AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪ: ಕರುವನ್ನು ಮಗುವಂತೆ ತೊಟ್ಟಿಲಲ್ಲಿಟ್ಟು ತೊಟ್ಟಿಲು ಶಾಸ್ತ್ರ ಮಾಡಿದ ಕಲಬುರಗಿ ಮಹಿಳಾ ಪಿಎಸ್ಐ ಕುಟುಂಬ

ಭರ್ಜರಿ ಊಟ ಸಿದ್ಧವಾಗಿತ್ತು.. ಬಂಧು ಬಳಗವೆಲ್ಲಾ ಮನೆಗೆ ಬಂದಿತ್ತು.. ಊರವರೆಲ್ಲಾ ಜಮಾಯಿಸಿ ಸಂಭ್ರಮದಿಂದ ತೊಟ್ಟಿಲು ಶಾಸ್ತ್ರ ಶುರು ಮಾಡಿದ್ರು.. ಆದ್ರೆ ತೊಟ್ಟಿಲಿನಲ್ಲಿದ್ದ ಮಗುವನ್ನ ನೋಡಿದ್ರೆ ನೀವೇ ಶಾಕ್ ಆಗ್ತೀರಾ..

ಅಪರೂಪ: ಕರುವನ್ನು ಮಗುವಂತೆ ತೊಟ್ಟಿಲಲ್ಲಿಟ್ಟು ತೊಟ್ಟಿಲು ಶಾಸ್ತ್ರ ಮಾಡಿದ ಕಲಬುರಗಿ ಮಹಿಳಾ ಪಿಎಸ್ಐ ಕುಟುಂಬ
ಅಪರೂಪದ ತೊಟ್ಟಿಲು ಶಾಸ್ತ್ರಕ್ಕೆ ಸಾಕ್ಷಿಯಾದ ಕಲಬುರಗಿ, ಮಗುವಂತೆ ಕರುವನ್ನು ತೊಟ್ಟಿಲಲ್ಲಿಟ್ಟು ಶಾಸ್ತ್ರ ಮಾಡಿದ ಮಹಿಳಾ ಪಿಎಸ್ಐ ಕುಟುಂಬ
TV9 Web
| Edited By: |

Updated on:Dec 17, 2021 | 8:23 AM

Share

ಕಲಬುರಗಿ: ಜಿಲ್ಲೆ ಅಪರೂಪದ ತೊಟ್ಟಿಲು ಶಾಸ್ತ್ರಕ್ಕೆ ಸಾಕ್ಷಿಯಾಗಿದೆ. ಕಲಬುರಗಿ ನಗರದ ರಾಜಾಪುರ ಬಡಾವಣೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಹೂಗಳಲ್ಲೇ ಸಿಂಗಾರ.. ಬಲೂನ್ ಕಟ್ಟಿ ಅಲಂಕಾರ ಮಾಡಲಾಗಿತ್ತು. ಮನೆ ತುಂಬಾ ಸಂಭ್ರಮ ಸಡಗರ.. ಬಂದು ಬಳಗವೆಲ್ಲಾ ಸಂತೋಷದಲ್ಲಿ ಮಿಂದಿದ್ದರು. ತೊಟ್ಟಿಲು ಕೂಡ ಸಿದ್ಧವಾಗಿತ್ತು. ಇನ್ಯಾಕೆ ತಡ ಮಗುವನ್ನ ಕರ್ಕೊಂಡ್ ಬಂದು ತೊಟ್ಟಿಲಲ್ಲಿ ಮಲಗಿಸಿ ತೊಟ್ಟಿಲು ಶಾಸ್ತ್ರ ಮಾಡುವುದೇ ಎಂದಾಗ ಅಲ್ಲಿ ಮಗು ಇರಲಿಲ್ಲ ಇದದ್ದು ಕರು.

ಇದೇನಿದು ತೊಟ್ಟಿಲು ಶಾಸ್ತ್ರ ಅಂದ್ರೆ ಮಗು ಅನ್ಕೊಂಡ್ವಿ.. ಇಲ್ಲಿ ಕರು ಕರ್ಕೊಂಡ್ ಬಂದು ತೊಟ್ಟಿಲಿನಲ್ಲಿ ಕೂರಿಸಿ ತೂಗುತ್ತಿದ್ದಾರೆ ಅಂದ್ರಾ.. ಯಾಕಂದ್ರೆ ಇದು ಕರುವಿಗಾಗಿ ಮಾಡಿರೋ ತೊಟ್ಟಿಲು ಶಾಸ್ತ್ರನೇ.. ಅಷ್ಟಕ್ಕೂ ಕಲಬುರಗಿ ನಗರದ ರಾಜಾಪುರ ಬಡಾವಣೆ ಇಂಥಾದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿತ್ತು. ಕಲಬುರಗಿ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಯಶೋಧಾ ಕಟಕೆ ಅವರೇ ಈ ಕಾರ್ಯಕ್ರಮಕ್ಕೆ ಕಾರಣವಾಗಿದ್ದು. ಯಶೋಧಾ ಅವರು ಕರ್ತವ್ಯದಲ್ಲಿದ್ದಾಗ ಕಸಾಯಿಖಾನೆಗೆ ಹೋಗುತ್ತಿದ್ದ ಅನೇಕ ಗೋವುಗಳನ್ನು ರಕ್ಷಿಸಿ ಗೋಶಾಲೆ ಮತ್ತು ಕೆಲ ಬಡ ಜನರಿಗೆ ನೀಡಿದ್ದರು. ತಾವು ರಕ್ಷಿಸಿದ ಕೆಲ ಗೋವುಗಳು ಕರುವಿಗೆ ಜನ್ಮ ನೀಡಿದ್ವು. ಹೀಗಾಗಿ ಇವತ್ತು ಒಂದು ಕರುವನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ನಾಮಕರಣ ಮಾಡಲಾಯ್ತು. ಹೆಣ್ಣು ಕರುವಿಗೆ ರಾಧಾ ಅಂತಾ ಹೆಸರಿಟ್ಟು ಸಂಭ್ರಮಿಸಿದ್ರು.

naming ceremony calf

ಕರು ತೊಟ್ಟಿಲು ಶಾಸ್ತ್ರ

ಮಕ್ಕಳ ನಾಮಕರಣ ಮಾಡುವಂತೆಯೇ ಕರುವಿನ ನಾಮಕರಣವನ್ನ ಸಂಭ್ರಮದಿಂದ ಮಾಡಲಾಯ್ತು. ಕಾರ್ಯಕ್ರಮಕ್ಕೆ ಅನೇಕ ಸ್ವಾಮೀಜಿಗಳು, ಮಂಗಳಮುಖಿಯರು ಸಾಕ್ಷಿಯಾದ್ರು. 7 ದಿನಗಳ ಹಿಂದಷ್ಟೇ ಹುಟ್ಟಿದ್ದ ಕರುವಿನ ಕಿವಿಯಲ್ಲಿ ಮೂರು ಬಾರಿ ರಾಧಾ, ರಾಧಾ ಅಂತಾ ಕೂಗಿ ಹೆಸರಿಟ್ರು.. ಹಾಗೇ ನಾಮಕರಣಕ್ಕೆ ಬಂದವರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಟುಕರ ಕೈಗೆ ಸಿಗಬೇಕಿದ್ದ ಹಸು ಕರುವಿಗೆ ಜನ್ಮ ನೀಡಿದೆ. ತಾಯಿ ಗರ್ಭದಲ್ಲೇ ಪ್ರಾಣ ಬಿಡ್ಬೇಕಿದ್ದ ಕರುವಿಗೆ ನಾಮಕರಣ ಜೋರಾಗಿ ನಡೆದಿದೆ. ಒಟ್ನಲ್ಲಿ ಕಾರ್ಯಕ್ರಮದ ನೆಪದಲ್ಲಿ ಮನೆಯವ್ರೆಲ್ಲಾ ಸಂಭ್ರಮಿಸಿದ್ದಂತು ಸುಳ್ಳಲ್ಲ.

ವರದಿ: ಸಂಜಯ್, ಟಿವಿ9, ಕಲಬುರಗಿ

ಇದನ್ನೂ ಓದಿ: Virat Kohli: ವಿವಾದದ ಸುಳಿಗೆ ಸಿಲುಕಿಕೊಂಡ ವಿರಾಟ್ ಕೊಹ್ಲಿ: ಅಹಂಕಾರ ಬಿಟ್ಟು ದೇಶದ ಬಗ್ಗೆ ಯೋಚಿಸಿ ಎಂದ ಕಪಿಲ್ ದೇವ್

Published On - 7:34 am, Fri, 17 December 21

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?