ಕೋಲಾರ: ಕಟಾವಿಗೆ ಬಂದ 700ಕ್ಕೂ ಹೆಚ್ಚು ಕಲ್ಲಂಗಡಿ ಹಣ್ಣುಗಳನ್ನ ನಾಶಪಡಿಸಿದ ದುಷ್ಕರ್ಮಿಗಳು

ಅಂಬರೀಶ್ ಎಂಬ ರೈತ 5 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಕಲ್ಲಂಗಡಿ ಬೆಳೆದಿದ್ದರು. ಆದರೆ ದುಷ್ಕರ್ಮಿಗಳು ಕಲ್ಲಂಗಡಿ ಹಣ್ಣುಗಳನ್ನು ಮನಬಂದಂತೆ ಕತ್ತರಿಸಿದ್ದಾರೆ. ಬೆಳಿಗ್ಗೆ ಎಂದಿನಂತೆ ತೋಟಕ್ಕೆ ಬಂದ ಅಂಬರೀಶ್ ಹೊಲವನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.

ಕೋಲಾರ: ಕಟಾವಿಗೆ ಬಂದ 700ಕ್ಕೂ ಹೆಚ್ಚು ಕಲ್ಲಂಗಡಿ ಹಣ್ಣುಗಳನ್ನ ನಾಶಪಡಿಸಿದ ದುಷ್ಕರ್ಮಿಗಳು
ಕಲ್ಲಂಗಡಿ ಹಣ್ಣುಗಳನ್ನ ನಾಶಪಡಿಸಿದ್ದಾರೆ
Edited By: sandhya thejappa

Updated on: Feb 17, 2022 | 11:22 AM

ಕೋಲಾರ: ಉರಟಿ ಅಗ್ರಹಾರ ಗ್ರಾಮದ ರೈತರೊಬ್ಬರು ಬೇರೆಯವರ ಭೂಮಿಯನ್ನು ಬೋಗ್ಯಕ್ಕೆ ಪಡೆದು ಕಲ್ಲಂಗಡಿ (Water Melon) ಬೆಳೆದಿದ್ದರು. ಹಣ ಸಂಪಾದನೆ ಮಾಡುವ ಕನಸು ಕಂಡಿದ್ದರು. ಆದರೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ದುಷ್ಕರ್ಮಿಗಳು ರಾತ್ರೋ ರಾತ್ರಿ ಕಲ್ಲಂಗಡಿ ಬೆಳೆಯನ್ನು ನಾಶ ಮಾಡಿ, ವಿಕೃತಿ ಮೆರೆದಿದ್ದಾರೆ. ರಾತ್ರಿ ವೇಳೆ ಕಲ್ಲಂಗಡಿ ಬೆಳೆದಿದ್ದ ಹೊಲಕ್ಕೆ ನುಗಿರುವ ದುಷ್ಕರ್ಮಿಗಳು ದೊಣ್ಣೆ ಹಾಗೂ ಮಚ್ಚನ್ನು ಬಳಸಿ ಐದು ಎಕರೆಯಲ್ಲಿದ್ದ ಬೆಳೆಯನ್ನು ನಾಶ ಮಾಡಿದ್ದಾರೆ.

ಅಂಬರೀಶ್ ಎಂಬ ರೈತ 5 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಕಲ್ಲಂಗಡಿ ಬೆಳೆದಿದ್ದರು. ಆದರೆ ದುಷ್ಕರ್ಮಿಗಳು ಕಲ್ಲಂಗಡಿ ಹಣ್ಣುಗಳನ್ನು ಮನಬಂದಂತೆ ಕತ್ತರಿಸಿದ್ದಾರೆ. ಬೆಳಿಗ್ಗೆ ಎಂದಿನಂತೆ ತೋಟಕ್ಕೆ ಬಂದ ಅಂಬರೀಶ್ ಹೊಲವನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಫಸಲನ್ನು ಹತ್ತು ಹದಿನೈದು ದಿನಗಳಲ್ಲಿ ಕಟಾವು ಮಾಡಬೇಕಿತ್ತು. ನಿನ್ನೆ (ಫೆ.16) ರಾತ್ರಿ 9 ಗಂಟೆವರೆಗೂ ರೈತ ಹೊಲದಲ್ಲೆ ಇದ್ದರು. ಬೆಳಿಗ್ಗೆ ಬಂದು ನೋಡಿದಾಗ ಸುಮಾರು 700 ಕ್ಕೂ ಹೆಚ್ಚು ಕಲ್ಲಂಗಡಿ ಹಣ್ಣುಗಳನ್ನ ನಾಶ ಮಾಡಿದ್ದಾರೆ.

ರೈತನಿಗೆ ತಮ್ಮ ಗ್ರಾಮದ ಕೆಲವರ ಮೇಲೆ ಅನುಮಾನವಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ರೀತಿ ವೈಯಕ್ತಿಕ ದ್ವೇಷಗಳಿಂದ ಹಠ ಸಾಧಿಸಲು ರೈತರ ಹೊಟ್ಟೆ ಮೇಲೆ ಹೊಡೆಯುವ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಕಸ್ಮಿಕ ಬೆಂಕಿ ಅವಘಡ:
ಆಕಸ್ಮಿಕ ಬೆಂಕಿ ತಗುಲಿ ಮನೆ ಹೊತ್ತಿ ಉರಿದಿದೆ. ಈ ಘಟನೆ ಧಾರವಾಡ ನಗರದ ಮೃತ್ಯುಂಜಯ ನಗರದ ಬಣಗಾರ ಓಣಿಯಲ್ಲಿ ನಡೆದಿದೆ. ವಿರೂಪಾಕ್ಷಪ್ಪ ಕಟಗಿ ಎಂಬುವವರಿಗೆ ಸೇರಿದ ಮನೆ ಸುಟ್ಟು ಹೋಗಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಮನೆಗೆ ಆವರಿಸಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಸರಿಯಾದ ಸಮಯಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಇದನ್ನೂ ಓದಿ

Shanti: ಶಾಂತಿ ಶಾಂತಿ ಶಾಂತಿ ಎಂದು 3 ಸಲ ಹೇಳುವುದೇಕೆ? ಶಾಂತಿಃ ಎಂದು ಒಂದೇ ಸಲ ಹೇಳಿದರೆ ಸಾಲದೆ? ಏನಿದರ ಅರ್ಥ?

‘ಬಿಚ್ಚುಗತ್ತಿ’ ಮೂಲಕ ಗಮನ ಸೆಳೆದಿದ್ದ ರಾಜವರ್ಧನ್ ಹೊಸ ಚಿತ್ರ ಅನೌನ್ಸ್; ಇಲ್ಲಿದೆ ಹೊಸ ಸಮಾಚಾರ

Web contact

TV9 Kannada

Read More
Follow Us