AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಲ್ಲಿ ಮನಕಲಕುವ ಘಟನೆ: ಹೆಂಡತಿಯನ್ನು ಕೆಎಎಸ್ ಓದಿಸಿ, ತಹಸೀಲ್ದಾರ್ ಮಾಡಿಸಿದ್ದ ಪತಿ ಕೊರೊನಾಗೆ ಬಲಿ

ಶಿವಮೊಗ್ಗದಲ್ಲಿ ಮನಕಲಕುವ ಘಟನೆ: ನಗರದ ಸವಾರ್ ಲೈನ್ ರಸ್ತೆಯ ನಿವಾಸಿ ಸೀನಾ ಎಂಬುವವರು ಕೊರೋನಾ ಸೋಂಕಿಗೆ ಬಲಿಯಾದ ವ್ಯಕ್ತಿ. ಮೃತ ಸೀನಾ ತನ್ನ ಅಕ್ಕನ ಮಗಳಾದ ಅಶ್ವಿನಿಯನ್ನೇ ವಿವಾಹವಾಗಿದ್ದರು. ವಿವಾಹವಾದರೂ ಅಶ್ವಿನಿಗೆ ಓದಿನ ತುಡಿತ ಕಡಿಮೆ ಆಗಿರಲಿಲ್ಲ. ಹಾಗಾಗಿಯೇ ಸೀನಾ, ಒಳ್ಳೆಯ ತರಬೇತಿ ಕೇಂದ್ರವೊಂದರಲ್ಲಿ ಪತ್ನಿಗೆ ಕೆಎಎಸ್ ಪೂರ್ವಭಾವಿ ತರಬೇತಿ ಕೊಡಿಸಿದ್ದರು.

ಶಿವಮೊಗ್ಗದಲ್ಲಿ ಮನಕಲಕುವ ಘಟನೆ: ಹೆಂಡತಿಯನ್ನು ಕೆಎಎಸ್ ಓದಿಸಿ, ತಹಸೀಲ್ದಾರ್ ಮಾಡಿಸಿದ್ದ ಪತಿ ಕೊರೊನಾಗೆ ಬಲಿ
ತಹಶೀಲ್ದಾರ್ ಪತ್ನಿ ಅಶ್ವಿನಿ, ಕೊರೊನಾಗೆ ಬಲಿಯಾದ ಪತಿ ಸೀನ,
ಸಾಧು ಶ್ರೀನಾಥ್​
|

Updated on:May 27, 2021 | 5:27 PM

Share

ಶಿವಮೊಗ್ಗ: ಕೈಹಿಡಿದ ಪತಿರಾಯ ತನ್ನ ಪತ್ನಿಯನ್ನು ಚೆನ್ನಾಗಿ ಓದಿಸಿ, ತಹಶೀಲ್ದಾರ್ ಅಧಿಕಾರಿಯನ್ನಾಗಿ ಮಾಡಿಸಿದ್ದರು. ಆದರೆ ಅದು ಕೊರೊನಾ ಮಾರಿಗೆ ಹೇಗೆ ಗೊತ್ತಾಗಬೇಕು… ಯಾವುದೋ ಮಾಯದಲ್ಲಿ ಬಂದು ಪತಿರಾಯನನ್ನು ಬಲಿ ತೆಗೆದುಕೊಂಡಿದೆ. ಸುಂದರ ಸಂಸಾರದಕ್ಕೆ ಕೊಳ್ಳಿಯಿಟ್ಟಿದೆ ದೆವ್ವ ಕೊರೊನಾ! ಕಳೆದ ಒಂದು ವಾರದಿಂದ ಕೊರೊನಾದಿಂದಾಗಿ ಪತಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ಬೆಂಗಳೂರಿನಲ್ಲಿ ತಹಸೀಲ್ದಾರ್ ಆಗಿ ಆರು ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದರು.

ಆತ ತಾನಂತೂ ಓದಿಲ್ಲ. ತನ್ನ ಹೆಂಡಿಯಾದರೂ ಓದಿ ಅಧಿಕಾರಿಯಾಗಲಿ ಎಂದು ಕನಸು ಕಂಡಿದ್ದ. ಆತನ ಆಸೆಯಂತೆ ಹೆಂಡತಿಯನ್ನು ಕೆಎಎಸ್ ಅಧಿಕಾರಿಯನ್ನಾಗಿ ಮಾಡಿದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ತಾನು ಕಂಡಿದ್ದ ಕನಸು ನನಸಾದ ಖುಷಿಯಲ್ಲಿ ಬದುಕಿನ ಪಯಣ ನಡೆಸಬೇಕಿದ್ದ ವ್ಯಕ್ತಿ ಕೊರೋನಾಗೆ ಬಲಿಯಾಗಿದ್ದಾರೆ.

ಹೌದು ಶಿವಮೊಗ್ಗದಲ್ಲಿ ಇಂತಹ ಒಂದು ಮನಕಲಕುವ ಘಟನೆ ನಡೆದಿದೆ. ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ನಿವಾಸಿ ಸೀನಾ ಎಂಬುವವರು ಕೊರೋನಾ ಸೋಂಕಿಗೆ ಬಲಿಯಾದ ವ್ಯಕ್ತಿ. ಮೃತ ಸೀನಾ ತನ್ನ ಅಕ್ಕನ ಮಗಳಾದ ಅಶ್ವಿನಿಯನ್ನೇ ವಿವಾಹವಾಗಿದ್ದರು. ವಿವಾಹವಾದರೂ ಅಶ್ವಿನಿಗೆ ಓದಿನ ತುಡಿತ ಕಡಿಮೆ ಆಗಿರಲಿಲ್ಲ. ಹಾಗಾಗಿಯೇ ಸೀನಾ, ಒಳ್ಳೆಯ ತರಬೇತಿ ಕೇಂದ್ರವೊಂದರಲ್ಲಿ ಪತ್ನಿಗೆ ಕೆಎಎಸ್ ಪೂರ್ವಭಾವಿ ತರಬೇತಿ ಕೊಡಿಸಿದ್ದರು.

ಸೀನಾ ಆಸೆಯಂತೆ ಪತ್ನಿ‌ ಅಶ್ವಿನಿ‌ ಕಳೆದ ವರ್ಷ ಕೆಎಎಸ್ ಪಾಸ್ ಮಾಡಿದ್ದರು. ಕಳೆದ 6 ತಿಂಗಳಿನಿಂದ ಬೆಂಗಳೂರಿನಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತನ್ನ ಆಸೆಯನ್ನು ಈಡೇರಿಸಿದ ಪತ್ನಿಯ ಜೊತೆ ಸುಖವಾಗಿ ಜೀವನ ಸಾಗಿಸಬೇಕು ಎಂದುಕೊಂಡಿದ್ದರು. ಆದರೆ ಕೊರೋನಾ ಬರಸಿಡಿಲಿನಂತೆ ಅಪ್ಪಳಿಸಿ ಆತನನ್ನೇ ಬಲಿ ತೆಗೆದುಕೊಂಡಿದೆ.

(husband of tahsildar died due to coronavirus in shivamogga)

ಕೊರೊನಾದಿಂದ ಅಪ್ಪ-ಅಮ್ಮನನ್ನ ಕಳೆದುಕೊಂಡೆ, ಮೆಡಿಕಲ್ ಓದುತ್ತಿರುವೆ.. ಯಾರಾದರೂ ನನ್ನ ಶಿಕ್ಷಣಕ್ಕೆ ನೆರವಾಗಿ: ​ಯುವತಿ ಮೊರೆ

Published On - 5:24 pm, Thu, 27 May 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ