AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಬಿಲ್‌ಕೆರೂರು ಗ್ರಾಮಕ್ಕೂ ರಾಮಾಯಣಕ್ಕೂ ಇದೆ ನಂಟು; ಏನದು ಗೊತ್ತಾ?

ಸದ್ಯ ದೇಶದಾದ್ಯಂತ‌ ರಾಮಮಂದಿರದ್ದೆ ಚರ್ಚೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಇಂತಹ ಸಮಯದಲ್ಲಿ ರಾಮಚರಿತೆಯ ಕುರುಹುಗಳು ವಿಶೇಷ‌ ಮಹತ್ವ ಪಡೆದುಕೊಳ್ಳುತ್ತಿವೆ. ಅಂತ‌ಹ ಕುರುಹು ಹೊಂದಿದ ಸ್ಥಳದಲ್ಲಿ ಬಿಲ್‌ಕೆರೂರು ಎಂಬ ಗ್ರಾಮ ಕೂಡ ಒಂದಾಗಿದ್ದು, ರಾಮನ ಬಿಲ್ಲಿನಿಂದಲೇ ಬಿಲ್‌ಕೆರೂರು ಎಂದು ಹೆಸರು ಪಡೆದುಕೊಂಡಿದೆ.

ಬಾಗಲಕೋಟೆ: ಬಿಲ್‌ಕೆರೂರು ಗ್ರಾಮಕ್ಕೂ ರಾಮಾಯಣಕ್ಕೂ ಇದೆ ನಂಟು; ಏನದು ಗೊತ್ತಾ?
ರಾಮನ ಬಿಲ್ಲಿನಿಂದಲೇ ಈ ಗ್ರಾಮವು ಬಿಲ್‌ಕೆರೂರು ಎಂದು ಹೆಸರು ಪಡೆದುಕೊಂಡಿದೆ
ರವಿ ಹೆಚ್ ಮೂಕಿ, ಕಲಘಟಗಿ
| Edited By: Rakesh Nayak Manchi|

Updated on:Jan 04, 2024 | 8:36 AM

Share

ಬಾಗಲಕೋಟೆ, ಜ.4: ಒಂದು ಕಡೆ ಹಳ್ಳ, ಹಳ್ಳದ ಹೊಂಡದಲ್ಲಿ ನೀರು. ಪಕ್ಕದಲ್ಲಿ ದೇವಸ್ಥಾನ, ದೇವಸ್ಥಾನದ‌ ಮುಂದೆ ಲವಕುಶರ‌ ಕಟ್ಟೆಗಳು. ಇವೆಲ್ಲವನ್ನೂ ಬಾಗಲಕೋಟೆ (Bagalkot) ತಾಲ್ಲೂಕಿನ ಬಿಲ್‌ಕೆರೂರು ಗ್ರಾಮದಲ್ಲಿ ನೋಡಬಹುದು. ಬಿಲ್‌ಕೆರೂರು ಹೆಸರಿನಲ್ಲೇ ಬಿಲ್ ಅಂತಿದೆ. ಆದರೆ ಇದು ಸಾಮಾನ್ಯವಾಗಿ ಬಂದಿರುವಂತದ್ದಲ್ಲ. ಇದಕ್ಕೆ ರಾಮಾಯಣ ಇತಿಹಾಸವಿದೆ. ರಾಮನ ಬಿಲ್ಲಿನಿಂದ ಗ್ರಾಮಕ್ಕೆ‌ ಬಿಲ್‌ಕೆರೂರು (Bilkeruru) ಅಂತ‌ ಹೆಸರು ಬಂದಿದೆ.

ರಾಮಸೀತೆ ಲಕ್ಷ್ಮಣ ವನವಾಸದಲ್ಲಿದ್ದಾಗ ಈ ಜಾಗದಲ್ಲಿ ಸಂಚರಿಸುತ್ತಿದ್ದರಂತೆ. ಆಗ ಸೀತೆಗೆ ವಿಪರೀತ‌ ಬಾಯಾರಿಕೆ ಆಗಿತ್ತಂತೆ. ಸುತ್ತಮುತ್ತ ಎಲ್ಲೂ ನೀರು ಸಿಗದಿದ್ದಾಗ ರಾಮ‌ ತನ್ನ ಬಿಲ್ಲಿನಿಂದ ಬಾಣ ಬಿಟ್ಟಾಗ‌ ಗಂಗೆ ಚಿಮ್ಮಿದ್ದಾಳೆ. ಆ ನೀರನ್ನು ಕುಡಿದು ಸೀತಾಮಾತೆ ದಾಹ ನೀಗಿಸಿಕೊಂಡಿದ್ದಳು ಎಂಬುದು ನಂಬಿಕೆ.

ರಾಮ ಬಿಲ್ಲಿನಿಂದ‌ ನೆಲಕ್ಕೆ ಬಾಣ ಬಿಟ್ಟು ನೀರು ಹೊರತೆಗೆದ ಕಾರಣ ಅಲ್ಲಿ‌ ಕೆರೆ ನಿರ್ಮಾಣವಾಗಿದೆ. ಮೊದಲು ಈ ಸ್ಥಳಕ್ಕೆ ಬಿಲ್‌ ಕೆರಿ ಅಂತ ಕರೆಯುತ್ತಿದ್ದರು. ಕಾಲಕ್ರಮೇಣ ಅದು ಬಿಲ್‌ಕೆರೂರು ಆಗಿ ಬದಲಾಗಿದೆ. ರಾಮನ ಬಿಲ್ಲಿನಿಂದ‌‌ ಗ್ರಾಮಕ್ಕೆ ಬಿಲ್‌ಕೆರೂರು ಎಂದು ಹೆಸರು ಬಂದಿದ್ದು ಗ್ರಾಮ ರಾಮಚರಿತೆಯ‌ ಒಂದು ಕುರುಹಾಗಿ ಎಲ್ಲರ‌ ಗಮನ ಸೆಳೆಯುತ್ತಿದೆ.

ರಾಮನ ಶಕ್ತಿಗೆ ಸಾಕ್ಷಿ ರಾಮತೀರ್ಥ ಹೊಂಡ

ಈ ಹೊಂಡದ ವಿಶೇಷತೆ ಏನೆಂದರೆ, ಅಂದು ನಿರ್ಮಾಣವಾದ ಈ ಹೊಂಡಕ್ಕೆ ರಾಮತೀರ್ಥ ಹೊಂಡ ಅಂತ ಕರೆಯುತ್ತಾರೆ. ಈ ಹಳ್ಳಕ್ಕೆ ರಾಮತೀರ್ಥ‌ಹಳ್ಳ ಅಂತಾನು ಕರೆಯುತ್ತಾರೆ. ಈ‌ ಹೊಂಡದ ನೀರು ಎಂದು ಕೂಡ ಬತ್ತಿಲ್ಲ ಇದು ರಾಮನ ಶಕ್ತಿಗೆ ಸಾಕ್ಷಿ ಅಂತ ಸ್ಥಳೀಯರ‌‌ ನಂಬಿಕೆ. ಇನ್ನು ಹೊಂಡದ ಪಕ್ಕದಲ್ಲಿ ಒಂದು ಪ್ರಾಚೀನ ಗುಡಿಯೂ ಇದೆ. ಅದಕ್ಕೆ ರಾಮಲಿಂಗೇಶ್ವರ ದೇವಸ್ಥಾನ ಎಂದು ಕರೆಯುತ್ತಾರೆ.

ಇಲ್ಲಿಯೇ ಶ್ರೀರಾಮ, ಸೀತೆ ಕೆಲ ಕಾಲ ಇದ್ದರು ಎನ್ನುವ ಐತಿಹ್ಯ ಇದೆ. ರಾಮಲಿಂಗೇಶ್ವರ ಎಂದು ಕರೆಯುವ ಪುರಾತನ ದೇವಾಲಯದಲ್ಲಿ ಹನಮಂತ ಹಾಗೂ ಲಿಂಗುವಿನ ಮೂರ್ತಿಗಳು ಇವೆ. ಇನ್ನು ದೇವಾಲಯದ ಎದುರಿಗೆ ಎರಡು ಕಟ್ಟೆಗಳು ಇದ್ದು, ಅವುಗಳಿಗೆ ಲವ-ಕುಶ ಕಟ್ಟೆಗಳು ಎಂದು ಕರೆಯುತ್ತಾರೆ.

ಇದನ್ನೂ ಓದಿ: ರಾಮಚರಿತೆ ಸಾರುತ್ತಿರುವ ಬಾಗಲಕೋಟೆಯ ಸೀತೆಮನೆ ಗ್ರಾಮ; ಬರಗಾಲದಲ್ಲೂ ಬತ್ತದ ಸೀತಾ ಹೊಂಡ

ಈ ಕಟ್ಟೆಗಳ ಮೇಲೆ ಲವ-ಕುಶ ಆಟ ಆಡುತ್ತಿದ್ದರು ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಕಟ್ಟೆ‌‌ ಮೇಲೆ ಲವಕುಶರ‌ ಪಾದಗಳು‌‌ ಇವೆ. ಅವುಗಳ ಪಕ್ಕದಲ್ಲಿ ಕಲ್ಲಿನ ಗುಂಡು ಇದ್ದು, ಲವಕುಶ ಕಲ್ಲು ಎಂದು ಕರೆಯುತ್ತಾರೆ. ಜನರು ಈಗಲೂ ಆ ಕರಿಕಲ್ಲಿನ ಗುಂಡು ಎತ್ತುವ ಸಂಪ್ರದಾಯ ಇದೆ. ಗುಂಡು ಸರಳವಾಗಿ ಎದ್ದರೆ ತಮ್ಮ ಬೇಡಿಕೆ ಈಡೇರುತ್ತವೆ, ಭಾರವಾದರೆ ಕೆಲಸ ಆಗಲ್ಲ ಎನ್ನುವ ನಂಬಿಕೆ.

ಪ್ರತಿ ವರ್ಷ ಶ್ರಾವಣದ‌ ದಿನ‌ದಂದು ರಾಮಭಕ್ತರು ಇಲ್ಲಿಗೆ ಬಂದು ವಿಶೇಷ ಪೂಜೆ‌ ಪುನಸ್ಕಾರ‌ ಮಾಡುತ್ತಾರೆ. ಒಟ್ಟಿನಲ್ಲಿ ರಾಮಮಂದಿರ ಉದ್ಘಾಟನೆಯ ಈ ಸಂದರ್ಭದಲ್ಲಿ ರಾಮನ ಅನೇಕ‌ ಕುರುಹುಗಳು ಚರ್ಚೆಗೆ ಬರುತ್ತಿದ್ದು, ರಾಮನ ಚರಿತೆಗೆ ಸಾಕ್ಷಿ ಹೇಳುವಂತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 am, Thu, 4 January 24

Follow Us
Ravi H Mooki
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?