ಚಿಕ್ಕೋಡಿ: ಪ್ರತಿಭಟನೆಗೆ ಬರುವುದಾಗಿ ಹೇಳಿ ರೈತರಿಗೆ ಕೈಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್, ಫೋನ್​ ಸ್ವಿಚ್ ಆಫ್ 

| Updated By: ಸಾಧು ಶ್ರೀನಾಥ್​

Updated on: Sep 22, 2023 | 12:40 PM

ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ಮುಖಂಡರು ಪ್ರತಿಭಟನೆಗೆ ಕರೆಕೊಟ್ಟಿದ್ದರು. ಅದರಂತೆ ನಿನ್ನೆಯವರೆಗೂ ಪ್ರತಿಭಟನೆಗೆ ಆಗಮಿಸುವುದಾಗಿ ಹೇಳಿದ್ದ ಕೋಡಿಹಳ್ಳಿ ಚಂದ್ರಶೇಖರ್ ಇಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಈ ಮಧ್ಯೆ, ಚಿಕ್ಕೋಡಿ ತಾಲೂಕು ರೈತ ಸಂಘದ ಅಧ್ಯಕ್ಷ ಮಂಜುನಾಥ ಪರಗೌಡ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿದಿದೆ.

ಚಿಕ್ಕೋಡಿ: ಪ್ರತಿಭಟನೆಗೆ ಬರುವುದಾಗಿ ಹೇಳಿ ರೈತರಿಗೆ ಕೈಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್, ಫೋನ್​ ಸ್ವಿಚ್ ಆಫ್ 
ಪ್ರತಿಭಟನೆಗೆ ಬರುವುದಾಗಿ ಹೇಳಿ ರೈತರಿಗೆ ಕೈಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್
Follow us on

ಬೆಳಗಾವಿ, ಸೆಪ್ಟೆಂಬರ್ 22​: ರೈತರ ನಾನಾ ಬೇಡಿಕೆಗೆ ಆಗ್ರಹಿಸಿ, ಪ್ರತಿಭಟನೆಗೆ ಮುಂದಾಗಿದ್ದ ರೈತರಿಗೆ (farmers protest ) ಸಾಥ್​​ ನಿಡುವುದಾಗಿ ಭರವಸೆ ನೀಡಿದ್ದ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekhar) ಬೆಳಗಾವಿ ಜಿಲ್ಲೆ ಚಿಕ್ಕೋಡಿ ಭಾಗದ (Chikkodi, Belagavi) ರೈತರಿಗೆ ಕೈ ಕೊಟ್ಟಿದ್ದಾರೆ. ಹಿಡಕಲ್ ಡ್ಯಾಂನಿಂದ ಜಿಎಲ್‌ಬಿಸಿ ಕಾಲುವೆಗೆ ನೀರು ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಚಿಕ್ಕೋಡಿ-ಮಿರಜ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ರೈತರು ಮುಂದಾದರು. ಹಾಗಾಗಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೇರೂರು ಕ್ರಾಸ್ ಬಳಿ ನೂರಾರು ರೈತರು ಜಮಾಯಿಸಿದ್ದರು.

ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ಮುಖಂಡರು ಪ್ರತಿಭಟನೆಗೆ ಕರೆಕೊಟ್ಟಿದ್ದರು. ಅದರಂತೆ ನಿನ್ನೆಯವರೆಗೂ ಪ್ರತಿಭಟನೆಗೆ ಆಗಮಿಸುವುದಾಗಿ ಹೇಳಿದ್ದ ಕೋಡಿಹಳ್ಳಿ ಚಂದ್ರಶೇಖರ್ ಇಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅಸಲಿಗೆ ಸರ್ಕಾರಿ ಅತಿಥಿಗೃಹ ಕೆಕೆ ಗೆಸ್ಟ್ ಹೌಸ್​​ ನಲ್ಲಿ ಚೈತ್ರಾ ಮೇಡಂಗೆ ರೂಮ್​ ಸಿಕ್ಕಿದ್ದು ಹೇಗೆ? ಯಾರ, ಯಾವ ಪ್ರಭಾವ ಅಲ್ಲಿ ಕೆಲಸ ಮಾಡಿತ್ತು?

ಈ ಮಧ್ಯೆ, ಚಿಕ್ಕೋಡಿ ತಾಲೂಕು ರೈತ ಸಂಘದ ಅಧ್ಯಕ್ಷ ಮಂಜುನಾಥ ಪರಗೌಡ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿದಿದೆ. ರೈತರ ಪ್ರತಿಭಟನೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಒಂದು ಡಿಎಆರ್, ಎರಡು ಕೆಎಸ್‌ಆರ್‌ಪಿ ತುಕಡಿ, ಓರ್ವ ಡಿವೈಎಸ್ ಪಿ, ಸಿಪಿಐ, ನಾಲ್ವರು ಪಿಎಸ್ಐ ಸೇರಿ 50ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ