AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಗಮಗಳು ಅಸ್ಥಿಪಂಜರಗಳಾಗಿವೆ; ಸಾರಿಗೆ ಸಿಬ್ಬಂದಿ ಮುಷ್ಕರದ ಕುರಿತು ಶಂಕರ್​ ಬಿದರಿ ನೇರ ಮಾತುಗಳಿವು..

ಕಳೆದ 15 ವರ್ಷಗಳಲ್ಲಿ ರಣಹದ್ದುಗಳು ಸಾರಿಗೆ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ ಎಂದು ನೇರವಾಗಿ ಹೇಳಿದ್ದಾರೆ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ. ಸಾರಿಗೆ ನಿಗಮಗಳ ನೌಕರರ ಮುಷ್ಕರದ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ನಿಗಮಗಳು ಅಸ್ಥಿಪಂಜರಗಳಾಗಿವೆ; ಸಾರಿಗೆ ಸಿಬ್ಬಂದಿ ಮುಷ್ಕರದ ಕುರಿತು ಶಂಕರ್​ ಬಿದರಿ ನೇರ ಮಾತುಗಳಿವು..
ಶಂಕರ್​ ಬಿದರಿ
Lakshmi Hegde
| Edited By: |

Updated on:Dec 13, 2020 | 2:36 PM

Share

ಕಳೆದ ಎರಡು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಅತ್ತ ಸರ್ಕಾರ ಹಟ ಬಿಡುತ್ತಿಲ್ಲ. ಇತ್ತ ಸಿಬ್ಬಂದಿ ಹೋರಾಟ ಕೈಬಿಡಲು ಒಪ್ಪುತ್ತಿಲ್ಲ. ತಮ್ಮನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸಿ ಎಂಬುದು ಸಾರಿಗೆ ಸಿಬ್ಬಂದಿಯ ಬಹುಮುಖ್ಯ ಬೇಡಿಕೆ..ಆದರೆ ಸರ್ಕಾರ ಮತ್ತು ಸಾರಿಗೆ ನೌಕರರ ಹಗ್ಗಜಗ್ಗಾಟದಲ್ಲಿ ಸಾಮಾನ್ಯ ಜನರು ಕಷ್ಟಪಡುತ್ತಿದ್ದಾರೆ.

ಈ ಬಗ್ಗೆ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತುಸು ಕಟುವಾದ ಮಾತಿನಿಂದಲೇ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಅವರ ಮಾತುಗಳು.

‘KSRTC, BMTC, NWKRTC, NEKRTC ಸಿಬ್ಬಂದಿ ತಮ್ಮನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಕೋರಿ ಮುಷ್ಕರ ನಡೆಸುತ್ತಿರುವುದು ತೀವ್ರ ಕಳವಳಕಾರಿ. ಸಾರಿಗೆ ನೌಕರರು ಶ್ರಮಜೀವಿಗಳು, ಪ್ರಾಮಾಣಿಕ ಕೆಲಸಗಾರರು ಮತ್ತು ಒಂದು ಉತ್ತಮ ಪ್ಯಾಕೇಜ್​ಗೆ ಅರ್ಹರು ಎಂಬುದು ಪರಮಸತ್ಯ. ಆದರೆ ಈ ಎಲ್ಲ ನಿಗಮಗಳ ಸ್ವಾಸ್ಥ್ಯ ನನ್ನ ಮಿತ್ರರಾದ ದಿವಂಗತ ಎನ್​.ಗೋಕುಲ್​ರಾಮ್​, ಶಿವಕುಮಾರ್, ಲತಾ ಮತ್ತು ಉಪೇಂದ್ರ ತ್ರಿಪಾಠಿಯವರ ಉಸ್ತುವಾರಿಯಲ್ಲಿದ್ದಂತೆ ಈಗ ಸುಸ್ಥಿರವಾಗಿ ಉಳಿದಿಲ್ಲ. ಕಳೆದ 15 ವರ್ಷಗಳಲ್ಲಿ ರಣಹದ್ದುಗಳು ಈ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ. ಈಗ ಅಸ್ಥಿಪಂಜರ ಮಾತ್ರ ಉಳಿದಿದೆ.

‘ಇಂಥ ಪರಿಸ್ಥಿತಿಯಲ್ಲೂ ಅವರಿಗೆ ಸರ್ಕಾರಿ ನೌಕರರಿಗೆ ಸಮಾನ ವೇತನವನ್ನು ಸರ್ಕಾರ ನೀಡುತ್ತಿದೆ. ಸದ್ಯದ ಸಂದರ್ಭದಲ್ಲಿ ಸಾರಿಗೆ ನೌಕರರನ್ನು ಕಾನೂನುಬದ್ಧವಾಗಿ, ಪ್ರಾಯೋಗಿಕವಾಗಿ ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಸರ್ಕಾರಿ ವೇತನ ಮಾಪಕದೊಂದಿಗೆ ಸಮಾನತೆ ಇರುವ ಪ್ಯಾಕೇಜ್​ ತೃಪ್ತಿದಾಯಕಕ್ಕಿಂತಲೂ ಅಧಿಕವಾಗಿದೆ. ಹಾಗೇ, ಸಾರಿಗೆ ಸಿಬ್ಬಂದಿಯ ಕುಂದುಕೊರತೆಯನ್ನು ನಿರೀಕ್ಷೆಗೂ ಮೀರಿ ಸರ್ಕಾರ ಪರಿಹರಿಸುತ್ತಿದೆ.

‘ನಾನು ಮುಷ್ಕರ ನಿರತರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಒಂದು ನಿಮಿಷವೂ ವಿಳಂಬ ಮಾಡದೆ ಸರ್ಕಾರ ನೀಡಿರುವ ಅವಕಾಶವನ್ನು ಗೌರವಯುತವಾಗಿ ಬಳಸಿಕೊಳ್ಳಿ. ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಳ್ಳಿ. ಸರ್ಕಾರದ ಪ್ರಸ್ತಾಪ ಒಪ್ಪಿಕೊಂಡರೆ ನಿಗಮಗಳ ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ ಎಂದು ನನಗೂ ಗೊತ್ತಿದೆ. ಆದರೆ ಅದನ್ನು ಹೇಗೋ ನಿಭಾಯಿಸಬಹುದು. ನೌಕರರು ಕೂಡಲೇ ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಶುರು ಮಾಡಲಿ. ದಿವಂಗತ ಗೋಕುಲ್​ರಾಂ ಉಸ್ತುವಾರಿಯಲ್ಲಿ ನಿಗಮ ಎಷ್ಟು ಸುಸ್ಥಿತಿಯಲ್ಲಿತ್ತು ಎಂಬುದು ಗೊತ್ತಿದೆ. ಆ ಅದ್ಭುತ ಅವಧಿಯನ್ನು ಮತ್ತೊಮ್ಮೆ ತರಲು ಈಗಿನಿಂದಲೇ ಪ್ರಯತ್ನಿಸೋಣ’.

Published On - 2:33 pm, Sun, 13 December 20

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು