AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿಯಲ್ಲಿ ಜಾನವಾರು ಕಳ್ಳತನ ಗ್ಯಾಂಗ್: ಹೈಫೈ ಕಾರಲ್ಲಿ ಬರ್ತಾರೆ ಎತ್ತಾಕೊಂಡು ಹೋಗ್ತಾರೆ..!

ಕಲಬುರಗಿ ನಗರದಲ್ಲಿ ಇತ್ತೀಚೆಗೆ ಮನೆಗಳ್ಳತನ, ಚೈನ್ ಸ್ನ್ಯಾಚರ್ ಹಾವಳಿ ಹೆಚ್ಚಾಗಿದೆ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಳ್ಳರ ಕೈಚಳಕಕ್ಕೆ ಬ್ರೇಕ್​​​​ ಹಾಕಲು ಆಗುತ್ತಿಲ್ಲ. ಇದರ ಮಧ್ಯೆ ನಗರದಲ್ಲಿ ಮತ್ತೊಂದು ಗ್ಯಾಂಗ್​ ಆ್ಯಕ್ಟೀವ್​ ಆಗಿದೆ.

ಕಲಬುರಗಿಯಲ್ಲಿ ಜಾನವಾರು ಕಳ್ಳತನ ಗ್ಯಾಂಗ್: ಹೈಫೈ ಕಾರಲ್ಲಿ ಬರ್ತಾರೆ ಎತ್ತಾಕೊಂಡು ಹೋಗ್ತಾರೆ..!
ಸಾಂದರ್ಭಿಕ ಚಿತ್ರ
Follow us
ರಮೇಶ್ ಬಿ. ಜವಳಗೇರಾ
|

Updated on: May 22, 2023 | 7:36 AM

ಕಲಬುರಗಿ: ಚಿನ್ನ ಹಣವನ್ನು ಕಳ್ಳತನ ಮಾಡುವ ಗ್ಯಾಂಗ್​​​​ಗಳಿವೆ. ಆದ್ರೆ, ಕಲಬುರಗಿ(Kalaburagi) ನಗರದಲ್ಲಿ ಜಾನುವಾರು ಕಳ್ಳತನಕ್ಕಾಗಿಯೇ ಸಪರೇಟ್​​​​​ ಗ್ಯಾಂಗ್(cattle Thieves Gang )​​​​​ ಇದೆ. ರಾತ್ರಿ ವೇಳೆ ರಸ್ತೆಯಲ್ಲಿರುವ ಜಾನುವಾರುಗಳನ್ನೇ ಎತ್ತಾಕೊಂಡು ಹೋಗಿ​ಸಾವಿರಾರು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಹೌದು.. ಅದು ನಡುರಾತ್ರಿ 2 ಗಂಟೆ ಸಮಯ. ರಸ್ತೆಯಲ್ಲಿ ಕರುವಿನೊಂದಿಗೆ ಹಸು ಇತ್ತು. ಕಾರ್​​ನಲ್ಲಿ ಬರುವ ದುಷ್ಕರ್ಮಿಗಳು ದಿಢೀರನೇ ಕರುವನ್ನು ಎತ್ತಿಕೊಂಡಿದ್ದಾರೆ. ಆಗ ಹಸು ಪ್ರತಿರೋಧ ತೋರುತ್ತೆ. ಆದ್ರೆ ಕರುಣೆ ಇಲ್ಲದ ಕಟುಕರು ಕರುವನ್ನು ಹಾಕೊಂಡು ಕೆಲವೇ ಕ್ಷಣಗಳಲ್ಲಿ ಎಸ್ಕೇಪ್ ಆಗಿದ್ದಾರೆ. ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇನ್ನು ಇಂತಹದೆಂದು ಘಟನೆ ನಡೆದಿದ್ದು, ಕಲಬುರಗಿ ನಗರದ ಜೇವರ್ಗಿ ಕಾಲೋನಿಯಲ್ಲಿ.

ಕಲಬುರಗಿ ನಗರದಲ್ಲಿ ಇತ್ತೀಚೆಗೆ ಮನೆಗಳ್ಳತನ, ಚೈನ್ ಸ್ನ್ಯಾಚರ್ ಹಾವಳಿ ಹೆಚ್ಚಾಗಿದೆ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಳ್ಳರ ಕೈಚಳಕಕ್ಕೆ ಬ್ರೇಕ್​​​​ ಹಾಕಲು ಆಗುತ್ತಿಲ್ಲ. ಇದರ ಮಧ್ಯೆ ನಗರದಲ್ಲಿ ಮತ್ತೊಂದು ಗ್ಯಾಂಗ್​ ಆ್ಯಕ್ಟೀವ್​ ಆಗಿದೆ. ಮೂಕ ಪ್ರಾಣಿಗಳಿಗೂ ಇದೀಗ ಕಳ್ಳರ ಕಾಟ ಶುರುವಾಗಿದೆ. ರಾತ್ರಿ ವೇಳೆ ಬಿಡಾಡಿ ಜಾನುವಾರು ಕದಿಯೋ ಖದೀಮರು ಗೂಡ್ಸ್ ವಾಹನದಲ್ಲಿ ಬಂದ್ರೆ ಪೊಲೀಸರಿಗೆ ಸಿಕ್ಕಿ  ಬೀಳುತ್ತೇವೆ ಎಂದು ಹೊಸ ಟೆಕ್ನಿಕ್​​ ಮಾಡಿದ್ದಾರೆ. ರಾತ್ರಿವೇಳೆ ಹೈಫೈ ಕಾರಿನಲ್ಲಿ ಬರುವ ಖದೀಮರು ಬೀಡಾಡಿ ಜಾನುವಾರುಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ.

ಕಾರ್​​ಗಳಲ್ಲಿ ಬರೋ ದುಷ್ಕರ್ಮಿಗಳು ಜಾನುವಾರುಗಳನ್ನು ಕದ್ದು, ಮನೆಯಲ್ಲಿ ಸಾಕಲು ತಗೆದುಕೊಂಡ ಹೋಗುತ್ತಿಲ್ಲ. ಕಸಾಯಿಖಾನೆಗೆ ಕೊಟ್ಟು ಸಾವಿರಾರು ರೂಪಾಯಿಗೆ ಮಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಕಲಬುರಗಿ ನಗರದಲ್ಲಿ ಜಾನುವಾರುಗಳನ್ನು ಕದಿಯುವ ಕಳ್ಳರು, ಸ್ಥಳಿಯವಾಗಿ ಇಲ್ಲವೇ‌ ತೆಲಂಗಾಣ ರಾಜ್ಯದಲ್ಲಿ ಇರೋ ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರಂತೆ. ಮನೆಯಲ್ಲಿರೋ ಜಾನುವಾರುಗಳಾದ್ರೆ ಪೊಲೀಸರಿಗೆ ದೂರು ಕೊಡ್ತಾರೆ.. ಇಲ್ಲವೇ ಹುಡುಕ್ತಾರೆ. ಆದ್ರಿಂದ ಬೀಡಾಡಿ ಜಾನುವಾರುಗಳನ್ನು ಕದ್ದರೆ ಯಾರು ಕೇರ್ ಮಾಡಲ್ಲ ಅಂತ ತಿಳಿದಿರಬೇಕು.

ಜೇವರ್ಗಿ ಕಾಲೋನಿಯಲ್ಲಿ ನಡೆದ ಕರುವಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದ್ರೆ, ಪೊಲೀಸರು ಹಣದಾಸೆಗೆ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಅನ್ನೋ ಆರೋಪ ಕೂಡಾ ಕೇಳಿ ಬರ್ತಿವೆ. ಕಾನೂನು ರಕ್ಷಕರು ಮೂಕ ಪ್ರಾಣಿಗಳನ್ನು ಕದ್ದು ಮಾರಾಟ ಮಾಡ್ತಿರೋ ದುಷ್ಟರನ್ನು ಪತ್ತೆ ಮಾಡಿ, ಕಠಿಣ ಶಿಕ್ಷೆಯಾಗುವಂತೆ ಮಾಡಬೇಕಿದೆ.

ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?