AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆ ಅಭಿವೃದ್ಧಿ ವಿಚಾರವಾಗಿ ಕೇಳಿದ್ದಕ್ಕೆ ಶಿಕ್ಷಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಗ್ರಾಮದ ಮುಖಂಡ; ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್

ನೀನ್ಯಾವನು ಅಭಿವೃದ್ಧಿ ಮಾಡಿ ಎಂದು ರಾಜಕಾರಿಣಿಗಳನ್ನು ಕೇಳೋದಕ್ಕೆ, ಯಾವುದಾದ್ರು ಸರ್ಕಾರಿ ಅನುದಾನ ಬಂದ್ರೆ ಅಭಿವೃದ್ಧಿ ಆಗುತ್ತೆ ಬಿಡು. ಬೇಕಾದ್ರೆ ರಾಜಕಾರಿಣಿ ಬಳಿ ನಿನ್ನ ಹೆಂಡತಿ ಕಳಿಸಿ ಮಾಡಿಸ್ಕೋ. ಸರಿಯಾಗಿ ಮಕ್ಕಳಿಗೆ ಪಾಠ ಮಾಡಿಕೊಂಡು ಹೋಗೋದು ಕಲಿ ಎಂದು ಶಿಕ್ಷಕ ಪಾಪಣ್ಣನಿಗೆ ಗ್ರಾಮದ ಮುಖಂಡ ಚಲಪತಿ ಅವಾಚ್ಯವಾಗಿ ನಿಂದಿಸಿದ್ದಾರೆ.

ಶಾಲೆ ಅಭಿವೃದ್ಧಿ ವಿಚಾರವಾಗಿ ಕೇಳಿದ್ದಕ್ಕೆ ಶಿಕ್ಷಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಗ್ರಾಮದ ಮುಖಂಡ; ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್
ಸಾಂದರ್ಭಿಕ ಚಿತ್ರ
TV9 Web
| Edited By: ಆಯೇಷಾ ಬಾನು|

Updated on: May 23, 2022 | 6:10 PM

Share

ಕೋಲಾರ: ಶಾಲೆ ಅಭಿವೃದ್ಧಿ ವಿಚಾರವಾಗಿ ಕೇಳಿದ್ದಕ್ಕೆ ಗ್ರಾಮದ ಮುಖಂಡ ಅವಾಚ್ಯವಾಗಿ ಶಿಕ್ಷಕನನ್ನ ನಿಂದಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. ಚೋಳಘಟ್ಟ ಶಾಲೆ ಶಿಕ್ಷಕನಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆಡಿಯೋ ವೈರಲ್ ಆಗಿದೆ. ಗ್ರಾಮದ ಮುಖಂಡ ಚಲಪತಿ ಎಂಬುವವರಿಗೆ ಶಿಕ್ಷಕ ಪಾಪಣ್ಣ ಕರೆಮಾಡಿ ಶಾಲೆಯ ಅಭಿವೃದ್ಧಿ ವಿಚಾರವಾಗಿ ಮಾತನಾಡುತ್ತಿದ್ದರು. ಈ ವೇಳೆ ಶಿಕ್ಷಕನಿಗೆ ಅವಾಚ್ಯ ಶಬ್ದಗಳಿಂದ ಚಲಪತಿ ನಿಂದಿಸಿದ್ದಾರೆ.

ನೀನ್ಯಾವನು ಅಭಿವೃದ್ಧಿ ಮಾಡಿ ಎಂದು ರಾಜಕಾರಿಣಿಗಳನ್ನು ಕೇಳೋದಕ್ಕೆ, ಯಾವುದಾದ್ರು ಸರ್ಕಾರಿ ಅನುದಾನ ಬಂದ್ರೆ ಅಭಿವೃದ್ಧಿ ಆಗುತ್ತೆ ಬಿಡು. ಬೇಕಾದ್ರೆ ರಾಜಕಾರಿಣಿ ಬಳಿ ನಿನ್ನ ಹೆಂಡತಿ ಕಳಿಸಿ ಮಾಡಿಸ್ಕೋ. ಸರಿಯಾಗಿ ಮಕ್ಕಳಿಗೆ ಪಾಠ ಮಾಡಿಕೊಂಡು ಹೋಗೋದು ಕಲಿ ಎಂದು ಶಿಕ್ಷಕ ಪಾಪಣ್ಣನಿಗೆ ಗ್ರಾಮದ ಮುಖಂಡ ಚಲಪತಿ ಅವಾಚ್ಯವಾಗಿ ನಿಂದಿಸಿದ್ದಾರೆ. ಶಿಕ್ಷಕ ಪಾಪಣ್ಣನನ್ನು ನಿಂದಿಸಿರುವ ಆಡಿಯೋ ಫುಲ್ ವೈರಲ್ ಆಗಿದೆ. ಇದನ್ನೂ ಓದಿ: Team India: ಭರ್ಜರಿ ಪ್ರದರ್ಶನ ನೀಡಿದ್ರು ಟೀಮ್ ಇಂಡಿಯಾದಲ್ಲಿಲ್ಲ ಚಾನ್ಸ್​: ಎಲ್ಲವೂ ಬದಲಾಗಲಿದೆ ಎಂದ ಯುವ ಆಟಗಾರ

ಇನ್ನು ಚಲಪತಿ ಮಾತಿಗೆ ಕೋಪಗೊಂಡ ಶಿಕ್ಷಕ, ಈ ವೇಳೆ ನನ್ನ ಹೆಂಡತಿ ಬಗ್ಗೆ ಏಕೆ ಮಾತನಾಡುತ್ತಿದಿರಿ ಎಂದು ಮುಖಂಡನಿಗೆ ಪ್ರಶ್ನೆ ಮಾಡಿದ್ದಾರೆ. ಆಗ ಹೌದು ಹೇಳಿದಿನಿ ನೀನು ಏನು ಬೇಕಾದ್ರೂ ಮಾಡಿಕೊ ಹೋಗು, ನನ್ನನು ಏನು ಮಾಡೋಕೆ ಆಗಲ್ಲ ಎಂದು ಮುಖಂಡ ಏಕವಚನದಲ್ಲಿ ತಿರುಗೇಟು ಕೊಟ್ಟಿದ್ದಾರೆ. ಅಸಹಾಯಕನಂತೆ ಶಿಕ್ಷಕ ಕರೆ ಕಟ್ ಮಾಡಿ ಸುಮ್ಮನಾಗಿದ್ದಾರೆ. ಸದ್ಯ ಇಬ್ಬರ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಚಲಪತಿಯ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ