AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷವೇರಿ ಬಣ್ಣ ಬದಲಾಯಿಸುತ್ತಿದ್ದಾಳೆ ಕಾವೇರಿ; ಕಣ್ಮುಚ್ಚಿದೆಯಾ ಆಡಳಿತ ಮಂಡಳಿ?

ಕೊರೊನಾದಿಂದ ಎಲ್ಲ ಕಾರ್ಯಚಟುವಟಿಕೆ ನಿಂತಿತ್ತು. ಹೀಗಾಗಿ, ನೀರು ಮಲೀನಗೊಳ್ಳದೆ ತಿಳಿಯಾಗಿತ್ತು. ಆದರೆ, ಈಗ ಮತ್ತೆ ಕಾವೇರಿ ಒಡಲನ್ನು ಶುಂಠಿ ಶುದ್ಧೀಕರಣ ಮಾಡಿದ ನೀರು ಸೇರಿಕೊಳ್ಳುತ್ತಿದೆ.

ವಿಷವೇರಿ ಬಣ್ಣ ಬದಲಾಯಿಸುತ್ತಿದ್ದಾಳೆ ಕಾವೇರಿ; ಕಣ್ಮುಚ್ಚಿದೆಯಾ ಆಡಳಿತ ಮಂಡಳಿ?
ಶುಂಠಿ ಸ್ವಚ್ಛ ಮಾಡುತ್ತಿರುವುದು
Skanda
| Edited By: |

Updated on:Dec 09, 2020 | 6:37 PM

Share

ಕೊಡಗು: ಇಲ್ಲಿನ ಶುಂಠಿ ಶುದ್ಧೀಕರಣ ಘಟಕಗಳಿಂದ ಹೊರ ಬರುವ ವಿಷಯುಕ್ತ ನೀರು ಕಾವೇರಿ ಒಡಲು ಸೇರುತ್ತಿದ್ದು, ನದಿ ಕಲುಷಿತಗೊತ್ತಿದೆ. ಹಗಲು-ರಾತ್ರಿ ಎನ್ನದೇ ಕಾರ್ಖಾನೆಯ ಯಂತ್ರಗಳು ಸದ್ದು ಮಾಡುತ್ತಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಶುದ್ಧೀಕರಣ ಘಟಕಗಳಿಂದ ನೇರವಾಗಿ ಕಾಲುವೆ ಮೂಲಕ ನದಿ ಒಡಲಿಗೆ ವಿಷಯುಕ್ತ ಸೇರ್ಪಡೆಯಾಗುತ್ತಿದೆ. ತವರಿನಲ್ಲೇ ಬಣ್ಣ ಬದಲಿಸಿ ಕಾವೇರಿ ಹರಿಯುತ್ತಿದ್ದು, ಕುಡಿಯುವ ನೀರಿಗೆ ಕಂಟಕ ಎದುರಾಗುವ ಆತಂಕ ಕಾಡಿದೆ. ಕೊರೊನಾದಿಂದ ಎಲ್ಲ ಕಾರ್ಯಚಟುವಟಿಕೆ ನಿಂತಿತ್ತು. ಹೀಗಾಗಿ, ನೀರು ಮಲೀನಗೊಳ್ಳದೆ ತಿಳಿಯಾಗಿತ್ತು. ಆದರೆ, ಈಗ ಮತ್ತೆ ಕಾವೇರಿ ಒಡಲನ್ನು ಶುಂಠಿ ಶುದ್ಧೀಕರಣ ಮಾಡಿದ ನೀರು ಸೇರಿಕೊಳ್ಳುತ್ತಿದೆ.

ಬೇಸಿಗೆ ಸಮೀಪಿಸಿದ ಕಾರಣ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಇಂತಹ ವೇಳೆಯಲ್ಲಿ ಇರೋ ನೀರಿಗೂ ವಿಷ ಸೇರ್ಪಡೆ ಆಗುತ್ತಾ ಇದೆ. ಕೊಡಗಿನ ಕುಶಾಲನಗರ, ಶಿರಂಗಾಲ, ಮೈಸೂರಿನ ಕೊಪ್ಪ ಮೊದಲಾದ ಪ್ರದೇಶಗಳಲ್ಲಿ 30 ಕ್ಕೂ ಹೆಚ್ಚು ಶುಂಠಿ ಶುದ್ಧೀಕರಣ ಘಟಕಗಳು ತಲೆ ಎತ್ತಿವೆ. ಪ್ರತಿನಿತ್ಯ ಇಲ್ಲಿ ಮೂರು ಸಾವಿರದಿಂದ ಎಂಟು ಸಾವಿರ ಚೀಲ ಶುಂಠಿಯನ್ನು ಸ್ವಚ್ಛ ಮಾಡಲಾಗುತ್ತಿದೆ.

ಶುಂಠಿ ಬೆಳೆಗೆ ಹಾಕುವ DAP, MOP, ಯೂರಿಯಾದಂಥ ಗೊಬ್ಬರಗಳು, Ecalex, Karate, Milestones ನಂತಹ ವಿಷಕಾರಿ ರಾಸಾಯನಿಕಗಳು ಕಾವೇರಿ ನದಿ ಸೇರುತ್ತಿದೆ. ನದಿ ತಟದ ಶುದ್ಧೀಕರಣ ಘಟಕಗಳಲ್ಲಿ ಶುಂಠಿಯನ್ನು ತೊಳೆದ ಬಳಿಕ ರಾಸಾಯನಿಕ ಗುಣವುಳ್ಳ ನೀರನ್ನು ನೇರವಾಗಿ ನದಿಗೆ ಹರಿಬಿಡಲಾಗುತ್ತಿದೆ. ಹೊಳೆಯಂತೆ ಹರಿಯುವ ವಿಷಯುಕ್ತ ನೀರು ಕಾವೇರಿಯನ್ನು ಕಲುಶಿತ ಮಾಡುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸ್ಥಳೀಯ ಆಡಳಿತ ಮಾತ್ರ ಇಂತಹ ಶುದ್ಧೀಕರಣ ಘಟಕಗಳ ಮೇಲೆ ಕ್ರಮಕ್ಕೆ ಮುಂದಾಗದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಶುಂಠಿ ಸ್ವಚ್ಛ ಮಾಡುತ್ತಿರುವುದು

ಕಲುಷಿತಗೊಂಡ ನೀರು

ಕಲುಷಿತಗೊಂಡ ನೀರು

ಕೊಡಗು ತೋಟದಲ್ಲಿ ಮತ್ತೊಂದು ಹೆಬ್ಬಾವು ಪತ್ತೆ, ಸೀದಾ ಅರಣ್ಯಕ್ಕೆ ಶಿಫ್ಟ್

Published On - 1:56 pm, Wed, 9 December 20

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ