Turkey Updates: ಟರ್ಕಿಯಲ್ಲಿ ನಾಪತ್ತೆಯಾಗಿದ್ದು ಕನ್ನಡಿಗನಲ್ಲ, ಉತ್ತರಾಖಂಡ್ ನಿವಾಸಿ: ಮಾಹಿತಿ

Bengaluru Based Company's Engineer Missing: ಟರ್ಕಿಯಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಆಕ್ಸಿ ಪ್ಲ್ಯಾಂಟ್ ಇಂಡಿಯಾ ಎಂಬ ಬೆಂಗಳೂರು ಮೂಲದ ಕಂಪನಿಯಲ್ಲಿ ಟೆಕ್ಕಿಯಾಗಿರುವ ವಿಜಯ್ ಕುಮಾರ್ ಉತ್ತರಾಖಂಡ್ ರಾಜ್ಯದವರೆನ್ನಲಾಗಿದೆ.

Turkey Updates: ಟರ್ಕಿಯಲ್ಲಿ ನಾಪತ್ತೆಯಾಗಿದ್ದು ಕನ್ನಡಿಗನಲ್ಲ, ಉತ್ತರಾಖಂಡ್ ನಿವಾಸಿ: ಮಾಹಿತಿ
ಟರ್ಕಿ ಭೂಕಂಪದ ದೃಶ್ಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 09, 2023 | 12:39 PM

ಬೆಂಗಳೂರು: ಟರ್ಕಿಯಲ್ಲಿ (Turkey Earthquake) ಬೆಂಗಳೂರು ಮೂಲದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಆಗಿತ್ತು. ಆದರೆ, ನಾಪತ್ತೆಯಾದ ವ್ಯಕ್ತಿ ಕರ್ನಾಟಕದವರಲ್ಲ, ಉತ್ತರಾಖಂಡ್ ರಾಜ್ಯದವರು ಎನ್ನಲಾಗಿದೆ. ಉತ್ತರಾಖಡ್​ನ ಡೆಹ್ರಾಡೂನ್​ನ ಬಲವಾಲದ ನಿವಾಸಿ 35 ವರ್ಷದ ವಿಜಯ್ ಕುಮಾರ್ ನಾಪತ್ತೆಯಾಗಿರುವ ವ್ಯಕ್ತಿ. ಇವರು ಬೆಂಗಳೂರು ಮೂಲದ ಆಕ್ಸಿ ಪ್ಲ್ಯಾಂಟ್ ಇಂಡಿಯಾ ಎಂಬ ಕಂಪನಿಯ ಉದ್ಯೋಗಿ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯ ವಿಪತ್ತು ನಿರ್ಹಣಾ ಇಲಾಖೆ ಟಿವಿ9ಗೆ ನೀಡಿರುವ ಮಾಹಿತಿ ಪ್ರಕಾರ, ಆಕ್ಸಿ ಪ್ಲ್ಯಾಂಟ್ ಇಂಡಿಯಾದಲ್ಲಿ ಪ್ಲ್ಯಾಂಟ್ ಎಂಜಿನಿಯರ್ ಆಗಿರುವ ವಿಜಯ್ ಕುಮಾರ್ ಅವರು ಕೆಲಸದ ನಿಮಿತ್ತ ಕಳೆದ ವಾರ ಟರ್ಕಿಗೆ ತೆರಳಿದ್ದರು. ಟರ್ಕಿಯ ಕುಲ್ಕು ಗಾಜ್ ಎಂಬ ಪ್ರಮುಖ ಕೈಗಾರಿಕಾ ಅನಿಲ ಪೂರೈಕೆ ಕಂಪನಿಗೆ ಆಕ್ಸಿ ಪ್ಲ್ಯಾಂಟ್ ಸಂಸ್ಥೆ ಅಸಿಟಿಲೀನ್ ಗ್ಯಾಸ್ ಘಟಕವನ್ನು ನಿರ್ಮಿಸುತ್ತಿದೆ. ಈ ಯೋಜನೆ ಸಂಬಂಧ ಪ್ಲ್ಯಾಂಟ್ ಎಂಜಿನಿಯರ್ ಆಗಿ ವಿಜಯ್ ಕುಮಾರ್ ಟರ್ಕಿಗೆ ಹೋಗಿದ್ದು ತಿಳಿದುಬಂದಿದೆ.

ಇದನ್ನೂ ಓದಿ: Turkey Earthquake; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ನೋಡಲ್ ಅಧಿಕಾರಿ ನೇಮಕ, ಹೆಲ್ಪ್​ಲೈನ್ ವ್ಯವಸ್ಥೆ

ಟರ್ಕಿಯಲ್ಲಿ ಸುಮಾರು 3 ಸಾವಿರ ಭಾರತೀಯ ನಾಗರಿಕರಿದ್ದಾರೆ. ಇಸ್ತಾಂಬುಲ್ ಮತ್ತು ಅಂಕಾರ ನಗರಗಳಲ್ಲಿ ಹೆಚ್ಚು ಮಂದಿ ಇದ್ದಾರೆ. ಕನ್ನಡಿಗರೂ ನೂರಾರು ಮಂದಿ ಇದ್ದಾರೆ. ಸದ್ಯ ಬೆಂಗಳೂರು ಕಂಪನಿಯ ಟೆಕ್ಕಿ ಮಾತ್ರವೇ ನಾಪತ್ತೆಯಾಗಿರುವ ಸಂಗತಿ ದೃಢಪಟ್ಟಿದ್ದು, 10 ಮಂದಿ ದೂರದ ಸ್ಥಳಗಳಲ್ಲಿ ಸಹಾಯ ಇಲ್ಲದೇ ಸಿಲುಕಿಕೊಂಡಿದ್ದಾರಾದರೂ ಸುರಕ್ಷಿತವಾಗಿದ್ದಾರೆ. ಇತರ ಭಾರತೀಯರೆಲ್ಲರೂ ಸುರಕ್ಷಿತವಾಗಿದ್ದಾರಾ ಎಂಬ ಬಗ್ಗೆ ಸರ್ಕಾರದಿಂದ ಖಚಿತ ಮಾಹಿತಿ ಲಭ್ಯವಾಗಿಲ್ಲ. ಭಾರತದಲ್ಲಿರುವ ಅವರ ಸಂಬಂಧಿಗಳಿಂದ ಯಾವುದೇ ದೂರುಗಳೂ ದಾಖಲಾಗಿರುವುದು ತಿಳಿದುಬಂದಿಲ್ಲ.

ಟರ್ಕಿ ಮತ್ತು ಸಿರಿಯಾದಲ್ಲಿ ಈ ವಾರದ ಆರಂಭದಲ್ಲಿ ಸಂಭವಿಸಿದ ಭೂಕಂಪ ದುರಂತದಿಂದ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 16 ಸಾವಿರ ಗಡಿ ದಾಟಿದೆ. ಸಾವಿರಾರು ಕಟ್ಟಡಗಳು ನೆಲಕ್ಕುರುಳಿದ್ದು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ಶವಗಳು ಸಿಲುಕಿರುವ ಸಾಧ್ಯತೆ ಇದೆ. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ಭಾರತದ ಎನ್​ಡಿಆರ್​ಎಫ್ ಪಡೆ ಸಿಬ್ಬಂದಿ ತಂಡಗಳು ಟರ್ಕಿಗೆ ಹೋಗಿ ಕಾರ್ಯಾಚರಿಸುತ್ತಿದ್ದಾರೆ. ಭಾರತದಿಂದ ಐದು ವಿಮಾನಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಟರ್ಕಿಗೆ ಕಳುಹಿಸಲಾಗಿದೆ. ಒಂದು ವಿಮಾನ ಸಿರಿಯಾಗೆ ಹೋಗಿದೆ.

Published On - 12:39 pm, Thu, 9 February 23

ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ದುಡ್ಡು ಎಗರಿಸಿದ ಕಳ್ಳ
ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ದುಡ್ಡು ಎಗರಿಸಿದ ಕಳ್ಳ
‘ನಾನು ಮಾಡಿಕೊಂಡ ತಪ್ಪುಗಳಿಗೇ ನಾನೇ ಹೊಣೆ’: ನಟ ಯೋಗಿ ನೇರ ಮಾತು
‘ನಾನು ಮಾಡಿಕೊಂಡ ತಪ್ಪುಗಳಿಗೇ ನಾನೇ ಹೊಣೆ’: ನಟ ಯೋಗಿ ನೇರ ಮಾತು
ಶಿವಪುರಿ ಬಳಿ ಐಎಎಫ್ ಮಿರಾಜ್ 2000 ಯುದ್ಧ ವಿಮಾನ ಪತನ; ಪೈಲಟ್‌ಗಳು ಸೇಫ್
ಶಿವಪುರಿ ಬಳಿ ಐಎಎಫ್ ಮಿರಾಜ್ 2000 ಯುದ್ಧ ವಿಮಾನ ಪತನ; ಪೈಲಟ್‌ಗಳು ಸೇಫ್
ಬೈಕ್ ಮಾಲೀಕ ಕಿರಣ್ ಕುಮಾರ್ ರೆಡ್ಡಿ ಮುಷ್ಟೂರಿನ ನಿವಾಸಿ
ಬೈಕ್ ಮಾಲೀಕ ಕಿರಣ್ ಕುಮಾರ್ ರೆಡ್ಡಿ ಮುಷ್ಟೂರಿನ ನಿವಾಸಿ
ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ
ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ
ಪರೀಕ್ಷಾ ಪೇ ಚರ್ಚಾಗೆ 3.5 ಕೋಟಿ ಜನರ ನೋಂದಣಿ; ಸಚಿವ ಧರ್ಮೇಂದ್ರ ಪ್ರಧಾನ್
ಪರೀಕ್ಷಾ ಪೇ ಚರ್ಚಾಗೆ 3.5 ಕೋಟಿ ಜನರ ನೋಂದಣಿ; ಸಚಿವ ಧರ್ಮೇಂದ್ರ ಪ್ರಧಾನ್
ಫೈನಾನ್ಸ್ ಸಂಸ್ಥೆಯಿಂದ ಕಿರುಕುಳಕ್ಕೊಳಗಾದ ಕುಟುಂಬಕ್ಕೆ ಅಶೋಕ ಸಾಂತ್ವನ
ಫೈನಾನ್ಸ್ ಸಂಸ್ಥೆಯಿಂದ ಕಿರುಕುಳಕ್ಕೊಳಗಾದ ಕುಟುಂಬಕ್ಕೆ ಅಶೋಕ ಸಾಂತ್ವನ
ನೆಹರೂ ಸರ್ಕಾರ ದೇವ್ ಆನಂದ್, ಕಿಶೋರ್​ ಕುಮಾರ್​ಗೆ ನಿಷೇಧ ಹೇರಿತ್ತು; ಮೋದಿ
ನೆಹರೂ ಸರ್ಕಾರ ದೇವ್ ಆನಂದ್, ಕಿಶೋರ್​ ಕುಮಾರ್​ಗೆ ನಿಷೇಧ ಹೇರಿತ್ತು; ಮೋದಿ
ನಗರದ ಸೌಂದರ್ಯೀಕರಣಕ್ಕೆ ಬಿಎಂಆರ್​ಸಿಲ್ ಕೈ ಜೋಡಿಸಲಿದೆ: ಶಿವಕುಮಾರ್
ನಗರದ ಸೌಂದರ್ಯೀಕರಣಕ್ಕೆ ಬಿಎಂಆರ್​ಸಿಲ್ ಕೈ ಜೋಡಿಸಲಿದೆ: ಶಿವಕುಮಾರ್
ಸುದೀಪ್ ಭೇಟಿ ಮಾಡಿದ್ದು ಪರ್ಸನಲ್ ಕಾರಣಕ್ಕೆ: ಅಸಲಿ ವಿಷಯ ತಿಳಿಸಿದ ಡಿಕೆಶಿ
ಸುದೀಪ್ ಭೇಟಿ ಮಾಡಿದ್ದು ಪರ್ಸನಲ್ ಕಾರಣಕ್ಕೆ: ಅಸಲಿ ವಿಷಯ ತಿಳಿಸಿದ ಡಿಕೆಶಿ