ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ದತೆ: 11 ಸಂಯೋಜಕರನ್ನು ನೇಮಿಸಿದ ಬಿಜೆಪಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಸಕ್ರಿಯವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗುತ್ತಿದೆ. ಈಗಾಗಲೇ ಆಯೋಹ ಚುನಾವಣಾಧಿಕಾರಿಗಳನ್ನು ಸಹ ನೇಮಕ ಮಾಡಿದೆ. ಇದರ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಬಿಜೆಪಿ ಸಹ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಇದಕ್ಕೆ ಪೂರಕೆವೆಂಬಂತೆ ಬಿಜೆಪಿ, ತನ್ನ 11 ಮಂದಿ ಸಂಯೋಜಕರನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಹಾಗಾದ್ರೆ, ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ವಿವರ ಇಲ್ಲಿದೆ.

ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ದತೆ: 11 ಸಂಯೋಜಕರನ್ನು ನೇಮಿಸಿದ ಬಿಜೆಪಿ
Greater Bengaluru Election
Updated By: ರಮೇಶ್ ಬಿ. ಜವಳಗೇರಾ

Updated on: Oct 23, 2025 | 9:07 PM

ಬೆಂಗಳೂರು, (ಅಕ್ಟೋಬರ್ 23): ಗ್ರೇಟರ್ ಬೆಂಗಳೂರು ರಚನೆ ಬೆನ್ನಲ್ಲೇ ಚುನಾವಣೆಗೆ ( greater bengaluru authority election) ಆಯೋಗ ​ ಎಲ್ಲಾ ಸಿದ್ಶತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ ಚುನಾವಣೆಗೆ ಬಿಜೆಪಿ ಕೂಡಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ 11 ಮಂದಿ ಸಂಯೋಜಕರನ್ನು ನೇಮಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲದೆ, ವಲಯವಾರು ಸಂಘಟನಾತ್ಮಕ ಜಿಲ್ಲೆಯ ಪ್ರಮುಖರನ್ನು ನೇಮಕ ಮಾಡಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ‌ ನೇತೃತ್ವದಲ್ಲಿ ಒಟ್ಟು 11 ಜನರನ್ನು ಒಳಗೊಂಡ ಸಂಯೋಜಕರ ತಂಡ ನೇಮಕ ಮಾಡಲಾಗಿದೆ.

ಇಂದು (ಅಕ್ಟೋಬರ್ 23) ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಸಭೆಗಳು ನಡೆದಿದೆ. ಸಭೆಯಲ್ಲಿ ಯಾರಿಗೆ ಜವಾಬ್ದಾರಿ ಹಂಚಿಕೆ ಮಾಡಬೇಕು ಎಂಬ ನಿಟ್ಟಿನಲ್ಲಿಯೂ ಚರ್ಚೆಯಾಗಿದ್ದು, 11 ಮಂದಿ ಸಂಯೋಜಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಇದ್ದಾರೆ.

ಸಂಯೋಜಕರ ತಂಡ

ಬಿವೈ ವಿಜಯೇಂದ್ರ, ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಎಸ್ ಸುರೇಶ್ ಕುಮಾರ್, ಡಿವಿ ಸದಾನಂದ ಗೌಡ, ಪಿಸಿ ಮೋಹನ್, ಸಿ ಎನ್ ಮಂಜುನಾಥ್, ತೇಜಸ್ವಿ ಸೂರ್ಯ, ಡಾ. ಕೆ ಸುಧಾಕರ್, ಎನ್ ಎಸ್ ನಂದೀಶ್ ರೆಡ್ಡಿ.

5 ಪಾಲಿಕೆಗಳಿಗೆ ಸಂಘಟನಾತ್ಮಕ ಸಂಯೋಜಕರು

  • ಬೆಂಗಳೂರು ದಕ್ಷಿಣ – ಸಿಕೆ ರಾಮಮೂರ್ತಿ
  • ಬೆಂಗಳೂರು ಉತ್ತರ- ಎನ್ ಹರೀಶ್
  • ಬೆಂಗಳೂರು ಕೇಂದ್ರ – ಎ ಆರ್ ಸಪ್ತಗಿರಿ ಗೌಡ
  • ಬೆಂಗಳೂರು ಪೂರ್ವ- ಎಂಟಿಬಿ ನಾಗರಾಜ್ ಹಾಗೂ ಕೆ ಎಸ್ ನವೀನ್
  • ಬೆಂಗಳೂರು ಉತ್ತರ – ಮುನಿರತ್ನ ಹಾಗೂ ಭಾರತಿ ಶೆಟ್ಟಿ
  • ಬೆಂಗಳೂರು ದಕ್ಷಿಣ – ಬೈರತಿ ಬಸವರಾಜ ಹಾಗೂ ಎನ್ ರವಿಕುಮಾರ್
  • ಬೆಂಗಳೂರು ಕೇಂದ್ರ – ಡಾ. ಸಿ ಎನ್ ಅಶ್ವತ್ಥ ನಾರಾಯಣ, ಡಿ ಎಸ್ ಅರುಣ್
  • ಬೆಂಗಳೂರು ಪಶ್ಚಿಮ- ನಾರಾಯಣ ಸ್ವಾಮಿ, ಕೆ ಗೋಪಾಲಯ್ಯ, ಅಶ್ವಥ್ ನಾರಾಯಣ