AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಞಾನಜ್ಯೋತಿ ನಗರದಲ್ಲಿ ಚಿನ್ನದ ಸರಕ್ಕಾಗಿ ನಡೆದ ಕೊಲೆ ಕೇಸ್; ಇಬ್ಬರು ಬಂಧನ

ರಂಜಿತಾ ವಾಸವಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ಆರೋಪಿಗಳು ವಾಸವಿದ್ದರು. ಕೆಳ ಮಹಡಿಯಲ್ಲಿ ರಂಜಿತಾ ಮತ್ತು ಓಂಕಾರ್ ದಂಪತಿ ಇದ್ದರು. ಕತ್ತು ಸೀಳಿ ಬಳಿಕ ಚಾಕುವನ್ನು ರಂಜಿತಾ ಕೈಯಲ್ಲೇ ಇಟ್ಟು ಆರೋಪಿಗಳು ಪರಾರಿಯಾಗಿದ್ದರು.

ಜ್ಞಾನಜ್ಯೋತಿ ನಗರದಲ್ಲಿ ಚಿನ್ನದ ಸರಕ್ಕಾಗಿ ನಡೆದ ಕೊಲೆ ಕೇಸ್; ಇಬ್ಬರು ಬಂಧನ
ಬಂಧಿತ ಆರೋಪಿಗಳು
Follow us
TV9 Web
| Updated By: sandhya thejappa

Updated on: Jul 12, 2021 | 12:25 PM

ಬೆಂಗಳೂರು: ಜ್ಞಾನಜ್ಯೋತಿ ನಗರದಲ್ಲಿ ನಡೆದ ಮಹಿಳೆ ಹತ್ಯೆ ಕೇಸ್ ಸಂಬಂಧ ಇಬ್ಬರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ರಾಜು, ಇಂದಿರಮ್ಮ ಎಂಬುವವರು ಬಂಧನಕ್ಕೆ ಒಳಗಾದವರು. ಜುಲೈ 10 ರಂದು ಕತ್ತು ಸೀಳಿ ರಂಜಿತಾ ಎಂಬ ಮಹಿಳೆಯನ್ನು ಕೊಲೆಗೈದಿದ್ದರು. ಬಳಿಕ ರಂಜಿತಾ ಕೈಯಲ್ಲಿ ಚಾಕು ಇಟ್ಟು ಪರಾರಿಯಾಗಿದ್ದರು. ಈ ಪ್ರಕರಣ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ರಂಜಿತಾ ವಾಸವಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ಆರೋಪಿಗಳು ವಾಸವಿದ್ದರು. ಕೆಳ ಮಹಡಿಯಲ್ಲಿ ರಂಜಿತಾ ಮತ್ತು ಓಂಕಾರ್ ದಂಪತಿ ಇದ್ದರು. ಕತ್ತು ಸೀಳಿ ಬಳಿಕ ಚಾಕುವನ್ನು ರಂಜಿತಾ ಕೈಯಲ್ಲೇ ಇಟ್ಟು ಆರೋಪಿಗಳು ಪರಾರಿಯಾಗಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡ ಜ್ಞಾನಭಾರತಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಒಂದೇ ಕಟ್ಟಡದ ವಾಸಿಗಳಾಗಿದ್ದರಿಂದ ರಂಜಿತಾ ಹಾಗೂ ಇಂದಿರಾಮ್ಮಗೆ ಪರಿಚಯವಿತ್ತು. ಒಮ್ಮೆ ರಂಜಿತಾಳ ಫೋಟೋ ನೊಡಿದ ವೇಳೆ ಕೊರಳಲಿದ್ದ ಸರ ಕಣ್ಣು ಕುಕ್ಕಿತ್ತು. ನಲವತ್ತು ಗ್ರಾಂ ಚಿನ್ನದ ಸರಕ್ಕಾಗಿ ಇಂದಿರಮ್ಮ ಹೊಂಚು ಹಾಕಿದ್ದಳು. ಮೊದಲಿಗೆ ಸರ ಪಡೆದು ನಂತರ ಕೊಡದೆ ಮೊಸ ಮಾಡುವ ಉದ್ದೇಶ ಇಂದಿರಮ್ಮಗಿತ್ತು. ಆದರೆ ರಂಜಿತಾ ಚಿನ್ನದ ಸರ ಕೊಡಲು ನಿರಾಕರಿಸಿದ್ದಳು.

ಚಿನ್ನದ ಸರಕ್ಕಾಗಿ ನಡೆಯಿತು ಕೊಲೆ ಇಂದಿರಮ್ಮಗೆ ಹಣದ ಸಮಸ್ಯೆ ಇತ್ತು. ಆಕೆಯ ಸ್ನೇಹಿತ ರಾಜಶೇಖರ್​ಗೂ ಕೂಡಾ ಸಾಲದ ಸಮಸ್ಯೆಯಿತ್ತು. ಇವರಿಬ್ಬರು ಮದುವೆಯಾಗದಿದ್ದರೂ ಜೊತೆಯಲ್ಲಿದ್ದರು. ಜುಲೈ 10ರಂದು ಮನೆಗೆ ಮಾತನಾಡಿಸುವ ನೆಪದಲ್ಲಿ ಇಂದಿರಮ್ಮ ಬಂದಳು. ನಂತರ ರಾಜಶೇಖರ್ಗೆ ಕರೆ ಮಾಡಿ ಆತನನ್ನು ಕರೆಸಿಕೊಂಡಿದ್ದಳು. ನಂತರ ಟಿವಿ ವಾಲ್ಯೂಮ್ ಹೆಚ್ಚು ಮಾಡಿ ರಂಜಿತಾಳನ್ನು ಹತ್ಯೆ ಮಾಡಿದ್ದಾರೆ.

ಸರ ರಂಜಿತಾಳದಲ್ಲ ಅಸಲಿಗೆ ಫೋಟೋದಲ್ಲಿದ್ದ 40ಗ್ರಾಂನ ಸರ ಮೃತಳದ್ದಲ್ಲ. ಪರಿಚಯಸ್ಥರ ಬಳಿ ಕಾರ್ಯಕ್ರಮದ ಸಲುವಾಗಿ ಪಡೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದಳು. ಆ ಫೋಟೋ ನೋಡಿ ಇಂದಿರಮ್ಮ ಸರ ಕೇಳಿದ್ದಳು. ಆದರೆ ಸರದ ಅಸಲಿ ಕಥೆಯನ್ನು ರಂಜಿತಾ ಮರೆ ಮಾಚಿದ್ದಳು. ಹತ್ಯೆ ಬಳಿಕ 40 ಗ್ರಾಂ ಚಿನ್ನದ ಸರ ಸಿಗಲಿಲ್ಲ. ಆಕೆಯ ಕೊರಳಿನಲ್ಲಿದ್ದ ಆರು ಗ್ರಾಂ ತಾಳಿ ಮಾತ್ರ ಸಿಕ್ಕಿತ್ತು. ಕಿವಿಯಲ್ಲಿದ್ದ ಓಲೆಗಾಗಿ ಕಿವಿಗಳನ್ನು ಕೊಯ್ದಿದ್ದರು. ಆದರೆ ಅದು ರೊಲ್ಡ್ ಗೊಲ್ಡ್ ಎಂದು ಗೊತ್ತಾಗಿ ಆರೋಪಿಗಳು ಅಲ್ಲೇ ಬಿಸಾಡಿದ್ದರು.

ಇದನ್ನೂ ಓದಿ

ಚನ್ನಪಟ್ಟಣ: ತಾಲೂಕಿನಲ್ಲಿದೆ ಮಾದರಿ ಸರ್ಕಾರಿ ಆಸ್ಪತ್ರೆ, ಇದು ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ! ಏನಿದರ ವಿಶೇಷ?

ಎಂ.ಕೆ.ಹುಬ್ಬಳ್ಳಿಯಲ್ಲಿ ಸ್ನೇಹಿತರ ನಡುವಿನ ಜಗಳ ಬಿಡಿಸಲು ಹೋದ ಡಾಬಾ ಮಾಲೀಕನ ಭೀಕರ ಕೊಲೆ

(jnana jyothi nagar Police arrested two accused for murdering a woman for gold)

ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಪಂದ್ಯದ ಬಳಿಕವೂ ಮುಂದುವರೆದ ಅಭಿಷೇಕ್-ದಿಗ್ವೇಶ್ ವಾಗ್ಯುದ್ಧ
ಪಂದ್ಯದ ಬಳಿಕವೂ ಮುಂದುವರೆದ ಅಭಿಷೇಕ್-ದಿಗ್ವೇಶ್ ವಾಗ್ಯುದ್ಧ
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ