ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಹುಂಡಿಯಲ್ಲಿ 2.53 ಕೋಟಿ ರೂ. ಸಂಗ್ರಹವಾಗಿದೆ. 65 ಗ್ರಾಂ ಚಿನ್ನ, 3 ಕೆಜಿ 358 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಸಿದ್ದಾರೆ. 14 ಲಕ್ಷಕ್ಕೂ ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಸಲ್ಲಿಕೆಯಾಗಿದೆ. ನಿನ್ನೆ (ಮೇ.30) ತಡರಾತ್ರಿವರೆಗು ಹುಂಡಿ ಎಣಿಕೆ ನಡೆದಿದ್ದು, ಕಳೆದ 32 ದಿನಗಳ ಅವಧಿಯಲ್ಲಿ ಮಲೆಮಹದೇಶ್ವರನಿಗೆ ಭಕ್ತರು 2,53,58,519 ರೂಪಾಯಿ ಕಾಣಿಕೆ ಅರ್ಪಿಸಿದ್ದಾರೆ.
ಮೈಸೂರು: ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಮೇ ತಿಂಗಳ ಹುಂಡಿ ಎಣಿಕೆಯಲ್ಲಿ 1 ಕೋಟಿ 55 ಲಕ್ಷದ 103 ರೂ. ಕಾಣಿಕೆ ಸಂಗ್ರಹವಾಗಿದೆ. 132 ಗ್ರಾಂ. ಚಿನ್ನ, 3 ಕೆಜಿ 75 ಗ್ರಾಂ ಬೆಳ್ಳಿ, 25 ವಿದೇಶಿ ಕರೆನ್ಸಿಗಳು ಕಾಣಿಕೆ ರೂಪದಲ್ಲಿ ಭಕ್ತರು ಸಮರ್ಪಿಸಿದ್ದಾರೆ. ಇನ್ನು ನಿಷೇಧಿತ 2,000 ಮುಖ ಬೆಲೆಯ 74 ನೋಟುಗಳು ಹುಂಡಿಯಲ್ಲಿ ದೊರೆತಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ