AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷವೇರಿ ಬಣ್ಣ ಬದಲಾಯಿಸುತ್ತಿದ್ದಾಳೆ ಕಾವೇರಿ; ಕಣ್ಮುಚ್ಚಿದೆಯಾ ಆಡಳಿತ ಮಂಡಳಿ?

ಕೊರೊನಾದಿಂದ ಎಲ್ಲ ಕಾರ್ಯಚಟುವಟಿಕೆ ನಿಂತಿತ್ತು. ಹೀಗಾಗಿ, ನೀರು ಮಲೀನಗೊಳ್ಳದೆ ತಿಳಿಯಾಗಿತ್ತು. ಆದರೆ, ಈಗ ಮತ್ತೆ ಕಾವೇರಿ ಒಡಲನ್ನು ಶುಂಠಿ ಶುದ್ಧೀಕರಣ ಮಾಡಿದ ನೀರು ಸೇರಿಕೊಳ್ಳುತ್ತಿದೆ.

ವಿಷವೇರಿ ಬಣ್ಣ ಬದಲಾಯಿಸುತ್ತಿದ್ದಾಳೆ ಕಾವೇರಿ; ಕಣ್ಮುಚ್ಚಿದೆಯಾ ಆಡಳಿತ ಮಂಡಳಿ?
ಶುಂಠಿ ಸ್ವಚ್ಛ ಮಾಡುತ್ತಿರುವುದು
Skanda
| Edited By: ಸಾಧು ಶ್ರೀನಾಥ್​|

Updated on:Dec 09, 2020 | 6:37 PM

Share

ಕೊಡಗು: ಇಲ್ಲಿನ ಶುಂಠಿ ಶುದ್ಧೀಕರಣ ಘಟಕಗಳಿಂದ ಹೊರ ಬರುವ ವಿಷಯುಕ್ತ ನೀರು ಕಾವೇರಿ ಒಡಲು ಸೇರುತ್ತಿದ್ದು, ನದಿ ಕಲುಷಿತಗೊತ್ತಿದೆ. ಹಗಲು-ರಾತ್ರಿ ಎನ್ನದೇ ಕಾರ್ಖಾನೆಯ ಯಂತ್ರಗಳು ಸದ್ದು ಮಾಡುತ್ತಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಶುದ್ಧೀಕರಣ ಘಟಕಗಳಿಂದ ನೇರವಾಗಿ ಕಾಲುವೆ ಮೂಲಕ ನದಿ ಒಡಲಿಗೆ ವಿಷಯುಕ್ತ ಸೇರ್ಪಡೆಯಾಗುತ್ತಿದೆ. ತವರಿನಲ್ಲೇ ಬಣ್ಣ ಬದಲಿಸಿ ಕಾವೇರಿ ಹರಿಯುತ್ತಿದ್ದು, ಕುಡಿಯುವ ನೀರಿಗೆ ಕಂಟಕ ಎದುರಾಗುವ ಆತಂಕ ಕಾಡಿದೆ. ಕೊರೊನಾದಿಂದ ಎಲ್ಲ ಕಾರ್ಯಚಟುವಟಿಕೆ ನಿಂತಿತ್ತು. ಹೀಗಾಗಿ, ನೀರು ಮಲೀನಗೊಳ್ಳದೆ ತಿಳಿಯಾಗಿತ್ತು. ಆದರೆ, ಈಗ ಮತ್ತೆ ಕಾವೇರಿ ಒಡಲನ್ನು ಶುಂಠಿ ಶುದ್ಧೀಕರಣ ಮಾಡಿದ ನೀರು ಸೇರಿಕೊಳ್ಳುತ್ತಿದೆ.

ಬೇಸಿಗೆ ಸಮೀಪಿಸಿದ ಕಾರಣ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಇಂತಹ ವೇಳೆಯಲ್ಲಿ ಇರೋ ನೀರಿಗೂ ವಿಷ ಸೇರ್ಪಡೆ ಆಗುತ್ತಾ ಇದೆ. ಕೊಡಗಿನ ಕುಶಾಲನಗರ, ಶಿರಂಗಾಲ, ಮೈಸೂರಿನ ಕೊಪ್ಪ ಮೊದಲಾದ ಪ್ರದೇಶಗಳಲ್ಲಿ 30 ಕ್ಕೂ ಹೆಚ್ಚು ಶುಂಠಿ ಶುದ್ಧೀಕರಣ ಘಟಕಗಳು ತಲೆ ಎತ್ತಿವೆ. ಪ್ರತಿನಿತ್ಯ ಇಲ್ಲಿ ಮೂರು ಸಾವಿರದಿಂದ ಎಂಟು ಸಾವಿರ ಚೀಲ ಶುಂಠಿಯನ್ನು ಸ್ವಚ್ಛ ಮಾಡಲಾಗುತ್ತಿದೆ.

ಶುಂಠಿ ಬೆಳೆಗೆ ಹಾಕುವ DAP, MOP, ಯೂರಿಯಾದಂಥ ಗೊಬ್ಬರಗಳು, Ecalex, Karate, Milestones ನಂತಹ ವಿಷಕಾರಿ ರಾಸಾಯನಿಕಗಳು ಕಾವೇರಿ ನದಿ ಸೇರುತ್ತಿದೆ. ನದಿ ತಟದ ಶುದ್ಧೀಕರಣ ಘಟಕಗಳಲ್ಲಿ ಶುಂಠಿಯನ್ನು ತೊಳೆದ ಬಳಿಕ ರಾಸಾಯನಿಕ ಗುಣವುಳ್ಳ ನೀರನ್ನು ನೇರವಾಗಿ ನದಿಗೆ ಹರಿಬಿಡಲಾಗುತ್ತಿದೆ. ಹೊಳೆಯಂತೆ ಹರಿಯುವ ವಿಷಯುಕ್ತ ನೀರು ಕಾವೇರಿಯನ್ನು ಕಲುಶಿತ ಮಾಡುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸ್ಥಳೀಯ ಆಡಳಿತ ಮಾತ್ರ ಇಂತಹ ಶುದ್ಧೀಕರಣ ಘಟಕಗಳ ಮೇಲೆ ಕ್ರಮಕ್ಕೆ ಮುಂದಾಗದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಶುಂಠಿ ಸ್ವಚ್ಛ ಮಾಡುತ್ತಿರುವುದು

ಕಲುಷಿತಗೊಂಡ ನೀರು

ಕಲುಷಿತಗೊಂಡ ನೀರು

ಕೊಡಗು ತೋಟದಲ್ಲಿ ಮತ್ತೊಂದು ಹೆಬ್ಬಾವು ಪತ್ತೆ, ಸೀದಾ ಅರಣ್ಯಕ್ಕೆ ಶಿಫ್ಟ್

Published On - 1:56 pm, Wed, 9 December 20

Follow Us
Skanda
Skanda
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ