AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದಿಂದ ಧಾರಾವಾಡಕ್ಕೆ ಸಿಹಿರುಚಿಯ ಪೇಡಾ ಬಂದಿದ್ದು ಹೇಗೆ?

177 ವರ್ಷಗಳಷ್ಟು ಹಳೆಯದಾದ ಧಾರವಾಡ ಪೇಢಾವನ್ನು ಅತ್ಯುತ್ತಮವಾದ ,ಶುದ್ಧ ತುಪ್ಪ ಮತ್ತು ಸಕ್ಕರೆಯನ್ನು ಬಳಸಿ ತಯಾರಿಸಲಾಗುತ್ತದೆ. ಧಾರವಾಡದ ಸ್ಥಳೀಯ ಪ್ರದೇಶಗಳಿಂದ ಸಂಗ್ರಹಿಸಿದ ಹಾಲನ್ನು ಬಳಸಿ ಖೋಯಾವನ್ನು ತಯಾರಿಸಲಾಗುತ್ತದೆ. ಇದನ್ನು ಸಿದ್ಧಪಡಿಸಲು ಬರೋಬ್ಬರಿ ನಾಲ್ಕು ಗಂಟೆ ಬೇಕಾಗುತ್ತದೆ

ಉತ್ತರ ಪ್ರದೇಶದಿಂದ ಧಾರಾವಾಡಕ್ಕೆ ಸಿಹಿರುಚಿಯ ಪೇಡಾ ಬಂದಿದ್ದು ಹೇಗೆ?
ಧಾರವಾಡ ಪೇಡಾ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: May 25, 2024 | 12:11 PM

Share

ಪೇಡಾ ಅಂದ ಕೂಡಲೇ ನೆನಪಾಗುವುದೇ  ಧಾರವಾಡ ಪೇಡಾ. ಕಂದು ಬಣ್ಣದ, ನಿರ್ದಿಷ್ಟ ಆಕೃತಿಯನ್ನೂ ಹೊಂದಿರದ ಪುಟ್ಟ ಮಕ್ಕಳು ಕೈಯಲ್ಲಿ ಉಂಡೆ ಮಾಡಿದಂತೆ ಕಾಣುವ ಸಿಹಿತಿಂಡಿಯೇ ಪೇಡಾ. ನೋಡಿದ ಕೂಡಲೇ ಬಾಯಲ್ಲಿ ನೀರೂರುವಂತೆ ಮಾಡುವ ಆಕೃತಿ ಅದಕ್ಕಿಲ್ಲ. ಆದರೆ ಬಾಯಲ್ಲಿಟ್ಟರೆ ಆ ರುಚಿಗೆ ಸರಿಸಾಟಿ ಎಂದೆನಿಸುವಂತದ್ದು ಬೇರೆ ಯಾವುದೂ ಇಲ್ಲ. ಅಂದಹಾಗೆ ಈ ಅದ್ಭುತ ರುಚಿಯ ಸಿಹಿತಿಂಡಿ ಧಾರವಾಡಕ್ಕೆ ಪೇಡಾ ಬಂದಿದ್ದು ಹೇಗೆ? ಈ  ಬಗ್ಗೆ ಹುಡುಕಿದಾಗ ಸಿಕ್ಕಿದ ಮಾಹಿತಿ ಏನೆಂದರೆ 19 ನೇ ಶತಮಾನದ ಆರಂಭದಲ್ಲಿ ಉತ್ತರ ಪ್ರದೇಶದ ಉನ್ನಾವೊದಲ್ಲಿ ಪ್ಲೇಗ್ ಉಲ್ಬಣಗೊಂಡ ನಂತರ ಧಾರವಾಡಕ್ಕೆ ವಲಸೆ ಬಂದ ಠಾಕೂರ್ ಕುಟುಂಬ ಈ ಸಿಹಿತಿಂಡಿಯನ್ನು ತಯಾರಿಸಿ ವ್ಯಾಪಾರ ಪ್ರಾರಂಭಿಸಿತು. ಮೊದಲ ತಲೆಮಾರಿನ ಮಿಠಾಯಿ ವ್ಯಾಪಾರಿ ರಾಮ್ ರತನ್ ಸಿಂಗ್ ಠಾಕೂರ್ ಅವರು ಸ್ಥಳೀಯವಾಗಿ ಪೇಡಾಗಳನ್ನು ಉತ್ಪಾದಿಸಿ ಅವುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ನಂತರ ಇದೇ ಕುಟುಂಬ ಈ ವ್ಯಾಪಾರವನ್ನು ವಿಸ್ತರಿಸಿತು. ಅವರ ಮೊಮ್ಮಗ ಬಾಬು ಸಿಂಗ್ ಠಾಕೂರ್ ಅವರು ತಮ್ಮ ಲೈನ್ ಬಜಾರ್ ಅಂಗಡಿಯಲ್ಲಿ ಕುಟುಂಬದ ವ್ಯವಹಾರವನ್ನು ಮತ್ತಷ್ಟು ಬೆಳೆಸಿದರು. ಈಗ ಇದೇ ಕುಟುಂಬದ 5ನೇ ತಲೆಮಾರು ಈ ಉದ್ಯಮ ನಡೆಸುತ್ತಿದೆ. ಧಾರವಾಡದ ಈ ಫೇಮಸ್ ಪೇಡಾ ಬಗ್ಗೆ ಮತ್ತಷ್ಟು ತಿಳಿಯೋಣ… ಪೇಡಾ ಹೇಗೆ ತಯಾರಿಸಲಾಗುತ್ತದೆ? ಧಾರವಾಡ ಮತ್ತು ಸುತ್ತಮುತ್ತಲಿನ ಗೌಳಿ ಸಮುದಾಯದವರು ಸಾಕುವ ಧಾರವಾಡದ ಎಮ್ಮೆಗಳ ಹಾಲಿನಿಂದ ಧಾರವಾಡ ಪೇಡಾ ತಯಾರಿಸಲಾಗುತ್ತದೆ. ರಾಮ್ ರತನ್ ಸಿಂಗ್ ಠಾಕೂರ್ ಮೊಮ್ಮಗ ಬಾಬು ಸಿಂಗ್ ಠಾಕೂರ್ ಅವರು ತಮ್ಮ ಲೈನ್ ಬಜಾರ್ ಅಂಗಡಿಯಲ್ಲಿ ಕುಟುಂಬದ ವ್ಯವಹಾರವನ್ನು ಮತ್ತಷ್ಟು...

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ