AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡು ಪ್ರಾಣಿಗಳನ್ನ ಕೊಂದು ಟಿಕ್ ಟಾಕ್ ಮಾಡಿದ್ದ ಆರೋಪಿಗಳು ಅಂದರ್​

ಕಲಬುರಗಿ: ಇತ್ತೀಚೆಗೆ ಚೀನಾದ ಟಿಕ್ ಟಾಕ್ ಎಲ್ಲಡೆ ತನ್ನ ಸದ್ದನ್ನು ಜೋರಾಗಿ ಮಾಡ್ತಿದೆ. ಅನೇಕರು ತಮಗಿಷ್ಟವಾದ ವಿಡಿಯೋಗಳನ್ನು ಮಾಡಿ, ಟಿಕ್ ಟಾಕ್​ನಲ್ಲಿ ಹಾಕಿ, ಲೈಕ್, ಕಮೆಂಟ್​ಗಳನ್ನು ನೋಡಿ ಆನಂದ ಪಡ್ತಿದ್ದಾರೆ. ಇದು ಇದಕ್ಕಷ್ಟೇ ಸೀಮಿತವಾಗಿದ್ದರೆ ಯಾವುದೇ ಸಮಸ್ಯೆ ಇರ್ತಿರಲಿಲ್ಲ. ಆದ್ರೆ ಕಲಬುರಗಿಯಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳನ್ನು ಕೊಂದು ಟಿಕ್ ಟಾಕ್ ವಿಡಿಯೋ ಮಾಡುತ್ತಿರುವವರ ಹಾವಾಳಿ ಹೆಚ್ಚಾಗಿದೆ. ಇದು ಅರಣ್ಯ ಇಲಾಖೆಯ ನಿದ್ದೆಗೆಡಿಸುತ್ತಿದೆ. ಇಬ್ಬರು ಆರೋಪಿಗಳ ಬಂಧನ: ಕಲಬುರಗಿ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ದಿನದ ಹಿಂದೆ […]

ಕಾಡು ಪ್ರಾಣಿಗಳನ್ನ ಕೊಂದು ಟಿಕ್ ಟಾಕ್ ಮಾಡಿದ್ದ ಆರೋಪಿಗಳು ಅಂದರ್​
ಸಾಧು ಶ್ರೀನಾಥ್​
| Edited By: |

Updated on: May 24, 2020 | 2:37 PM

Share

ಕಲಬುರಗಿ: ಇತ್ತೀಚೆಗೆ ಚೀನಾದ ಟಿಕ್ ಟಾಕ್ ಎಲ್ಲಡೆ ತನ್ನ ಸದ್ದನ್ನು ಜೋರಾಗಿ ಮಾಡ್ತಿದೆ. ಅನೇಕರು ತಮಗಿಷ್ಟವಾದ ವಿಡಿಯೋಗಳನ್ನು ಮಾಡಿ, ಟಿಕ್ ಟಾಕ್​ನಲ್ಲಿ ಹಾಕಿ, ಲೈಕ್, ಕಮೆಂಟ್​ಗಳನ್ನು ನೋಡಿ ಆನಂದ ಪಡ್ತಿದ್ದಾರೆ. ಇದು ಇದಕ್ಕಷ್ಟೇ ಸೀಮಿತವಾಗಿದ್ದರೆ ಯಾವುದೇ ಸಮಸ್ಯೆ ಇರ್ತಿರಲಿಲ್ಲ. ಆದ್ರೆ ಕಲಬುರಗಿಯಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳನ್ನು ಕೊಂದು ಟಿಕ್ ಟಾಕ್ ವಿಡಿಯೋ ಮಾಡುತ್ತಿರುವವರ ಹಾವಾಳಿ ಹೆಚ್ಚಾಗಿದೆ. ಇದು ಅರಣ್ಯ ಇಲಾಖೆಯ ನಿದ್ದೆಗೆಡಿಸುತ್ತಿದೆ.

ಇಬ್ಬರು ಆರೋಪಿಗಳ ಬಂಧನ: ಕಲಬುರಗಿ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ದಿನದ ಹಿಂದೆ ಮುಳ್ಳು ಹಂದಿಯನ್ನು ಕೊಂದು ಟಿಕ್ ಟಾಕ್ ಮಾಡಿದ್ದ ಇಬ್ಬರನ್ನು ಬಂಧಿಸಿದ್ದಾರೆ. ತಾಲೂಕಿನ ಬೋಳೆವಾಡ ಗ್ರಾಮದ ಅಂಬರೀಶ್ ಮತ್ತು ನಾಗೇಶ್ ಅನ್ನೋ ಇಬ್ಬರು ಯುವಕರನ್ನು ಬಂಧಿಸಿ, ನ್ಯಾಯಂಗ ಬಂಧನಕ್ಕೊಪ್ಪಿಸಿದ್ದಾರೆ. ಬೋಳೆವಾಡ ಗ್ರಾಮದ ಹೊರವಲಯದಲ್ಲಿ ಮುಳ್ಳು ಹಂದಿಯನ್ನು ಭೇಟಿಯಾಡಿದ್ದ ಇವರು, ನಂತರ ಅದರ ಬಗ್ಗೆ ವಿಡಿಯೋಗಳನ್ನು ಮಾಡಿ, ಟಿಕ್ ಟಾಕ್​ನಲ್ಲಿ ಹರಿಬಿಟ್ಟಿದ್ದರು.

ಇದು ಕಲಬುರಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಟ್ಟಿತ್ತು. ಟಿಕ್ ಟಾಕ್ ಐಡಿಯನ್ನು ಪತ್ತೆಮಾಡಿ, ಅದರ ಬೆನ್ನುಬಿದ್ದಾಗ, ವಿಡಿಯೋ ಮಾಡಿ ಹರಿಬಿಟ್ಟವರು ಬೋಳೆವಾಡದ ಇಬ್ಬರು ಅನ್ನೋದನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿದ್ದರು. ಕೊನೆಗೆ ಇಬ್ಬರನ್ನು ಬಂಧಿಸಿದ್ದಾರೆ. ಇದು ಎರಡು ದಿನದ ಹಿಂದೆ ಕಲಬುರಗಿ ಜಿಲ್ಲೆಯಲ್ಲಿ ಟಿಕ್ ಟಾಕ್ ಶೋಕಿಗಾಗಿ ಕಾಡು ಪ್ರಾಣಿಗಳನ್ನು ಕೊಂದು, ಇದೀಗ ಕಂಬಿ ಹಿಂದೆ ಹೋದವರ ಕಥೆ. ಇಂತಹ ಅನೇಕ ಘಟನೆಗಳು ಕಲಬುರಗಿ ಜಿಲ್ಲೆಯಲ್ಲಿ ನಡೆಯುತ್ತಿವೆ. ಇದು ಅರಣ್ಯ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!