AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಆರ್ ಬೊಮ್ಮಾಯಿ ಅಧಿಕಾರ ಕಳೆದವರು ಯಾರು: ವಿಧಾನಸಭೆಯಲ್ಲಿ ಏಟು-ಏದಿರೇಟು, ಸ್ವಾರಸ್ಯಕರ ಚರ್ಚೆ

ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರ ಸ್ಥಾನಚ್ಯುತಿಗೆ ಯಾರು ಕಾರಣ ಎಂಬ ಹಳೆಯ ಪ್ರಶ್ನೆಯ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ (ಡಿ.23) ಸ್ವಾರಸ್ಯಕರ ಚರ್ಚೆ ನಡೆಯಿತು

ಎಸ್​ಆರ್ ಬೊಮ್ಮಾಯಿ ಅಧಿಕಾರ ಕಳೆದವರು ಯಾರು: ವಿಧಾನಸಭೆಯಲ್ಲಿ ಏಟು-ಏದಿರೇಟು, ಸ್ವಾರಸ್ಯಕರ ಚರ್ಚೆ
ಕೆ.ಆರ್.ರಮೇಶ್​ಕುಮಾರ್ ಮತ್ತು ಎಚ್​.ಡಿ.ರೇವಣ್ಣ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Dec 23, 2021 | 10:01 PM

Share

ಬೆಳಗಾವಿ: ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರ ಸ್ಥಾನಚ್ಯುತಿಗೆ ಯಾರು ಕಾರಣ ಎಂಬ ಹಳೆಯ ಪ್ರಶ್ನೆಯ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ (ಡಿ.23) ಸ್ವಾರಸ್ಯಕರ ಚರ್ಚೆ ನಡೆಯಿತು. ಚರ್ಚೆಯಲ್ಲಿ ಮಾತನಾಡುವಾಗ ಜೆಡಿಎಸ್​ ಶಾಸಕ ಎಚ್​.ಡಿ.ರೇವಣ್ಣ ಅವರು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್​ ಕುಮಾರ್ ಅವರನ್ನು ಕಿಚಾಯಿಸಿದರು. ‘ಕುಮಾರಸ್ವಾಮಿ, ದೇವೇಗೌಡರನ್ನು ಹೇಗೆ ಇಳಿಸಿದಿರಿ ಎನ್ನುವುದು ಗೊತ್ತಿದೆ’ ಎಂಬ ರೇವಣ್ಣ ಮಾತಿದೆ, ‘ಎಸ್.ಆರ್.ಬೊಮ್ಮಾಯಿನಾ ಹೇಗೆ ಇಳಿಸಿದ್ರು ಅಂತ ಹೇಳಬೇಕಿಲ್ಲ’ ಎಂದು ಎದಿರೇಟು ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ‘ಎಸ್.ಆರ್.ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳಲು ದೇವೇಗೌಡರು ಕಾರಣ ಅಲ್ಲ’ ಎಂದು ಸಮರ್ಥನೆ ನೀಡಿದರು.

ಈ ಮಾತು ಇಷ್ಟಕ್ಕೆ ನಿಲ್ಲಲಿಲ್ಲ. ‘ನಾನೆಲ್ಲಿ ಹಾಗೆ ಹೇಳಿದೆ’ ಎಂದು ರಮೇಶ್​ ಕುಮಾರ್ ಪ್ರಶ್ನಿಸಿದರೆ, ‘ನೀವೇ ಹಾಗೆ ಹೇಳುತ್ತಿದ್ದೀರಿ’ ಎಂದು ರೇವಣ್ಣ ಉತ್ತರಿಸಿದರು. ಎಂದ ಹೆಚ್.ಡಿ.ರೇವಣ್ಣ. ‘ಇಂದು ಹೇಳಲ್ಲ, ಮುಂದೆಯೂ ಹೇಳಲ್ಲ, ಇತಿಹಾಸ ಎಲ್ಲರಿಗೂ ಗೊತ್ತಿದೆ. ನಾನು ಯಾರ ಅನುಕಂಪದಲ್ಲಿಯೂ ಬದುಕಿಲ್ಲ. ನಿಮ್ಮಂಥವರ ನಡುವೆ ಯಾವ ಜಾತಿಯೂ ಇಲ್ಲದೆ ಜೀವಂತವಾಗಿದ್ದೇನೆ. ನಾನು ಮುಂದೆಯೂ ಹೀಗೆ ಇರುತ್ತೇನೆ ಎಂದು ರಮೇಶ್​ ಕುಮಾರ್ ತುಸು ಏರುದನಿಯಲ್ಲಿ ಪ್ರತಿಕ್ರಿಯಿಸಿದರು. ‘ನಮ್ಮ ಅನುಕಂಪದಲ್ಲಿ ನೀವಿದ್ರಿ ಎಂದು ನಾನು ಹೇಳಿಲ್ಲ’ ಎಂದು ರೇವಣ್ಣ ಸ್ಪಷ್ಟಪಡಿಸಿದರು.

ಎಚ್​.ಡಿ.ರೇವಣ್ಣ ನೀಡಿದ ಹೇಳಿಕೆಯೊಂದಕ್ಕೆ ಸಿದ್ದರಾಮಯ್ಯ ಸಹ ಖಾರವಾಗಿ ಪ್ರತಿಕ್ರಿಯಿಸಿದರು. ‘ಬಿಜೆಪಿ ಜತೆ ಮ್ಯಾಚ್ ಫಿಕ್ಸಿಂಗ್ ನೀವು ಮಾಡಿಕೊಂಡಿದ್ದು, ನಾನು‌ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿಲ್ಲ. ಮ್ಯಾಚ್ ಫಿಕ್ಸಿಂಗ್ ಅನ್ನೋದೇ ಗೊತ್ತಿಲ್ಲ. ಮುಖ್ಯಮಂತ್ರಿ ಅಥವಾ ಸ್ಥಾನದಲ್ಲಿದ್ದವರ ಯಾರ ಮನೆಗೂ ಕೆಲಸ ಮಾಡಿಕೊಡಿ ಎಂದು ನಾನು ಮನೆಗೂ ಹೋಗಿಲ್ಲ. ಏನೋ ಫೋನ್​​ನಲ್ಲಿ ಮಾತಾಡಿ ಹೇಳಿರಬಹುದು ಅಷ್ಟೇ. ನನ್ನ ರಾಜಕೀಯ ಜೀವನದಲ್ಲಿ ಅದೇ ರೀತಿ ನಡೆದುಕೊಂಡಿದ್ದೇನೆ. ಬಿಜೆಪಿಯವರ ಜೊತೆ ಮ್ಯಾಚ್ ಫಿಕ್ಸಿಂಗ್​ ಮಾಡಿಕೊಂಡಿದ್ದು ನೀವು ಎಂದು ಸಿದ್ದರಾಮಯ್ಯ ಆಕ್ಷೇಪಿಸಿದರು.

ಮಾತಿನ ಭರದಲ್ಲಿ ‘ಬಸವರಾಜ ಸಹ ನನ್ನ ಗೆಳೆಯ. ಊಟಕ್ಕೆ ಕರೆದರೆ ಹೋಗಬಹುದು. ಆದರೆ ರಾಜಕೀಯಕ್ಕೆ ಹೋಗಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಯಾರ್ಯಾರು ಎಲ್ಲೆಲ್ಲಿ ಇರ್ತಾರೆ ಅಂತ ಗೊತ್ತಿಲ್ಲದ ಈ ಪರಿಸ್ಥಿತಿಯಲ್ಲಿ ಸಿದ್ದರಾಮಣ್ಣನವರು ಏನೇ ಇದ್ರೂ ನೇರ ರಾಜಕಾರಣಿ. ಅದರಲ್ಲಿ ನಮ್ಮನೆಗೆ ಬರೋಕೆ ಏನು ತೊಂದರೆ ಇಲ್ಲ. ನಾನು ಕೂಡ ತಾವು ಸಿಎಂ ಆಗಿದ್ದಾಗ ಎಂದಿಗೂ ನಿಮ್ಮ ಮನೆಗೆ ಬಂದಿಲ್ಲ. ಆದರೂ ನಮ್ಮ ಸ್ನೇಹದಲ್ಲಿ‌ ಏನು ಕೊರತೆ ಇಲ್ಲ. ರಾಜಕಾರಣ ರಾಜಕಾರಣ, ಸ್ನೇಹ ಸ್ನೇಹ ಅಷ್ಟೇ’ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಮತಾಂತರ ನಿಷೇಧ ಮಸೂದೆ ಜಾರಿಗೆ ನಿರ್ಧರಿಸಿದ್ದರು; ಬಿಎಸ್​ ಯಡಿಯೂರಪ್ಪ ಇದನ್ನೂ ಓದಿ: Anti Conversion Bill Highlights: ಮತಾಂತರ ನಿಷೇಧ ಕಾಯ್ದೆಯ ಮುಖ್ಯ ಅಂಶಗಳು, ಪ್ರತಿಪಕ್ಷಗಳ ಆಕ್ಷೇಪಗಳಿವು

Published On - 10:00 pm, Thu, 23 December 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ