AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷವೇರಿ ಬಣ್ಣ ಬದಲಾಯಿಸುತ್ತಿದ್ದಾಳೆ ಕಾವೇರಿ; ಕಣ್ಮುಚ್ಚಿದೆಯಾ ಆಡಳಿತ ಮಂಡಳಿ?

ಕೊರೊನಾದಿಂದ ಎಲ್ಲ ಕಾರ್ಯಚಟುವಟಿಕೆ ನಿಂತಿತ್ತು. ಹೀಗಾಗಿ, ನೀರು ಮಲೀನಗೊಳ್ಳದೆ ತಿಳಿಯಾಗಿತ್ತು. ಆದರೆ, ಈಗ ಮತ್ತೆ ಕಾವೇರಿ ಒಡಲನ್ನು ಶುಂಠಿ ಶುದ್ಧೀಕರಣ ಮಾಡಿದ ನೀರು ಸೇರಿಕೊಳ್ಳುತ್ತಿದೆ.

ವಿಷವೇರಿ ಬಣ್ಣ ಬದಲಾಯಿಸುತ್ತಿದ್ದಾಳೆ ಕಾವೇರಿ; ಕಣ್ಮುಚ್ಚಿದೆಯಾ ಆಡಳಿತ ಮಂಡಳಿ?
ಶುಂಠಿ ಸ್ವಚ್ಛ ಮಾಡುತ್ತಿರುವುದು
Skanda
| Updated By: ಸಾಧು ಶ್ರೀನಾಥ್​|

Updated on:Dec 09, 2020 | 6:37 PM

Share

ಕೊಡಗು: ಇಲ್ಲಿನ ಶುಂಠಿ ಶುದ್ಧೀಕರಣ ಘಟಕಗಳಿಂದ ಹೊರ ಬರುವ ವಿಷಯುಕ್ತ ನೀರು ಕಾವೇರಿ ಒಡಲು ಸೇರುತ್ತಿದ್ದು, ನದಿ ಕಲುಷಿತಗೊತ್ತಿದೆ. ಹಗಲು-ರಾತ್ರಿ ಎನ್ನದೇ ಕಾರ್ಖಾನೆಯ ಯಂತ್ರಗಳು ಸದ್ದು ಮಾಡುತ್ತಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಶುದ್ಧೀಕರಣ ಘಟಕಗಳಿಂದ ನೇರವಾಗಿ ಕಾಲುವೆ ಮೂಲಕ ನದಿ ಒಡಲಿಗೆ ವಿಷಯುಕ್ತ ಸೇರ್ಪಡೆಯಾಗುತ್ತಿದೆ. ತವರಿನಲ್ಲೇ ಬಣ್ಣ ಬದಲಿಸಿ ಕಾವೇರಿ ಹರಿಯುತ್ತಿದ್ದು, ಕುಡಿಯುವ ನೀರಿಗೆ ಕಂಟಕ ಎದುರಾಗುವ ಆತಂಕ ಕಾಡಿದೆ. ಕೊರೊನಾದಿಂದ ಎಲ್ಲ ಕಾರ್ಯಚಟುವಟಿಕೆ ನಿಂತಿತ್ತು. ಹೀಗಾಗಿ, ನೀರು ಮಲೀನಗೊಳ್ಳದೆ ತಿಳಿಯಾಗಿತ್ತು. ಆದರೆ, ಈಗ ಮತ್ತೆ ಕಾವೇರಿ ಒಡಲನ್ನು ಶುಂಠಿ ಶುದ್ಧೀಕರಣ ಮಾಡಿದ ನೀರು ಸೇರಿಕೊಳ್ಳುತ್ತಿದೆ.

ಬೇಸಿಗೆ ಸಮೀಪಿಸಿದ ಕಾರಣ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಇಂತಹ ವೇಳೆಯಲ್ಲಿ ಇರೋ ನೀರಿಗೂ ವಿಷ ಸೇರ್ಪಡೆ ಆಗುತ್ತಾ ಇದೆ. ಕೊಡಗಿನ ಕುಶಾಲನಗರ, ಶಿರಂಗಾಲ, ಮೈಸೂರಿನ ಕೊಪ್ಪ ಮೊದಲಾದ ಪ್ರದೇಶಗಳಲ್ಲಿ 30 ಕ್ಕೂ ಹೆಚ್ಚು ಶುಂಠಿ ಶುದ್ಧೀಕರಣ ಘಟಕಗಳು ತಲೆ ಎತ್ತಿವೆ. ಪ್ರತಿನಿತ್ಯ ಇಲ್ಲಿ ಮೂರು ಸಾವಿರದಿಂದ ಎಂಟು ಸಾವಿರ ಚೀಲ ಶುಂಠಿಯನ್ನು ಸ್ವಚ್ಛ ಮಾಡಲಾಗುತ್ತಿದೆ.

ಶುಂಠಿ ಬೆಳೆಗೆ ಹಾಕುವ DAP, MOP, ಯೂರಿಯಾದಂಥ ಗೊಬ್ಬರಗಳು, Ecalex, Karate, Milestones ನಂತಹ ವಿಷಕಾರಿ ರಾಸಾಯನಿಕಗಳು ಕಾವೇರಿ ನದಿ ಸೇರುತ್ತಿದೆ. ನದಿ ತಟದ ಶುದ್ಧೀಕರಣ ಘಟಕಗಳಲ್ಲಿ ಶುಂಠಿಯನ್ನು ತೊಳೆದ ಬಳಿಕ ರಾಸಾಯನಿಕ ಗುಣವುಳ್ಳ ನೀರನ್ನು ನೇರವಾಗಿ ನದಿಗೆ ಹರಿಬಿಡಲಾಗುತ್ತಿದೆ. ಹೊಳೆಯಂತೆ ಹರಿಯುವ ವಿಷಯುಕ್ತ ನೀರು ಕಾವೇರಿಯನ್ನು ಕಲುಶಿತ ಮಾಡುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸ್ಥಳೀಯ ಆಡಳಿತ ಮಾತ್ರ ಇಂತಹ ಶುದ್ಧೀಕರಣ ಘಟಕಗಳ ಮೇಲೆ ಕ್ರಮಕ್ಕೆ ಮುಂದಾಗದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಶುಂಠಿ ಸ್ವಚ್ಛ ಮಾಡುತ್ತಿರುವುದು

ಕಲುಷಿತಗೊಂಡ ನೀರು

ಕಲುಷಿತಗೊಂಡ ನೀರು

ಕೊಡಗು ತೋಟದಲ್ಲಿ ಮತ್ತೊಂದು ಹೆಬ್ಬಾವು ಪತ್ತೆ, ಸೀದಾ ಅರಣ್ಯಕ್ಕೆ ಶಿಫ್ಟ್

Published On - 1:56 pm, Wed, 9 December 20

ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?