ಕಲಬುರಗಿಯಲ್ಲಿ ಹಾಡಹಗಲೇ ಪುರಸಭೆ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆ!

ಶಹಬಾದ್ ಗಿರೀಶ್ ಕಂಬಾನೂರ್ ಮೇಲೆ ಅಟ್ಯಾಕ್ ಮಾಡಿ,  ಹಾಡಹಗಲೇ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಗಿರೀಶ್, ಶಹಬಾದ್ ಪುರಸಭೆ ಮಾಜಿ ಅಧ್ಯಕ್ಷರಾಗಿದ್ದರು.  ಗಿರೀಶ ಪತ್ನಿ ಸದ್ಯ ಶಹಬಾದ್ ನಗರಸಭೆ ಅಧ್ಯಕ್ಷೆಯಾಗಿದ್ದಾರೆ.  ಎರಡು ವರ್ಷದ ಹಿಂದೆ ಗಿರೀಶ್ ಸಹೋದರನ ಬರ್ಬರ ಕೊಲೆಯಾಗಿತ್ತು. ಶಹಬಾದ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

ಕಲಬುರಗಿಯಲ್ಲಿ ಹಾಡಹಗಲೇ ಪುರಸಭೆ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆ!
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Jul 11, 2022 | 4:29 PM

ಕಲಬುರಗಿ: ಹಾಡಹಗಲೇ ಪುರಸಭೆ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆ ಮಾಡಲಾಗಿದೆ. ಈ ಘಟನೆಯು ಕಲಬುರಗಿ ಜಿಲ್ಲೆಯ ಶಹಬಾದ್  ನಡೆದಿದೆ.   ಶಹಬಾದ್ ಪುರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೂರ್(40) ಕೊಲೆಯಾದ ವ್ಯಕ್ತಿ . ಶಹಬಾದ್ ಗಿರೀಶ್ ಕಂಬಾನೂರ್ ಮೇಲೆ ಅಟ್ಯಾಕ್ ಮಾಡಿ,  ಹಾಡಹಗಲೇ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಗಿರೀಶ್, ಶಹಬಾದ್ ಪುರಸಭೆ ಮಾಜಿ ಅಧ್ಯಕ್ಷರಾಗಿದ್ದರು.  ಗಿರೀಶ ಪತ್ನಿ ಸದ್ಯ ಶಹಬಾದ್ ನಗರಸಭೆ ಅಧ್ಯಕ್ಷೆಯಾಗಿದ್ದಾರೆ.  ಎರಡು ವರ್ಷದ ಹಿಂದೆ ಗಿರೀಶ್ ಸಹೋದರನ ಬರ್ಬರ ಕೊಲೆಯಾಗಿತ್ತು. ಶಹಬಾದ್ ಠಾಣಾ ವ್ಯಾಪ್ತಿಯಲ್ಲಿ ಈ  ಘಟನೆ ನಡೆದಿದೆ.

ಇದನ್ನು ಓದಿ: ಟೆಕ್ನಾಲಜಿ ಬಳಸಿಕೊಂಡು ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

ಜಿಎಸ್​ಟಿ ಅಧಿಕಾರಿಗಳ ಸೋಗಿನಲ್ಲಿ ಹೆದ್ದಾರಿಯಲ್ಲಿ ದರೋಡೆ

ಇದನ್ನೂ ಓದಿ
One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್​ ಹೋಗಿ
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!

ಬೆಂಗಳೂರು: ಜಿಎಸ್​ಟಿ ಅಧಿಕಾರಿಗಳ ಸೋಗಿನಲ್ಲಿ ಹೆದ್ದಾರಿಯಲ್ಲಿ ದರೋಡೆ ಮಾಡಲಾಗಿದೆ.  ದಾಬಸ್​ಪೇಟೆ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದ್ದು,  ನೆಲಮಂಗಲ ಮೂಲದ ಆರೋಪಿ ಉದಯ್ ಕುಮಾರ್(38) ತುಮಕೂರು ಜಿಲ್ಲೆಯ ಕೊರಟಗೆರೆಯ ಸದಾನಂದ(50) ಸೆರೆ ಹಿಡಿಯಲಾಗಿದೆ.  ಲಾರಿಯಲ್ಲಿದ್ದ ವಸ್ತುಗಳಿಗೆ ಇ-ಬಿಲ್ ಇಲ್ಲವೆಂದು ಬೆದರಿಕೆ ಹಾಕಲಾಗಿದ್ದು,  ಚಾಲಕ ಜಿತೇಂದ್ರಸಿಂಗ್ ಮೂಲಕ ಮಾಲೀಕರ ಬಳಿ ಹಣ ಬೇಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬಾಂಬೆ ಮೂಲದ ರಾಜೇಂದ್ರ ಕೊಟ್ಯಾನ್​ಗೆ ಇಬ್ಬರಿಂದ ಬೆದರಿಕೆಯನ್ನು ಮಾಡಲಾಗಿದೆ. ಆರೋಪಿಗಳು  1,15,000 ರೂ. ವರ್ಗಾವಣೆ ಮಾಡಿಸಿಕೊಂಡಿದ್ದು, ಜಿಎಸ್​​ಟಿ ಅಧಿಕಾರಿಗಳೆಂದು ಸುಳ್ಳು ಹೇಳಿ ಹಣ ಪಡೆದು ವಂಚನೆ ಮಾಡಿದ್ದಾರೆ.  ದಾಬಸ್​​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.