AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹು-ಧಾ ಪಾಲಿಕೆಗೆ ಮತ್ತೆ ತಲೆನೋವು ತಂದಿರುವ ನಕಲಿ ಫ್ಲ್ಯಾಟ್ ಹಾವಳಿ

ಹುಬ್ಬಳ್ಳಿ: ನಾಲ್ಕೈದು ತಿಂಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ತಲೆನೋವಾಗಿದ್ದ ನಕಲಿ ಫ್ಲ್ಯಾಟ್ ಹಾವಳಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಹಳೇ ಹುಬ್ಬಳ್ಳಿ ಭಾಗದಲ್ಲಿ ರಾಜಕಾಲುವೆ ಮತ್ತು ಪಾಲಿಕೆ ಜಾಗವನ್ನ ಸಾರ್ವಜನಿಕರಿಗೆ ಮಾರಿರೋ ಶಾಕಿಂಗ್ ಸುದ್ದಿ ನಡುವೆ, ಪಾಲಿಕೆ ಕೈಗೊಂಡಿರುವ ನಿರ್ಧಾರ ಜನರ ನಿದ್ದೆಗೆಡಿಸಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೇಣು ಜಾಗಕ್ಕೂ ಬಂಗಾರದ ಬೆಲೆ. ಹೀಗಾಗಿ ಇಲ್ಲಿ ಭೂಗಳ್ಳರು ದುರ್ಬೀನು ಹಾಕಿಕೊಂಡು ಕೂತಿರ್ತಾರೆ. ಸ್ವಲ್ಪ ಜಾಗ ಸಿಕ್ಕರೂ ಬೇಲಿ ಹಾಕೋರೆ ಜಾಸ್ತಿ. ಅದು ಸರ್ಕಾರದ್ದಾಗಿರಲಿ ಅಥವಾ ಖಾಸಗಿ ಆಸ್ತಿಯೇ […]

ಹು-ಧಾ ಪಾಲಿಕೆಗೆ ಮತ್ತೆ ತಲೆನೋವು ತಂದಿರುವ ನಕಲಿ ಫ್ಲ್ಯಾಟ್ ಹಾವಳಿ
ಸಾಧು ಶ್ರೀನಾಥ್​
|

Updated on: Dec 02, 2019 | 2:43 PM

Share

ಹುಬ್ಬಳ್ಳಿ: ನಾಲ್ಕೈದು ತಿಂಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ತಲೆನೋವಾಗಿದ್ದ ನಕಲಿ ಫ್ಲ್ಯಾಟ್ ಹಾವಳಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಹಳೇ ಹುಬ್ಬಳ್ಳಿ ಭಾಗದಲ್ಲಿ ರಾಜಕಾಲುವೆ ಮತ್ತು ಪಾಲಿಕೆ ಜಾಗವನ್ನ ಸಾರ್ವಜನಿಕರಿಗೆ ಮಾರಿರೋ ಶಾಕಿಂಗ್ ಸುದ್ದಿ ನಡುವೆ, ಪಾಲಿಕೆ ಕೈಗೊಂಡಿರುವ ನಿರ್ಧಾರ ಜನರ ನಿದ್ದೆಗೆಡಿಸಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೇಣು ಜಾಗಕ್ಕೂ ಬಂಗಾರದ ಬೆಲೆ. ಹೀಗಾಗಿ ಇಲ್ಲಿ ಭೂಗಳ್ಳರು ದುರ್ಬೀನು ಹಾಕಿಕೊಂಡು ಕೂತಿರ್ತಾರೆ. ಸ್ವಲ್ಪ ಜಾಗ ಸಿಕ್ಕರೂ ಬೇಲಿ ಹಾಕೋರೆ ಜಾಸ್ತಿ. ಅದು ಸರ್ಕಾರದ್ದಾಗಿರಲಿ ಅಥವಾ ಖಾಸಗಿ ಆಸ್ತಿಯೇ ಆಗಿರಲಿ. ಇನ್ನು ನಿವೇಶನದ ಪಕ್ಕ ರಾಜಕಾಲುವೆ ಸಿಕ್ಕರೆ ಬಿಡ್ತಾರಾ ಹೇಳಿ. ಇಲ್ಲೂ ಹಾಗೇ ಆಗಿರೋದು. ಯಾವುದೇ ಆಲೋಚನೆ ಇಲ್ಲದೆ ರಾಜಕಾಲುವೆ ಒತ್ತುವರಿ ಮಾಡಿಕೊಂಡವರಿಗೆ ಈಗ ಸಂಕಟ ಶುರುವಾಗಿದೆ.

ಮನೆ ಖಾಲಿ ಮಾಡಲು ಪಾಲಿಕೆ ಸೂಚನೆ: 3 ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಯಾರದ್ದೋ ಜಾಗದಲ್ಲಿ ನೆಲಸಿದ್ದ 50ಕ್ಕೂ ಹೆಚ್ಚು ಕುಟುಂಬಗಳನ್ನ ಕೋರ್ಟ್​ ಆದೇಶದ ಮೇರೆಗೆ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಖಾಲಿ ಮಾಡಿಸಿತ್ತು. ಎಲ್ಲರೂ ದುಡ್ಡು ಕೊಟ್ಟು ಜಾಗ ಖರೀದಿ ಮಾಡಿದ್ದರು. ಆದ್ರೆ ಜಾಗದ ಮೂಲ ಮಾಲೀಕರೇ ಬೇರೆಯವರಾಗಿದ್ದರು. ಇಂತಹದ್ದೇ ಮತ್ತೊಂದು ಕೇಸ್ ಹುಬ್ಬಳ್ಳಿಯಲ್ಲಿ ನಡೆದಿದೆ.

ಪಾಂಡುರಂಗ ಕಾಲೋನಿ ನಿವಾಸಿಗಳಿಗೆ ಈಗಾಗ್ಲೇ ಪಾಲಿಕೆ ಆಯುಕ್ತರು ಮನೆ ತೆರವು ಮಾಡಲು ನೋಟಿಸ್ ನೀಡಿದ್ದಾರೆ. ರಾಜಕಾಲುವೆಯಲ್ಲಿ ವಾಸವಿದ್ದೀರಿ ಅಂತಾ ಮನೆ ಖಾಲಿ ಮಾಡೋಕೆ ಸೂಚನೆ ನೀಡಲಾಗಿದೆ. ಇದು ಸ್ಥಳೀಯರನ್ನ ಕಂಗಾಲಾಗುವಂತೆ ಮಾಡಿದೆ.

ಅತಿಕ್ರಮವಾದ ಮನೆ ತೆರೆವಿಗೆ ಪಾಲಿಕೆ ಸಿದ್ಧತೆ: 35 ವರ್ಷಗಳ ಹಿಂದೆ ಪಾಲಿಕೆ 24 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಜಾಗ ನೀಡಿತ್ತಂತೆ. ಸದ್ಯ ಅದೇ ನಿವೇಶನಗಳು 90 ಮನೆಗಳಾಗಿ ಪರಿವರ್ತನೆಯಾಗಿವೆ ಅನ್ನೋದು ಸ್ಥಳೀಯರ ವಾದ. ಆದರೆ ಕೊಟ್ಟ ಜಾಗಕ್ಕಿಂತ ಹೆಚ್ಚು ಅತಿಕ್ರಮಣವಾಗಿದ್ದಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಟೋಪಿ ಹಾಕಿದ್ದಾರೆ ಅನ್ನೋದು ಪಾಲಿಕೆಯ ವಾದ. ಸದ್ಯ ಸರ್ವೆ ಕಾರ್ಯ ಮುಗಿದಿದ್ದು, ಅತಿಕ್ರಮವಾದ ಮನೆ ತೆರೆವಿಗೆ ಸೂಚಿಸಲಾಗಿದೆ. ಆದ್ರೆ ಕೆಲವೊಬ್ಬರು ಮನೆ ಕಟ್ಟಿ 10 ವರ್ಷವೂ ಪೂರೈಸಿಲ್ಲ. ಬ್ಯಾಂಕ್ ಲೋನ್ ಕೂಡಾ ಇದೆ. ಇಂತಹ ಹೊತ್ತಲ್ಲಿ ಮನೆ ಡೆಮಾಲಿಷನ್ ಮಾಡಿದ್ರೆ ಹೇಗೆ ಅಂತಾ ಗೋಳಾಡುತ್ತಿದ್ದಾರೆ.

ಸದ್ಯ ಪಾಂಡುರಂಗ ಕಾಲೋನಿಯ 90 ಕುಟುಂಬಗಳು ನಿದ್ದೆಯಿಲ್ಲದೆ ರಾತ್ರಿ ಕಳೀತಿವೆ. ಯಾವಾಗ ತಮ್ಮ ಮನೆ ಮುಂದೆ ಜೆಸಿಬಿ ಬಂದು ನಿಲ್ಲುತ್ತೋ ಅನ್ನೋ ಭಯ ಶುರುವಾಗಿದೆ. ಇಷ್ಟಕ್ಕೆಲ್ಲಾ ಕಾರಣ ಈ ಬಾರಿಯ ಭೀಕರ ಮಳೆ. ಮಳೆಯಿಂದ ರಾಜಕಾಲುವೆ ತುಂಬಿ ಹಳೇ ಹುಬ್ಬಳ್ಳಿ ಅರ್ಧ ಮುಳುಗಿತ್ತು. ಒತ್ತುವರಿಯಿಂದಲೇ ಹೀಗಾಯ್ತು ಅಂತಾ ಪಾಲಿಕೆ ಸರ್ವೆ ಕಾರ್ಯ ಆರಂಭಿಸಿತ್ತು, ಅಂದಿನಿಂದಲೂ ಒಂದಲ್ಲಾ ಒಂದು ಗೋಲ್​ಮಾಲ್ ಹೊರಬೀಳುತ್ತಿವೆ.

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ