Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹು-ಧಾ ಪಾಲಿಕೆಗೆ ಮತ್ತೆ ತಲೆನೋವು ತಂದಿರುವ ನಕಲಿ ಫ್ಲ್ಯಾಟ್ ಹಾವಳಿ

ಹುಬ್ಬಳ್ಳಿ: ನಾಲ್ಕೈದು ತಿಂಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ತಲೆನೋವಾಗಿದ್ದ ನಕಲಿ ಫ್ಲ್ಯಾಟ್ ಹಾವಳಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಹಳೇ ಹುಬ್ಬಳ್ಳಿ ಭಾಗದಲ್ಲಿ ರಾಜಕಾಲುವೆ ಮತ್ತು ಪಾಲಿಕೆ ಜಾಗವನ್ನ ಸಾರ್ವಜನಿಕರಿಗೆ ಮಾರಿರೋ ಶಾಕಿಂಗ್ ಸುದ್ದಿ ನಡುವೆ, ಪಾಲಿಕೆ ಕೈಗೊಂಡಿರುವ ನಿರ್ಧಾರ ಜನರ ನಿದ್ದೆಗೆಡಿಸಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೇಣು ಜಾಗಕ್ಕೂ ಬಂಗಾರದ ಬೆಲೆ. ಹೀಗಾಗಿ ಇಲ್ಲಿ ಭೂಗಳ್ಳರು ದುರ್ಬೀನು ಹಾಕಿಕೊಂಡು ಕೂತಿರ್ತಾರೆ. ಸ್ವಲ್ಪ ಜಾಗ ಸಿಕ್ಕರೂ ಬೇಲಿ ಹಾಕೋರೆ ಜಾಸ್ತಿ. ಅದು ಸರ್ಕಾರದ್ದಾಗಿರಲಿ ಅಥವಾ ಖಾಸಗಿ ಆಸ್ತಿಯೇ […]

ಹು-ಧಾ ಪಾಲಿಕೆಗೆ ಮತ್ತೆ ತಲೆನೋವು ತಂದಿರುವ ನಕಲಿ ಫ್ಲ್ಯಾಟ್ ಹಾವಳಿ
Follow us
ಸಾಧು ಶ್ರೀನಾಥ್​
|

Updated on: Dec 02, 2019 | 2:43 PM

ಹುಬ್ಬಳ್ಳಿ: ನಾಲ್ಕೈದು ತಿಂಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ತಲೆನೋವಾಗಿದ್ದ ನಕಲಿ ಫ್ಲ್ಯಾಟ್ ಹಾವಳಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಹಳೇ ಹುಬ್ಬಳ್ಳಿ ಭಾಗದಲ್ಲಿ ರಾಜಕಾಲುವೆ ಮತ್ತು ಪಾಲಿಕೆ ಜಾಗವನ್ನ ಸಾರ್ವಜನಿಕರಿಗೆ ಮಾರಿರೋ ಶಾಕಿಂಗ್ ಸುದ್ದಿ ನಡುವೆ, ಪಾಲಿಕೆ ಕೈಗೊಂಡಿರುವ ನಿರ್ಧಾರ ಜನರ ನಿದ್ದೆಗೆಡಿಸಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೇಣು ಜಾಗಕ್ಕೂ ಬಂಗಾರದ ಬೆಲೆ. ಹೀಗಾಗಿ ಇಲ್ಲಿ ಭೂಗಳ್ಳರು ದುರ್ಬೀನು ಹಾಕಿಕೊಂಡು ಕೂತಿರ್ತಾರೆ. ಸ್ವಲ್ಪ ಜಾಗ ಸಿಕ್ಕರೂ ಬೇಲಿ ಹಾಕೋರೆ ಜಾಸ್ತಿ. ಅದು ಸರ್ಕಾರದ್ದಾಗಿರಲಿ ಅಥವಾ ಖಾಸಗಿ ಆಸ್ತಿಯೇ ಆಗಿರಲಿ. ಇನ್ನು ನಿವೇಶನದ ಪಕ್ಕ ರಾಜಕಾಲುವೆ ಸಿಕ್ಕರೆ ಬಿಡ್ತಾರಾ ಹೇಳಿ. ಇಲ್ಲೂ ಹಾಗೇ ಆಗಿರೋದು. ಯಾವುದೇ ಆಲೋಚನೆ ಇಲ್ಲದೆ ರಾಜಕಾಲುವೆ ಒತ್ತುವರಿ ಮಾಡಿಕೊಂಡವರಿಗೆ ಈಗ ಸಂಕಟ ಶುರುವಾಗಿದೆ.

ಮನೆ ಖಾಲಿ ಮಾಡಲು ಪಾಲಿಕೆ ಸೂಚನೆ: 3 ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಯಾರದ್ದೋ ಜಾಗದಲ್ಲಿ ನೆಲಸಿದ್ದ 50ಕ್ಕೂ ಹೆಚ್ಚು ಕುಟುಂಬಗಳನ್ನ ಕೋರ್ಟ್​ ಆದೇಶದ ಮೇರೆಗೆ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಖಾಲಿ ಮಾಡಿಸಿತ್ತು. ಎಲ್ಲರೂ ದುಡ್ಡು ಕೊಟ್ಟು ಜಾಗ ಖರೀದಿ ಮಾಡಿದ್ದರು. ಆದ್ರೆ ಜಾಗದ ಮೂಲ ಮಾಲೀಕರೇ ಬೇರೆಯವರಾಗಿದ್ದರು. ಇಂತಹದ್ದೇ ಮತ್ತೊಂದು ಕೇಸ್ ಹುಬ್ಬಳ್ಳಿಯಲ್ಲಿ ನಡೆದಿದೆ.

ಪಾಂಡುರಂಗ ಕಾಲೋನಿ ನಿವಾಸಿಗಳಿಗೆ ಈಗಾಗ್ಲೇ ಪಾಲಿಕೆ ಆಯುಕ್ತರು ಮನೆ ತೆರವು ಮಾಡಲು ನೋಟಿಸ್ ನೀಡಿದ್ದಾರೆ. ರಾಜಕಾಲುವೆಯಲ್ಲಿ ವಾಸವಿದ್ದೀರಿ ಅಂತಾ ಮನೆ ಖಾಲಿ ಮಾಡೋಕೆ ಸೂಚನೆ ನೀಡಲಾಗಿದೆ. ಇದು ಸ್ಥಳೀಯರನ್ನ ಕಂಗಾಲಾಗುವಂತೆ ಮಾಡಿದೆ.

ಅತಿಕ್ರಮವಾದ ಮನೆ ತೆರೆವಿಗೆ ಪಾಲಿಕೆ ಸಿದ್ಧತೆ: 35 ವರ್ಷಗಳ ಹಿಂದೆ ಪಾಲಿಕೆ 24 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಜಾಗ ನೀಡಿತ್ತಂತೆ. ಸದ್ಯ ಅದೇ ನಿವೇಶನಗಳು 90 ಮನೆಗಳಾಗಿ ಪರಿವರ್ತನೆಯಾಗಿವೆ ಅನ್ನೋದು ಸ್ಥಳೀಯರ ವಾದ. ಆದರೆ ಕೊಟ್ಟ ಜಾಗಕ್ಕಿಂತ ಹೆಚ್ಚು ಅತಿಕ್ರಮಣವಾಗಿದ್ದಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಟೋಪಿ ಹಾಕಿದ್ದಾರೆ ಅನ್ನೋದು ಪಾಲಿಕೆಯ ವಾದ. ಸದ್ಯ ಸರ್ವೆ ಕಾರ್ಯ ಮುಗಿದಿದ್ದು, ಅತಿಕ್ರಮವಾದ ಮನೆ ತೆರೆವಿಗೆ ಸೂಚಿಸಲಾಗಿದೆ. ಆದ್ರೆ ಕೆಲವೊಬ್ಬರು ಮನೆ ಕಟ್ಟಿ 10 ವರ್ಷವೂ ಪೂರೈಸಿಲ್ಲ. ಬ್ಯಾಂಕ್ ಲೋನ್ ಕೂಡಾ ಇದೆ. ಇಂತಹ ಹೊತ್ತಲ್ಲಿ ಮನೆ ಡೆಮಾಲಿಷನ್ ಮಾಡಿದ್ರೆ ಹೇಗೆ ಅಂತಾ ಗೋಳಾಡುತ್ತಿದ್ದಾರೆ.

ಸದ್ಯ ಪಾಂಡುರಂಗ ಕಾಲೋನಿಯ 90 ಕುಟುಂಬಗಳು ನಿದ್ದೆಯಿಲ್ಲದೆ ರಾತ್ರಿ ಕಳೀತಿವೆ. ಯಾವಾಗ ತಮ್ಮ ಮನೆ ಮುಂದೆ ಜೆಸಿಬಿ ಬಂದು ನಿಲ್ಲುತ್ತೋ ಅನ್ನೋ ಭಯ ಶುರುವಾಗಿದೆ. ಇಷ್ಟಕ್ಕೆಲ್ಲಾ ಕಾರಣ ಈ ಬಾರಿಯ ಭೀಕರ ಮಳೆ. ಮಳೆಯಿಂದ ರಾಜಕಾಲುವೆ ತುಂಬಿ ಹಳೇ ಹುಬ್ಬಳ್ಳಿ ಅರ್ಧ ಮುಳುಗಿತ್ತು. ಒತ್ತುವರಿಯಿಂದಲೇ ಹೀಗಾಯ್ತು ಅಂತಾ ಪಾಲಿಕೆ ಸರ್ವೆ ಕಾರ್ಯ ಆರಂಭಿಸಿತ್ತು, ಅಂದಿನಿಂದಲೂ ಒಂದಲ್ಲಾ ಒಂದು ಗೋಲ್​ಮಾಲ್ ಹೊರಬೀಳುತ್ತಿವೆ.

ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು