AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ರಾಮೇಶ್ವರ ಮಾತ್ರವಲ್ಲ, ನರೋಣಾ ಗ್ರಾಮದಲ್ಲೂ ಶಿವಲಿಂಗ ಸ್ಥಾಪಿಸಿದ್ದ ಶ್ರೀರಾಮ‌

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ವಿಗ್ರಹ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾದ ನಂತರ ದೇಶಾದ್ಯಂತ ರಾಮಾಯಣಕ್ಕೆ ಸಾಕ್ಷಿಯಾಗಿ ನಿಂತಿರುವ ಹಲವು ಗ್ರಾಮಗಳು ಹೆಸರುಗಳು ಮುನ್ನೆಲೆಗೆ ಬಂದಿವೆ. ಕರ್ನಾಟಕ ಭಾಗದಲ್ಲಿ ಸೀತಾರಾಮ ಸಂಚರಿಸಿದ್ದಕ್ಕೆ ಅನೇಕ ಕುರುಹುಗಳು ಸಿಕ್ಕಿದ್ದು, ಇದೀಗ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣಾ ಗ್ರಾಮದಲ್ಲಿ ರಾಮ‌ ಶಿವಲಿಂಗ ಸ್ಥಾಪಿಸಿದ ವಿಚಾರ ಬೆಳಕಿಗೆ ಬಂದಿದೆ.

ಕಲಬುರಗಿ: ರಾಮೇಶ್ವರ ಮಾತ್ರವಲ್ಲ, ನರೋಣಾ ಗ್ರಾಮದಲ್ಲೂ ಶಿವಲಿಂಗ ಸ್ಥಾಪಿಸಿದ್ದ ಶ್ರೀರಾಮ‌
ರಾಮೇಶ್ವರದಲ್ಲಿ ಮಾತ್ರವಲ್ಲದೆ ಕಲಬುರಗಿಯ ನರೋಣಾ ಗ್ರಾಮದಲ್ಲೂ ಶ್ರೀರಾಮನು ಶಿವಲಿಂಗ ಸ್ಥಾಪಿಸಿದ್ದನು
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: Rakesh Nayak Manchi|

Updated on:Jan 04, 2024 | 8:50 AM

Share

ಕಲಬುರಗಿ, ಜ.4: ಅಯೋಧ್ಯಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದೆ. ಈ ನಡುವೆ ದೇಶಾದ್ಯಂತ ರಾಮಾಯಣಕ್ಕೆ ಸಾಕ್ಷಿಯಾಗಿ ನಿಂತಿರುವ ಹಲವು ಗ್ರಾಮಗಳು ಹೆಸರುಗಳು ಮುನ್ನೆಲೆಗೆ ಬಂದಿವೆ. ಕರ್ನಾಟಕ ಭಾಗದಲ್ಲಿ ಸೀತಾರಾಮ ಸಂಚರಿಸಿದ್ದಕ್ಕೆ ಅನೇಕ ಕುರುಹುಗಳು ಸಿಕ್ಕಿದ್ದು, ಇದೀಗ ಕಲಬುರಗಿ (Kalaburagi) ಜಿಲ್ಲೆಯ ಆಳಂದ ತಾಲೂಕಿನ ನರೋಣಾ (Narona) ಗ್ರಾಮದಲ್ಲಿ ರಾಮ‌ ಶಿವಲಿಂಗ (Shiv Ling) ಸ್ಥಾಪಿಸಿದ ವಿಚಾರ ಬೆಳಕಿಗೆ ಬಂದಿದೆ.

ಆಯೋಧ್ಯ ಶ್ರೀರಾಮನಿಗೂ ಕಲಬುರಗಿ ಜಿಲ್ಲೆಗೂ ಅವಿನಾಭಾವ ನಂಟು ಇದೆ ಎಂಬುದಕ್ಕೆ ನರೋಣಾ ಗ್ರಾಮ ಸಾಕ್ಷಿಯಾಗಿ ನಿಂತಿದೆ. ಅಖಂಡ ಭಾರತದಲ್ಲಿ ರಾಮೇಶ್ವರದಲ್ಲಿ ಬಿಟ್ಟರೆ ನರೋಣಾ ಗ್ರಾಮದಲ್ಲಿ ಮಾತ್ರ ರಾಮ‌ ಸ್ಥಾಪಿಸಿದ ಶಿವಲಿಂಗವನ್ನು ಕಾಣಬಹುದು. ಈ ಶಿವಲಿಂಗ ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ.

ಬ್ರಾಹ್ಮಣನಾಗಿದ್ದ ರಾಕ್ಷಸರ ರಾಜ ರಾವಣನ ಸಂಹಾರದ ಬಳಿಕ ಪ್ರಭು ಶ್ರೀರಾಮನಿಗೆ ಬ್ರಹ್ಮಹತ್ಯೆ ದೋಷ ಕಾಡುತ್ತಿತ್ತು. ರಾವಣ ಹತ್ಯೆಯ ದೋಷ ಪರಿಹಾರಾರ್ಥವಾಗಿ ರಾಮನು ಅನೇಕ ಪೂಜೆಗಳನ್ನು ನಡೆಸಿದ್ದನು. ಅಲ್ಲದೆ, ನರೋಣಾ ಗ್ರಾಮದಲ್ಲೇ ಶಿವಲಿಂಗ ಸ್ಥಾಪನೆ ಮಾಡಿದ್ದನು.

ಇದನ್ನೂ ಓದಿ: ಬಾಗಲಕೋಟೆ: ಬಿಲ್‌ಕೆರೂರು ಗ್ರಾಮಕ್ಕೂ ರಾಮಾಯಣಕ್ಕೂ ಇದೆ ನಂಟು; ಏನದು ಗೊತ್ತಾ?

ಶಿವ ಭಕ್ತನಾಗಿದ್ದ ರಾವಣ ಕೋಟಿ ಲಿಂಗ ಸ್ಥಾಪನೆಯ ಹರಕೆ ಹೊತ್ತುಕೊಂಡಿದ್ದನು. ಇದನ್ನು ಪೂರ್ಣಗೊಳಿಸುವ ಮುನ್ನವೇ ಪ್ರಭು ಶ್ರೀರಾಮನಿಂದ ರಾವಣನ ಸಂಹಾರವಾಗಿದೆ. ಹೀಗಾಗಿ ಪ್ರತಿದಿನ ರಾತ್ರಿ ಶಿವಲಿಂಗ ಸ್ಥಾಪನೆ ಬಗ್ಗೆ ಶ್ರೀರಾಮನಿಗೆ ಕನಸು ಬೀಳುತ್ತಿತ್ತಂತೆ. ಇದೇ ಕಾರಣಕ್ಕೆ ಕೋಟಿ ಶಿವಲಿಂಗವನ್ನು (ಕೊನೆಯ ಶಿವಲಿಂಗ) ನರೋಣಾ ಗ್ರಾಮದಲ್ಲಿ ಸ್ಥಾಪಿಸಿದ್ದನು.

ಅಂದಿನ ಚಿಮಣಾಪುರ ಗ್ರಾಮಕ್ಕೆ ಬಂದಿದ್ದ ಶ್ರೀರಾಮ‌, ಗ್ರಾಮದ ಕ್ಷೆಮಲಿಂಗೇಶ್ವರ ದೇವಸ್ಥಾನ ಸಪ್ತ ಕುಂಡದಲ್ಲಿ ಗಂಗಾಸ್ಥಾನ ಮಾಡಿದ್ದನು. ಬಳಿಕ ಅಲ್ಲಿಯೇ ಶಿವಲಿಂಗ ಸ್ಥಾಪನೆ ಮಾಡಿ ಪಾಪ ಪರಿಹಾರ ಮಾಡಿಕೊಂಡಿದ್ದನು. ಅಲ್ಲದೆ, ಚಿಮಣಾಪುರವನ್ನ ನಾರಾವಣ ಎಂದು ಶ್ರೀರಾಮನೇ ಹೆಸರಿಟ್ಟಿದ್ದ.

ಕಾಲ ಕ್ರಮೇಣ ನಾರಾವಣ ಹೆಸರು ನರೋಣಾ ಆಗಿ ಬದಲಾವಣೆ ಆಯಿತು. ನರೋಣಾದಲ್ಲಿ ಇಂದಿಗೂ ರಾಮನಿಂದ ಸ್ಥಾಪಿತವಾದ ಶಿವಲಿಂಗ ಪ್ರಸಿದ್ಧಿಯಾಗಿದೆ. ರಾಮಾಯಣ ಕಾಲದ ಪ್ರಸಿದ್ಧ ಈ ಕ್ಷೇತ್ರಕ್ಕೆ ನೂರಾರು ಭಕ್ತರು ಆಗಮಿಸಿ ನಿತ್ಯವೂ ದರ್ಶನ ನಡೆಯುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:33 am, Thu, 4 January 24

ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು