AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು ಟ್ಯಾಕ್ಸಿಗಳ ಆದಾಯ ಕಿತ್ತುಕೊಳ್ಳುವುದೂ ಅಲ್ಲದೆ, ತೆರಿಗೆಯನ್ನೂ ವಂಚಿಸುತ್ತಿರುವ ಕೇರಳದ ಅಕ್ರಮ ಟ್ಯಾಕ್ಸಿಗಳು!

Kerala illegal taxis: ಕೇರಳ ರಾಜ್ಯದ ಅಕ್ರಮ ಟ್ಯಾಕ್ಸಿ ವ್ಯವಹಾರ ಕೊಡಗಿನ ಟ್ಯಾಕ್ಸಿಗಳ ಆದಾಯ ಕಿತ್ತುಕೊಳ್ಳುತ್ತಿರೋದು ಮಾತ್ರವಲ್ಲದೆ ರಾಜ್ಯಕ್ಕೆ ತೆರಿಗೆಯನ್ನೂ ವಂಚಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕೊಡಗು ಟ್ಯಾಕ್ಸಿಗಳ ಆದಾಯ ಕಿತ್ತುಕೊಳ್ಳುವುದೂ ಅಲ್ಲದೆ, ತೆರಿಗೆಯನ್ನೂ ವಂಚಿಸುತ್ತಿರುವ ಕೇರಳದ ಅಕ್ರಮ ಟ್ಯಾಕ್ಸಿಗಳು!
ಕೊಡಗು ಟ್ಯಾಕ್ಸಿಗಳ ಆದಾಯ ಕಿತ್ತುಕೊಳ್ಳುವುದೂ ಅಲ್ಲದೆ, ತೆರಿಗೆಯನ್ನೂ ವಂಚಿಸುತ್ತಿರುವ ಕೇರಳದ ಅಕ್ರಮ ಟ್ಯಾಕ್ಸಿಗಳು!
ಗೋಪಾಲ್​ ಸೋಮಯ್ಯ
| Edited By: ಸಾಧು ಶ್ರೀನಾಥ್​|

Updated on: Dec 16, 2023 | 1:13 PM

Share

ಕೊಡಗು, ಪ್ರವಾಸೋದ್ಯಮ (Tourism) ಜಿಲ್ಲೆಯಾಗಿ ಸಾಕಷ್ಟು ಹೆಸರು ಗಳಿಸಿದೆ. ಈ ಪ್ರವಾಸೋದ್ಯಮವನ್ನೇ ನಂಬಿಕೊಂಡು ಇಂದು ಅಲ್ಲಿ ಹಲವು ಉದ್ಯಮಗಳು ತಲೆ ಎತ್ತಿವೆ. ಅದ್ರಲ್ಲಿ ಟ್ಯಾಕ್ಸಿ ಬಿಸ್ನೆಸ್​ ಕೂಡ ಒಂದು. ಆದ್ರೆ ಕೇರಳ ರಾಜ್ಯದ ಅಕ್ರಮ ಟ್ಯಾಕ್ಸಿ ವ್ಯವಹಾರ ( Kerala illegal taxis) ಕೊಡಗಿನ ಟ್ಯಾಕ್ಸಿಗಳ (Kodagu taxis) ಆದಾಯ ಕಿತ್ತುಕೊಳ್ಳುತ್ತಿರೋದು ಮಾತ್ರವಲ್ಲದೆ ರಾಜ್ಯಕ್ಕೆ ತೆರಿಗೆಯನ್ನೂ ವಂಚಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕೊಡಗು ಜಿಲ್ಲೆಗೆ ಬೇರೆ ಬೇರೆ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಈ ಪ್ರವಾಸಿಗರನ್ನ ಕರೆದುಕೊಂಡು ಹೋಗಲೆಂದೇ ಜಿಲ್ಲೆಯಲ್ಲಿ ಏನಿಲ್ಲವೆಂದರೂ 600ಕ್ಕು ಅಧಿಕ ಟ್ಯಾಕ್ಸಿಗಳಿವೆ. ಪ್ರವಾಸೋಧ್ಯಮವನ್ನೇ ನಂಬಿ ಇವರೆಲ್ಲಾ ಸಾಲಸೋಲ ಮಾಡಿ ಕಾರು ಖರೀದಿಸಿ ಬದುಕು ನಡೆಸುತ್ತಿದ್ದಾರೆ. ಆದ್ರೆ ಇವರ ಹೊರ ರಾಜ್ಯಗಳ ಅಕ್ರಮ ಟ್ಯಾಕ್ಸಿಗಳು ಕೊಡಗು ಜಿಲ್ಲೆಯ ಟ್ಯಾಕ್ಸಿಗಳಿಗೆ ಅನ್ಯಾಯ ಮಾಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಕೇರಳದಿಂದ ಬರುವ ಟ್ಯಾಕ್ಸಿಗಳು ಕೊಡಗಿನಲ್ಲಿ ಬಹಳ ಕಡಿಮೆ ಬೆಲೆಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತವೆ. ಮಾತ್ರವಲ್ಲದೆ, ಕೇರಳದ ಟ್ಯಾಕ್ಸಿಗಳಿಗೆ ತೆರಿಗೆ ಹಾಕಲು ಕೊಗಿನಲ್ಲಿ ಎಲ್ಲಿಯೂ ಆರ್​ಟಿಒ ಚೆಕ್​ ಪೋಸ್ಟ್​ ಕೂಡ ಇಲ್ಲ. ಹಾಗಾಗಿ ಕೊಡಗಿನ ಟ್ಯಾಕ್ಸಿಗಳಿಗೆ ಅನ್ಯಾಯ ಒಂದಾದ್ರೆ ಸರ್ಕಾರಕ್ಕೆ ನಿತ್ಯ ಲಕ್ಷಾಂತರ ರೂ ತೆರಿಗೆ ವಂಚನೆಯಾಗುತ್ತಿದೆ ಎಂಬ ಆರೋ ಕೇಳಿ ಬಂದಿದೆ.

ಇದನ್ನೂ ಓದಿ:  ಟ್ಯಾಕ್ಸ್​ ಕಟ್ಟಲ್ಲಾ ಏನೂ ಇಲ್ಲ- ಪ್ರವಾಸಿ ವೀಸಾದಲ್ಲಿ ಬಂದು ಮೈಸೂರಿನಲ್ಲಿ ಅಕ್ರಮವಾಗಿ ದುಡ್ಡು ಮಾಡುವುದೇ ಈ ವಿದೇಶಿ ಯುವಕರ ‘ಯೋಗ’

ಅತ್ತ ಹೊರ ಜಿಲ್ಲೆಗಳಿಂದ ಒನ್​ ವೇ ಟ್ರಿಪ್​ ಬರುವ ಕಾರುಗಳು ಜಿಲ್ಲಯ ಟ್ಯಾಕ್ಸಿ ಚಾಲಕರಿಗೆ ಅನ್ಯಾಯ ಮಾಡುತ್ತಿದ್ದರೆ ಇತ್ತ ಹೊರ ರಾಜ್ಯದ ಟ್ಯಾಕ್ಸಿಗಳೂ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿವೆ. ಇದನ್ನ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಟ್ಯಾಕ್ಸಿ ಚಾಲಕರು ಆಗ್ರಹಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!