AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷವೇರಿ ಬಣ್ಣ ಬದಲಾಯಿಸುತ್ತಿದ್ದಾಳೆ ಕಾವೇರಿ; ಕಣ್ಮುಚ್ಚಿದೆಯಾ ಆಡಳಿತ ಮಂಡಳಿ?

ಕೊರೊನಾದಿಂದ ಎಲ್ಲ ಕಾರ್ಯಚಟುವಟಿಕೆ ನಿಂತಿತ್ತು. ಹೀಗಾಗಿ, ನೀರು ಮಲೀನಗೊಳ್ಳದೆ ತಿಳಿಯಾಗಿತ್ತು. ಆದರೆ, ಈಗ ಮತ್ತೆ ಕಾವೇರಿ ಒಡಲನ್ನು ಶುಂಠಿ ಶುದ್ಧೀಕರಣ ಮಾಡಿದ ನೀರು ಸೇರಿಕೊಳ್ಳುತ್ತಿದೆ.

ವಿಷವೇರಿ ಬಣ್ಣ ಬದಲಾಯಿಸುತ್ತಿದ್ದಾಳೆ ಕಾವೇರಿ; ಕಣ್ಮುಚ್ಚಿದೆಯಾ ಆಡಳಿತ ಮಂಡಳಿ?
ಶುಂಠಿ ಸ್ವಚ್ಛ ಮಾಡುತ್ತಿರುವುದು
Skanda
| Edited By: |

Updated on:Dec 09, 2020 | 6:37 PM

Share

ಕೊಡಗು: ಇಲ್ಲಿನ ಶುಂಠಿ ಶುದ್ಧೀಕರಣ ಘಟಕಗಳಿಂದ ಹೊರ ಬರುವ ವಿಷಯುಕ್ತ ನೀರು ಕಾವೇರಿ ಒಡಲು ಸೇರುತ್ತಿದ್ದು, ನದಿ ಕಲುಷಿತಗೊತ್ತಿದೆ. ಹಗಲು-ರಾತ್ರಿ ಎನ್ನದೇ ಕಾರ್ಖಾನೆಯ ಯಂತ್ರಗಳು ಸದ್ದು ಮಾಡುತ್ತಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಶುದ್ಧೀಕರಣ ಘಟಕಗಳಿಂದ ನೇರವಾಗಿ ಕಾಲುವೆ ಮೂಲಕ ನದಿ ಒಡಲಿಗೆ ವಿಷಯುಕ್ತ ಸೇರ್ಪಡೆಯಾಗುತ್ತಿದೆ. ತವರಿನಲ್ಲೇ ಬಣ್ಣ ಬದಲಿಸಿ ಕಾವೇರಿ ಹರಿಯುತ್ತಿದ್ದು, ಕುಡಿಯುವ ನೀರಿಗೆ ಕಂಟಕ ಎದುರಾಗುವ ಆತಂಕ ಕಾಡಿದೆ. ಕೊರೊನಾದಿಂದ ಎಲ್ಲ ಕಾರ್ಯಚಟುವಟಿಕೆ ನಿಂತಿತ್ತು. ಹೀಗಾಗಿ, ನೀರು ಮಲೀನಗೊಳ್ಳದೆ ತಿಳಿಯಾಗಿತ್ತು. ಆದರೆ, ಈಗ ಮತ್ತೆ ಕಾವೇರಿ ಒಡಲನ್ನು ಶುಂಠಿ ಶುದ್ಧೀಕರಣ ಮಾಡಿದ ನೀರು ಸೇರಿಕೊಳ್ಳುತ್ತಿದೆ.

ಬೇಸಿಗೆ ಸಮೀಪಿಸಿದ ಕಾರಣ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಇಂತಹ ವೇಳೆಯಲ್ಲಿ ಇರೋ ನೀರಿಗೂ ವಿಷ ಸೇರ್ಪಡೆ ಆಗುತ್ತಾ ಇದೆ. ಕೊಡಗಿನ ಕುಶಾಲನಗರ, ಶಿರಂಗಾಲ, ಮೈಸೂರಿನ ಕೊಪ್ಪ ಮೊದಲಾದ ಪ್ರದೇಶಗಳಲ್ಲಿ 30 ಕ್ಕೂ ಹೆಚ್ಚು ಶುಂಠಿ ಶುದ್ಧೀಕರಣ ಘಟಕಗಳು ತಲೆ ಎತ್ತಿವೆ. ಪ್ರತಿನಿತ್ಯ ಇಲ್ಲಿ ಮೂರು ಸಾವಿರದಿಂದ ಎಂಟು ಸಾವಿರ ಚೀಲ ಶುಂಠಿಯನ್ನು ಸ್ವಚ್ಛ ಮಾಡಲಾಗುತ್ತಿದೆ.

ಶುಂಠಿ ಬೆಳೆಗೆ ಹಾಕುವ DAP, MOP, ಯೂರಿಯಾದಂಥ ಗೊಬ್ಬರಗಳು, Ecalex, Karate, Milestones ನಂತಹ ವಿಷಕಾರಿ ರಾಸಾಯನಿಕಗಳು ಕಾವೇರಿ ನದಿ ಸೇರುತ್ತಿದೆ. ನದಿ ತಟದ ಶುದ್ಧೀಕರಣ ಘಟಕಗಳಲ್ಲಿ ಶುಂಠಿಯನ್ನು ತೊಳೆದ ಬಳಿಕ ರಾಸಾಯನಿಕ ಗುಣವುಳ್ಳ ನೀರನ್ನು ನೇರವಾಗಿ ನದಿಗೆ ಹರಿಬಿಡಲಾಗುತ್ತಿದೆ. ಹೊಳೆಯಂತೆ ಹರಿಯುವ ವಿಷಯುಕ್ತ ನೀರು ಕಾವೇರಿಯನ್ನು ಕಲುಶಿತ ಮಾಡುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸ್ಥಳೀಯ ಆಡಳಿತ ಮಾತ್ರ ಇಂತಹ ಶುದ್ಧೀಕರಣ ಘಟಕಗಳ ಮೇಲೆ ಕ್ರಮಕ್ಕೆ ಮುಂದಾಗದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಶುಂಠಿ ಸ್ವಚ್ಛ ಮಾಡುತ್ತಿರುವುದು

ಕಲುಷಿತಗೊಂಡ ನೀರು

ಕಲುಷಿತಗೊಂಡ ನೀರು

ಕೊಡಗು ತೋಟದಲ್ಲಿ ಮತ್ತೊಂದು ಹೆಬ್ಬಾವು ಪತ್ತೆ, ಸೀದಾ ಅರಣ್ಯಕ್ಕೆ ಶಿಫ್ಟ್

Published On - 1:56 pm, Wed, 9 December 20

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ