AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜೆ ಹೆಣ್ಣುಮಗುವಿಗೆ ಜನ್ಮ, ಮಧ್ಯರಾತ್ರಿ ಇಂಜೆಕ್ಷನ್ ನೀಡಿದ್ದ ಕೆಲವೇ ಕ್ಷಣದಲ್ಲೇ ಬಾಣಂತಿ ಸಾವು

ರಾಜ್ಯದಲ್ಲಿ ಆಗಾಗ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿ ಬರುತ್ತಿರುತ್ತದೆ. ಅದರಂತೆ ಇದೀಗ ಕೋಲಾರ ಜಿಲ್ಲಾಸ್ಪತ್ರೆ(Kolar District Hospital)ಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಕುರಿತು ಕೋಲಾರ ಜಿಲ್ಲಾಸ್ಪತ್ರೆ ವೈದ್ಯೆ ಡಾ.ಶಾಂತಾ ವಿರುದ್ಧ ಕೋಲಾರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನನ್ನ ಪತ್ನಿ ಸಾವಿಗೆ ನ್ಯಾಯ ಬೇಕು ಎಂದು ಪತಿ ಗೋಪಾಲ್ ಸೇರಿದಂತೆ ಮೃತಳ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಸಂಜೆ ಹೆಣ್ಣುಮಗುವಿಗೆ ಜನ್ಮ, ಮಧ್ಯರಾತ್ರಿ ಇಂಜೆಕ್ಷನ್ ನೀಡಿದ್ದ ಕೆಲವೇ ಕ್ಷಣದಲ್ಲೇ ಬಾಣಂತಿ ಸಾವು
ಕೋಲಾರ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Mar 05, 2024 | 3:16 PM

Share

ಕೋಲಾರ, ,ಮಾ.05: ಕೋಲಾರ ಜಿಲ್ಲಾಸ್ಪತ್ರೆ(Kolar District Hospital)ಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿದ ಘಟನೆ ನಡೆದಿದೆ. ಕೋಲಾರ ತಾಲೂಕಿನ ಜಂಗಾಲಹಳ್ಳಿಯ ಭವಾನಿ(26) ಮೃತ ಮಹಿಳೆ. ಸೋಮವಾರ(ಮಾ.04) ಬೆಳಗ್ಗೆ ಹೆರಿಗೆಗೆಂದು ಆಸ್ಪತ್ರೆಗೆ ಭವಾನಿ ಅವರು ದಾಖಲಾಗಿದ್ದರು. ಸೋಮವಾರ ಸಂಜೆ ವೇಳೆಗೆ ಹೆಣ್ಣುಮಗುವಿಗೆ ಜನ್ಮ ಕೂಡ ನೀಡಿದ್ದರು. ಎಲ್ಲವೂ ಸರಿಯಾಗಿತ್ತು. ಆದರೆ, ಮಧ್ಯರಾತ್ರಿ ಬಾಣಂತಿ ನೋವು ಎಂದು ಹೇಳಿದ್ದಾರೆ. ಈ ಹಿನ್ನಲೆ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ. ಇದಾದ ನಂತರ ಮಹಿಳೆಯ ಆರೋಗ್ಯ ಏರುಪೇರಾಗಿತ್ತು.

ವೈದ್ಯರ ವಿರುದ್ಧ ಕೋಲಾರ ಟೌನ್ ಪೊಲೀಸ್ ಠಾಣೆಗೆ ದೂರು

ಇನ್ನು ತೀವ್ರ ನೋವಿನಿಂದ ಬಳಲುತ್ತಿದ್ದ ಬಾಣಂತಿಗೆ ಇಂಜೆಕ್ಷನ್​ ನೀಡಲಾಗಿತ್ತು. ಆದರೆ, ವೈದ್ಯರು ಇಂಜೆಕ್ಷನ್ ನೀಡಿದ ಕೆಲ ಕ್ಷಣದಲ್ಲೇ ಬಾಣಂತಿ ಭವಾನಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಕೋಲಾರ ಜಿಲ್ಲಾಸ್ಪತ್ರೆ ವೈದ್ಯೆ ಡಾ.ಶಾಂತಾ ವಿರುದ್ಧ ಕೋಲಾರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನನ್ನ ಪತ್ನಿ ಸಾವಿಗೆ ನ್ಯಾಯ ಬೇಕು ಎಂದು ಪತಿ ಗೋಪಾಲ್ ಸೇರಿದಂತೆ ಮೃತಳ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಚಿಕ್ಕೋಡಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ, ಕುಟುಂಬಸ್ಥರಿಂದ ಠಾಣೆ ಎದುರು ಧರಣಿ

ಶಿವಮೊಗ್ಗದಲ್ಲಿ ಇಬ್ಬರು ಅಪರಿಚಿತರಿಂದ ಯುವಕನಿಗೆ ಚಾಕು ಇರಿತ

ಶಿವಮೊಗ್ಗ: ಶಿವಮೊಗ್ಗದ ದ ರಾಯಲ್ ಆರ್ಕೇಡ್ ಹಿಂಭಾಗ ರಸ್ತೆಯಲ್ಲಿ ಕಾರ್ತಿಕ್​ ಎಂಬಾತನಿಗೆ ಇಬ್ಬರು ಅಪರಿಚಿತರು ಚಾಕು ಇರಿದು ಪರಾರಿಯಾಗಿದ್ದಾರೆ. ಇದರಿಂದ ಗಾಯಗೊಂಡು ಕಾರ್ತಿಕ್​ನನ್ನು ಕೂಡಲೇ ಶಿವಮೊಗ್ಗದ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ನಗರದ ಮಿಳಘಟ್ಟ ಬಡಾವಣೆಯ ಕಾರ್ತಿಕ್ ಸ್ಥಿತಿ ಗಂಭೀರವಾಗಿದ್ದು, ಇತನ ಮೇಲಿನ ದಾಳಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ