AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ; 19 ಪೊಲೀಸರಿಗೆ ಪೊಲೀಸ್ ಸೇವಾ ಪದಕ ಘೋಷಣೆ

ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಕರ್ನಾಟಕದ ಎಡಿಜಿಪಿಗಳಾದ ಉಮೇಶ್ ಕುಮಾರ್ ಮತ್ತು ಅರುಣ್ ಚಕ್ರವರ್ತಿ ಅವರಿಗೆ ರಾಷ್ಟ್ರಪ್ರತಿ ಪದಕ ಘೋಷಿಸಲಾಗಿದೆ. ಹಾಗೇ, ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಸೇವಾ ಪದಕ ವಿತರಿಸಲಾಗುವುದು.

ಕರ್ನಾಟಕದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ; 19 ಪೊಲೀಸರಿಗೆ ಪೊಲೀಸ್ ಸೇವಾ ಪದಕ ಘೋಷಣೆ
ರಾಷ್ಟ್ರಪತಿಗಳ ಪದಕಕ್ಕೆ ಪಾತ್ರರಾದ ಕರ್ನಾಟಕದ ಪೊಲೀಸ್ ಅಧಿಕಾರಿಗಳು
TV9 Web
| Edited By: |

Updated on:Aug 14, 2021 | 7:41 PM

Share

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅತ್ಯುತ್ತಮ ಸೇವೆ ಸಲ್ಲಿಸಿದ ಭಾರತದ 1,380 ಪೊಲೀಸ್ ಸಿಬ್ಬಂದಿಗೆ ನಾಳೆ ರಾಷ್ಟ್ರಪತಿ ಪದಕ ಹಾಗೂ ಪೊಲೀಸ್ ಸೇವಾ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ. ಆ ಪಟ್ಟಿಯಲ್ಲಿ ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ಕೂಡ ಇದ್ದಾರೆ. ಕರ್ನಾಟಕದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ (President’s Police Medal) ಹಾಗೂ 19 ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಸೇವಾ ಪದಕ ಘೋಷಿಸಲಾಗಿದೆ.

ಭಾರತದ 88 ಪೊಲೀಸ್ ಅಧಿಕಾರಿಗಳಿಗೆ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಷ್ಟ್ರಪತಿ ಪದಕ ನೀಡಲಾಗುವುದು. ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಶೌರ್ಯ ಪದಕ ಘೋಷಿಸಲಾಗಿದೆ. ಹಾಗೇ, 662 ಪೊಲೀಸರಿಗೆ ಪೊಲೀಸ್ ಸೇವಾ ಪದಕ ನೀಡಲಾಗುವುದು. ಕರ್ನಾಟಕದ ಇಬ್ಬರು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ)ರಾದ ಉಮೇಶ್ ಕುಮಾರ್, ಅರುಣ್ ಚಕ್ರವರ್ತಿ ಅವರಿಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ. ಹಾಗೇ, 19 ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಸೇವಾ ಪದಕ ವಿತರಿಸಲಾಗುವುದು.

ಪೊಲೀಸ್ ಸೇವಾ ಪದಕ ಪ್ರಶಸ್ತಿ ವಿಜೇತ ಅಧಿಕಾರಿಗಳು: * ಮೋಹನ, ಎಎಸ್​ಪಿ, ಸೈಬರ್ ಕ್ರೈಂ ಪೊಲೀಸ್ ಠಾಣೆ, ಮಂಗಳೂರು * ರಾಮಕೃಷ್ಣ ಪ್ರಸಾದ್ ವಿ.ಎಂ, ಕಮಾಂಡೆಂಟ್, 3ನೇ ಬೆಟಾಲಿಯನ್, ಕೆ ಎಸ್​ಆರ್​ಪಿಸಿ, ಬೆಂಗಳೂರು * ವೆಂಕಟೇಶ ನಾಯ್ಡು, ಎಸಿಪಿ, ಮಲ್ಲೇಶ್ವರಂ, ಬೆಂಗಳೂರು * ರವೀಂದ್ರ ಪಾಂಡುರಂಗಪ್ಪ, ಎಸಿಪಿ, ಚಿಕ್ಕಪೇಟೆ, ಬೆಂಗಳೂರು * ನವೀನ್ ಕುಲಕರ್ಣಿ, ಡಿಸಿಪಿ, ಎಡಿಜಿಪಿ ಇಂಟೆಲಿಜೆನ್ಸ್, ಬೆಂಗಳೂರು * ಸಿದ್ದರಾಜು ಜಿ, ಪಿಐ, ತಲಘಟ್ಟಪುರ, ಬೆಂಗಳೂರು * ದಯಾನಂದ್ ಎಂ. ಜೆ, ಪೊಲೀಸ್ ಇನ್​ಸ್ಪೆಕ್ಟರ್, ಎಸಿಬಿ, ಬೆಂಗಳೂರು * ಗೀತಾ ಈಶ್ವರಪ್ಪ, ಮಹಿಳಾ ಪೊಲೀಸ್ ಸಬ್​ ಇನ್​ಸ್ಪೆಕ್ಟರ್, ಸ್ಟೇಟ್ ಇಂಟೆಲಿಜೆನ್ಸ್, ಬೆಂಗಳೂರು * ಗೋವರ್ಧನ ರಾವ್ ಡಿ. ಎಸ್, ಸ್ಪೆಷಲ್ ಅಸಿಸ್ಟೆಂಟ್ ರಿಸರ್ವ್ ಸಬ್ ಇನ್​ಸ್ಪೆಕ್ಟರ್, 3ನೇ ಬೆಟಾಲಿಯನ್, ಕೆಎಸ್​ಆರ್​ಪಿ, ಬೆಂಗಳೂರು

* ವಿ. ಸೋಮಶಂಕರ್, ಎಎಚ್​ಸಿ, ಎಪಿಟಿಎಸ್, ಯಲಹಂಕ, ಬೆಂಗಳೂರು * ರಾಮ ನಾಯ್ಕ್, ಎಎಸ್​ಪಿ, ಬೆಂಗಳೂರು * ಮೊಹಮದ್ ಮುನಾವರ್ ಪಾಷಾ, ಸಿವಿಲ್ ಹೆಡ್ ಕಾನ್​ಸ್ಟೇಬಲ್, ಜಯನಗರ ಪೊಲೀಸ್ ಠಾಣೆ, ತುಮಕೂರು * ಸಂಗನಬಸು ಪರಮನ್ನ ಕೆರುಟಗಿ, ರಿಸರ್ವ್ ಹೆಡ್ ಕಾನ್​ಸ್ಟೇಬಲ್, 4ನೇ ಬೆಟಾಲಿಯನ್, ಕೆಎಸ್​ಆರ್​ಪಿ, ಬೆಂಗಳೂರು * ದಾದಾ ಅಮೀರ್ ಬಿ.ಎಸ್, ಆರ್ಮಡ್ ಹೆಡ್ ಕಾನ್​ಸ್ಟೇಬಲ್, ಐಜಿಪಿ ಆಫೀಸ್, ಬಳ್ಳಾರಿ * ರಾಜಪ್ಪ ಕುಮಾರ್, ಸಿವಿಲ್ ಹೆಡ್ ಕಾನ್​ಸ್ಟೇಬಲ್, ಜಿಲ್ಲಾ ಪೊಲೀಸ್ ಕಚೇರಿ, ಚಿಕ್ಕಮಗಳೂರು * ಸೈಯದ್ ಅಬ್ದುಲ್ ಖಾದರ್, ಸ್ಪೆಷಲ್ ರಿಸರ್ವ್ ಹೆಡ್ ಕಾನ್​ಸ್ಟೇಬಲ್, 3ನೇ ಬೆಟಾಲಿಯನ್ ಕೆಎಸ್​ಆರ್​ಪಿ, ಬೆಂಗಳೂರು * ಗೋಪಾಲಪ್ಪ ದೇವೇಂದ್ರಪ್ಪ ಕೊಟಬಗಿ, ಪೊಲೀಸ್ ಹೆಡ್ ಕಾನ್​ಸ್ಟೇಬಲ್, ಸಿಸಿಆರ್​ಬಿ, ಹುಬ್ಬಳ್ಳಿ- ಧಾರವಾಡ * ಶಂಕರ್ ಗೌಡ ಪಾಟೀಲ್, ಸರ್ಕಲ್ ಇನ್​ಸ್ಪೆಕ್ಟರ್, ಕಲಬುರ್ಗಿ ಗ್ರಾಮೀಣ * ಶೆಟಪ್ಪ ಬಸವಂತ್ ಮಾಳಗಿ, ರಿಸರ್ವ್ ಸಬ್ ಇನ್​ಸ್ಪೆಕ್ಟರ್, ಕೆಎಸ್ಆರ್​ಪಿ, ಪಿಟಿಎಸ್, ಬೆಳಗಾವಿ

ಈ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಪದಕಗಳನ್ನು ವಿತರಿಸಲಿದ್ದಾರೆ.

ಇದನ್ನೂ ಓದಿ: 75ನೇ ಸ್ವಾತಂತ್ರ್ಯೋತ್ಸವ: ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ರಾಷ್ಟ್ರಪತಿ ರಾಮನಾಥ ಕೋವಿಂದ್​

75ನೇ ಸ್ವಾತಂತ್ರ್ಯೋತ್ಸವ: 7500 ಚದರ್​ ಅಡಿ ರಾಷ್ಟ್ರಧ್ವಜವನ್ನು ದೇಶಕ್ಕೆ ಅರ್ಪಿಸಲಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧನ್ಕರ್​

(Including Two IPS Officers 21 Police Officers of Karnataka Conferred for President’s Medal and Police Medal )

Published On - 7:38 pm, Sat, 14 August 21

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ