AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು ಟ್ಯಾಕ್ಸಿಗಳ ಆದಾಯ ಕಿತ್ತುಕೊಳ್ಳುವುದೂ ಅಲ್ಲದೆ, ತೆರಿಗೆಯನ್ನೂ ವಂಚಿಸುತ್ತಿರುವ ಕೇರಳದ ಅಕ್ರಮ ಟ್ಯಾಕ್ಸಿಗಳು!

Kerala illegal taxis: ಕೇರಳ ರಾಜ್ಯದ ಅಕ್ರಮ ಟ್ಯಾಕ್ಸಿ ವ್ಯವಹಾರ ಕೊಡಗಿನ ಟ್ಯಾಕ್ಸಿಗಳ ಆದಾಯ ಕಿತ್ತುಕೊಳ್ಳುತ್ತಿರೋದು ಮಾತ್ರವಲ್ಲದೆ ರಾಜ್ಯಕ್ಕೆ ತೆರಿಗೆಯನ್ನೂ ವಂಚಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕೊಡಗು ಟ್ಯಾಕ್ಸಿಗಳ ಆದಾಯ ಕಿತ್ತುಕೊಳ್ಳುವುದೂ ಅಲ್ಲದೆ, ತೆರಿಗೆಯನ್ನೂ ವಂಚಿಸುತ್ತಿರುವ ಕೇರಳದ ಅಕ್ರಮ ಟ್ಯಾಕ್ಸಿಗಳು!
ಕೊಡಗು ಟ್ಯಾಕ್ಸಿಗಳ ಆದಾಯ ಕಿತ್ತುಕೊಳ್ಳುವುದೂ ಅಲ್ಲದೆ, ತೆರಿಗೆಯನ್ನೂ ವಂಚಿಸುತ್ತಿರುವ ಕೇರಳದ ಅಕ್ರಮ ಟ್ಯಾಕ್ಸಿಗಳು!
Gopal AS
| Edited By: ಸಾಧು ಶ್ರೀನಾಥ್​|

Updated on: Dec 16, 2023 | 1:13 PM

Share

ಕೊಡಗು, ಪ್ರವಾಸೋದ್ಯಮ (Tourism) ಜಿಲ್ಲೆಯಾಗಿ ಸಾಕಷ್ಟು ಹೆಸರು ಗಳಿಸಿದೆ. ಈ ಪ್ರವಾಸೋದ್ಯಮವನ್ನೇ ನಂಬಿಕೊಂಡು ಇಂದು ಅಲ್ಲಿ ಹಲವು ಉದ್ಯಮಗಳು ತಲೆ ಎತ್ತಿವೆ. ಅದ್ರಲ್ಲಿ ಟ್ಯಾಕ್ಸಿ ಬಿಸ್ನೆಸ್​ ಕೂಡ ಒಂದು. ಆದ್ರೆ ಕೇರಳ ರಾಜ್ಯದ ಅಕ್ರಮ ಟ್ಯಾಕ್ಸಿ ವ್ಯವಹಾರ ( Kerala illegal taxis) ಕೊಡಗಿನ ಟ್ಯಾಕ್ಸಿಗಳ (Kodagu taxis) ಆದಾಯ ಕಿತ್ತುಕೊಳ್ಳುತ್ತಿರೋದು ಮಾತ್ರವಲ್ಲದೆ ರಾಜ್ಯಕ್ಕೆ ತೆರಿಗೆಯನ್ನೂ ವಂಚಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕೊಡಗು ಜಿಲ್ಲೆಗೆ ಬೇರೆ ಬೇರೆ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಈ ಪ್ರವಾಸಿಗರನ್ನ ಕರೆದುಕೊಂಡು ಹೋಗಲೆಂದೇ ಜಿಲ್ಲೆಯಲ್ಲಿ ಏನಿಲ್ಲವೆಂದರೂ 600ಕ್ಕು ಅಧಿಕ ಟ್ಯಾಕ್ಸಿಗಳಿವೆ. ಪ್ರವಾಸೋಧ್ಯಮವನ್ನೇ ನಂಬಿ ಇವರೆಲ್ಲಾ ಸಾಲಸೋಲ ಮಾಡಿ ಕಾರು ಖರೀದಿಸಿ ಬದುಕು ನಡೆಸುತ್ತಿದ್ದಾರೆ. ಆದ್ರೆ ಇವರ ಹೊರ ರಾಜ್ಯಗಳ ಅಕ್ರಮ ಟ್ಯಾಕ್ಸಿಗಳು ಕೊಡಗು ಜಿಲ್ಲೆಯ ಟ್ಯಾಕ್ಸಿಗಳಿಗೆ ಅನ್ಯಾಯ ಮಾಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಕೇರಳದಿಂದ ಬರುವ ಟ್ಯಾಕ್ಸಿಗಳು ಕೊಡಗಿನಲ್ಲಿ ಬಹಳ ಕಡಿಮೆ ಬೆಲೆಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತವೆ. ಮಾತ್ರವಲ್ಲದೆ, ಕೇರಳದ ಟ್ಯಾಕ್ಸಿಗಳಿಗೆ ತೆರಿಗೆ ಹಾಕಲು ಕೊಗಿನಲ್ಲಿ ಎಲ್ಲಿಯೂ ಆರ್​ಟಿಒ ಚೆಕ್​ ಪೋಸ್ಟ್​ ಕೂಡ ಇಲ್ಲ. ಹಾಗಾಗಿ ಕೊಡಗಿನ ಟ್ಯಾಕ್ಸಿಗಳಿಗೆ ಅನ್ಯಾಯ ಒಂದಾದ್ರೆ ಸರ್ಕಾರಕ್ಕೆ ನಿತ್ಯ ಲಕ್ಷಾಂತರ ರೂ ತೆರಿಗೆ ವಂಚನೆಯಾಗುತ್ತಿದೆ ಎಂಬ ಆರೋ ಕೇಳಿ ಬಂದಿದೆ.

ಇದನ್ನೂ ಓದಿ:  ಟ್ಯಾಕ್ಸ್​ ಕಟ್ಟಲ್ಲಾ ಏನೂ ಇಲ್ಲ- ಪ್ರವಾಸಿ ವೀಸಾದಲ್ಲಿ ಬಂದು ಮೈಸೂರಿನಲ್ಲಿ ಅಕ್ರಮವಾಗಿ ದುಡ್ಡು ಮಾಡುವುದೇ ಈ ವಿದೇಶಿ ಯುವಕರ ‘ಯೋಗ’

ಅತ್ತ ಹೊರ ಜಿಲ್ಲೆಗಳಿಂದ ಒನ್​ ವೇ ಟ್ರಿಪ್​ ಬರುವ ಕಾರುಗಳು ಜಿಲ್ಲಯ ಟ್ಯಾಕ್ಸಿ ಚಾಲಕರಿಗೆ ಅನ್ಯಾಯ ಮಾಡುತ್ತಿದ್ದರೆ ಇತ್ತ ಹೊರ ರಾಜ್ಯದ ಟ್ಯಾಕ್ಸಿಗಳೂ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿವೆ. ಇದನ್ನ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಟ್ಯಾಕ್ಸಿ ಚಾಲಕರು ಆಗ್ರಹಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ