಿ ಅಂತಾ ಮನೆ ಖಾಲಿ ಮಾಡೋಕೆ ಸೂಚನೆ ನೀಡಲಾಗಿದೆ. ಇದು ಸ್ಥಳೀಯರನ್ನ ಕಂಗಾಲಾಗುವಂತೆ ಮಾಡಿದೆ.

ಅತಿಕ್ರಮವಾದ ಮನೆ ತೆರೆವಿಗೆ ಪಾಲಿಕೆ ಸಿದ್ಧತೆ: 35 ವರ್ಷಗಳ ಹಿಂದೆ ಪಾಲಿಕೆ 24 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಜಾಗ ನೀಡಿತ್ತಂತೆ. ಸದ್ಯ ಅದೇ ನಿವೇಶನಗಳು 90 ಮನೆಗಳಾಗಿ ಪರಿವರ್ತನೆಯಾಗಿವೆ ಅನ್ನೋದು ಸ್ಥಳೀಯರ ವಾದ. ಆದರೆ ಕೊಟ್ಟ ಜಾಗಕ್ಕಿಂತ ಹೆಚ್ಚು ಅತಿಕ್ರಮಣವಾಗಿದ್ದಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಟೋಪಿ ಹಾಕಿದ್ದಾರೆ ಅನ್ನೋದು ಪಾಲಿಕೆಯ ವಾದ. ಸದ್ಯ ಸರ್ವೆ ಕಾರ್ಯ ಮುಗಿದಿದ್ದು, ಅತಿಕ್ರಮವಾದ ಮನೆ ತೆರೆವಿಗೆ ಸೂಚಿಸಲಾಗಿದೆ. ಆದ್ರೆ ಕೆಲವೊಬ್ಬರು ಮನೆ ಕಟ್ಟಿ 10 ವರ್ಷವೂ ಪೂರೈಸಿಲ್ಲ. ಬ್ಯಾಂಕ್ ಲೋನ್ ಕೂಡಾ ಇದೆ. ಇಂತಹ ಹೊತ್ತಲ್ಲಿ ಮನೆ ಡೆಮಾಲಿಷನ್ ಮಾಡಿದ್ರೆ ಹೇಗೆ ಅಂತಾ ಗೋಳಾಡುತ್ತಿದ್ದಾರೆ.

ಸದ್ಯ ಪಾಂಡುರಂಗ ಕಾಲೋನಿಯ 90 ಕುಟುಂಬಗಳು ನಿದ್ದೆಯಿಲ್ಲದೆ ರಾತ್ರಿ ಕಳೀತಿವೆ. ಯಾವಾಗ ತಮ್ಮ ಮನೆ ಮುಂದೆ ಜೆಸಿಬಿ ಬಂದು ನಿಲ್ಲುತ್ತೋ ಅನ್ನೋ ಭಯ ಶುರುವಾಗಿದೆ. ಇಷ್ಟಕ್ಕೆಲ್ಲಾ ಕಾರಣ ಈ ಬಾರಿಯ ಭೀಕರ ಮಳೆ. ಮಳೆಯಿಂದ ರಾಜಕಾಲುವೆ ತುಂಬಿ ಹಳೇ ಹುಬ್ಬಳ್ಳಿ ಅರ್ಧ ಮುಳುಗಿತ್ತು. ಒತ್ತುವರಿಯಿಂದಲೇ ಹೀಗಾಯ್ತು ಅಂತಾ ಪಾಲಿಕೆ ಸರ್ವೆ ಕಾರ್ಯ ಆರಂಭಿಸಿತ್ತು, ಅಂದಿನಿಂದಲೂ ಒಂದಲ್ಲಾ ಒಂದು ಗೋಲ್​ಮಾಲ್ ಹೊರಬೀಳುತ್ತಿವೆ.

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ