AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸ್ಕಿ ಕ್ಷೇತ್ರದ ಸೋಲಿನ ಹೊಣೆ ಹೋರುತ್ತೇನೆ: ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ

ಸೋಲಿಗೆ ಹಲವಾರು ಕಾರಣಗಳಿರುತ್ತದೆ. ಪ್ರತಾಪ್​ಗೌಡ ಅವರ ಸೋಲಿನ ಕಾರಣವನ್ನು ಪಕ್ಷದ ಮುಖಂಡರು ಸೇರಿ ಚರ್ಚೆ ಮಾಡುತ್ತೇವೆ. ಪಾಟೀಲ್ ಅವರಿಗೆ ಮುಂದೆ ಏನು ಎಂಬುದನ್ನು ಪಕ್ಷ ನಿರ್ಧಾರ ಮಾಡುತ್ತದೆ.

ಮಸ್ಕಿ ಕ್ಷೇತ್ರದ ಸೋಲಿನ ಹೊಣೆ ಹೋರುತ್ತೇನೆ: ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿ.ವೈ.ವಿಜಯೇಂದ್ರ
guruganesh bhat
|

Updated on: May 02, 2021 | 9:21 PM

Share

ಬೆಂಗಳೂರು: ಮಸ್ಕಿ ಕ್ಷೇತ್ರದಲ್ಲಿ ನಾವು ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ಕ್ಷೇತ್ರದ ಸೋಲಿನ ಹೊಣೆ ಹೊರುತ್ತೇನೆ. ಸೋಲಿಗೆ ನಮ್ಮವರೇ ಕಾರಣವೆಂಬ ಪ್ರತಾಪ್​ಗೌಡ ಪಾಟೀಲ್​ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಪ್ರತಾಪಗೌಡಗೆ ಮುಂದೆ ಏನೆಂದು ಪಕ್ಷ ನಿರ್ಧರಿಸುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಮಸ್ಕಿಯಲ್ಲಿ ನಾವು ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಸಾಕಷ್ಟು ಸಮಸ್ಯೆಗಳು ಇದ್ದರೂ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದ್ದೆವು. ಆದರೆ ಜನರು ನೀಡಿರುವ ಆಶೀರ್ವಾದವನ್ನು ಗೌರವಿಸುತ್ತೇವೆ.

ಸೋಲಿಗೆ ಹಲವಾರು ಕಾರಣಗಳಿರುತ್ತದೆ. ಪ್ರತಾಪ್​ಗೌಡ ಅವರ ಸೋಲಿನ ಕಾರಣವನ್ನು ಪಕ್ಷದ ಮುಖಂಡರು ಸೇರಿ ಚರ್ಚೆ ಮಾಡುತ್ತೇವೆ. ಪಾಟೀಲ್ ಅವರಿಗೆ ಮುಂದೆ ಏನು ಎಂಬುದನ್ನು ಪಕ್ಷ ನಿರ್ಧಾರ ಮಾಡುತ್ತದೆ. ನಾನು ಕೂಡಾ ಸೋಲಿನ ಹೊಣೆಯನ್ನು ಹೊರುತ್ತೇನೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಇದನ್ನೂ ಓದಿ:  Karnataka By-Elections ಫಲಿತಾಂಶ ವಿಶ್ಲೇಷಣೆ: ಉಪಚುನಾವಣೆಯ ಗೆಲುವು ಬಿಜೆಪಿ ಕಣ್ಣು ತೆರೆಸಲು ಸಾಧ್ಯವೇ?

Mangala Angadi: ಪತಿ ಸುರೇಶ್ ಅಂಗಡಿಯವರಂತೆಯೇ ಕೆಲಸ ಮಾಡುತ್ತೇನೆ; ಸಂಸದೆ ಮಂಗಳಾ ಅಂಗಡಿ

(I will take responsibility of Maski by election defeat says B Y Vijayendra)