AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಹಿಂದೆ ರಾಜ್ಯ ಬಿಜೆಪಿ ನಾಯಕರಿದ್ದಾರೆ: ರವಿಕುಮಾರ್ ಗಣಿಗ, ಶಾಸಕ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಹಿಂದೆ ರಾಜ್ಯ ಬಿಜೆಪಿ ನಾಯಕರಿದ್ದಾರೆ: ರವಿಕುಮಾರ್ ಗಣಿಗ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: May 07, 2024 | 4:33 PM

ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಬೆಳೆಸಿ ನಂತರ ಅವುಗಳನ್ನು ಮಟ್ಟಹಾಕುವುದು ಮತ್ತು ತನ್ನ ಕೇಡರ್ ಹೆಚ್ಚಿಸಿಕೊಳ್ಳುವುದು ಬಿಜೆಪಿಯ ಗೇಮ್ ಪ್ಲ್ಯಾನ್ ಅಗಿರುತ್ತದೆ, ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಅವರು ಇದನ್ನೇ ಮಾಡಿದ್ದು, ಈಗ ಕರ್ನಾಟಕದಲ್ಲಿ ದೇವೇಗೌಡರ ಪಕ್ಷವನ್ನು ನಾಶ ಮುಗಿಸಿಬಿಡಲು ಬಿಜೆಪಿ ನಾಯಕರು ಹೊಂಚು ಹಾಕುತ್ತಿದ್ದಾರೆ ಎಂದು ಗಣಿಗ ಹೇಳಿದರು.

ಮಂಡ್ಯ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪ್ರಕರಣದ ಹಿನ್ನೆಲೆಯಲ್ಲಿ ಈಗ ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟ ಶುರುವಾಗಿದೆ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ (Ravikumar Ganiga) ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪಾತ್ರವನ್ನು ತಳ್ಳಿಹಾಕಿದ್ದರಲ್ಲದೆ ನೇರವಾಗಿ ಬಿಜೆಪಿ ಮೇಲೆ ಆರೋಪ ಹೊರೆಸಿದರು. ಪ್ರಕರಣದಲ್ಲಿ ಯಾವುದೇ ಕಾಂಗ್ರೆಸ್ ನಾಯಕನ ಕೈವಾಡವಿಲ್ಲ, ಆದರೆ ರಾಜ್ಯ ಬಿಜೆಪಿಯಲ್ಲಿ ಉನ್ನತ ಸ್ಥಾನದಲ್ಲಿರುವ ನಾಯಕ (top state BJP leader) ಮತ್ತು ಹಾಸನದ ಮಾಜಿ ಬಿಜೆಪಿ ಶಾಸಕ ಇದರ ಹಿಂದೆ ಇದ್ದಾರೆ. ಎಸ್ಐಟಿ ತನಿಖೆ ಜಾರಿಯಲ್ಲಿರುವುದರಿಂದ ತಾನು ಹೆಸರುಗಳನ್ನು ಬಯಲು ಮಾಡಲ್ಲ ಎಂದು ಗಣಿಗ ಹೇಳಿದರು. ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಬೆಳೆಸಿ ನಂತರ ಅವುಗಳನ್ನು ಮಟ್ಟಹಾಕುವುದು ಮತ್ತು ತನ್ನ ಕೇಡರ್ ಹೆಚ್ಚಿಸಿಕೊಳ್ಳುವುದು ಬಿಜೆಪಿಯ ಗೇಮ್ ಪ್ಲ್ಯಾನ್ ಅಗಿರುತ್ತದೆ, ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಅವರು ಇದನ್ನೇ ಮಾಡಿದ್ದು, ಈಗ ಕರ್ನಾಟಕದಲ್ಲಿ ದೇವೇಗೌಡರ ಪಕ್ಷವನ್ನು ನಾಶ ಮುಗಿಸಿಬಿಡಲು ಬಿಜೆಪಿ ನಾಯಕರು ಹೊಂಚು ಹಾಕುತ್ತಿದ್ದಾರೆ ಎಂದು ಗಣಿಗ ಹೇಳಿದರು. ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಿದರೆ ಅದರಿಂದ ಬಿಜೆಪಿಗೆ ಮಾತ್ರ ಲಾಭ ಆಗೋದು ಎಂದು ಶಾಸಕ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹನುಮ ಧ್ವಜ ವಿವಾದ ಪ್ರಕರಣ; ಶಾಸಕ ರವಿಕುಮಾರ್​ ಗಣಿಗ ಪರ ನಿಂತ ಬೇರೆ ಗ್ರಾಮದ ಜನರು