AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್​ ಶಿಕ್ಷಣಕ್ಕಾಗಿ ಮೊಬೈಲ್ ಬೇಡಿ ರಸ್ತೆಯಲ್ಲಿ ನಿಂತ ಸೋದರಿಯರಿಗೆ ಸಿಕ್ತು ಮೊಬೈಲ್​! ಮನಮಿಡಿದು ಮೊಬೈಲ್​ ಕೊಡಿಸಿದವರು ಯಾರು?

online education: ಪತಿಯ ಸಾವು ಹಿನ್ನೆಲೆಯಲ್ಲಿ ಗಿರಿಜಾ-ಪ್ರೀತಿ ಅವರ ತಾಯಿ ನಿಂಬೆಹಣ್ಣು ಮಾರಾಟ ಮಾಡಿ, ಮಕ್ಕಳಿಬ್ಬರನ್ನೂ ಪೋಷಿಸುತ್ತಿದ್ದಾರೆ. ಯಾರಾದ್ರೂ ಸಹಾಯ ಮಾಡಿ, ತಮ್ಮ ಕಷ್ಟಕ್ಕೆ ನೆರವಾಗಿ ಎಂದು ಭಿತ್ತಿಪತ್ರ ಹಿಡಿದು ಮನವಿ ಮಾಡಿದ್ದರು. ಗಿರಿಜಾ ಎಂಟನೇ ತರಗತಿ ಓದುತ್ತಿದ್ರೆ, ಪ್ರೀತಿ ಹತ್ತನೆ ತರಗತಿಯಲ್ಲಿ ಓದುತ್ತಿದ್ದಾಳೆ.

ಆನ್​ಲೈನ್​ ಶಿಕ್ಷಣಕ್ಕಾಗಿ ಮೊಬೈಲ್ ಬೇಡಿ ರಸ್ತೆಯಲ್ಲಿ ನಿಂತ ಸೋದರಿಯರಿಗೆ ಸಿಕ್ತು ಮೊಬೈಲ್​! ಮನಮಿಡಿದು ಮೊಬೈಲ್​ ಕೊಡಿಸಿದವರು ಯಾರು?
ಆನ್​ಲೈನ್​ ಶಿಕ್ಷಣಕ್ಕಾಗಿ ಮೊಬೈಲ್ ಬೇಡಿ ರಸ್ತೆಯಲ್ಲಿ ನಿಂತ ಸೋದರಿಯರಿಗೆ ಸಿಕ್ತು ಮೊಬೈಲ್​! ಮನಮಿಡಿದು ಹೊಸ ಮೊಬೈಲ್​ ಕೊಡಿಸಿದವರು ಯಾರು?
TV9 Web
| Edited By: |

Updated on: Jul 09, 2021 | 4:36 PM

Share

ಕೊಪ್ಪಳ: ಇದು ಕರಾಳ ಕೊರೊನಾ ಕಾಲದ ಮನಮಿಡಿಯುವ ಪ್ರಕರಣಗಳಲ್ಲಿ ಒಂದಾಗಿದೆ. ಗಿರಿಜಾ ಹಾಗೂ ಪ್ರೀತಿ ಎಂಬ ಇಬ್ಬರು ಸಹೋದರಿಯರು ಆನ್​ಲೈನ್​ ಶಿಕ್ಷಣಕ್ಕಾಗಿ ತಮ್ಮ ಬಳಿ ಮೊಬೈಲ್ ಇಲ್ಲ. ಹೀಗಾಗಿ ಮೊಬೈಲ್ ಕೊಡಿಸುವಂತೆ ಭಿತ್ತಿ ಪತ್ರ ಹಿಡಿದುಕೊಂಡು ನಿನ್ನೆ ಬುಧವಾರ ಕೊಪ್ಪಳದಲ್ಲಿ ಗದಗ–ಹೊಸಪೇಟೆ ಹೆದ್ದಾರಿಯಲ್ಲಿ ವಿದ್ಯಾರ್ಥಿನಿಯರು ರಸ್ತೆಯಲ್ಲಿಯೇ ನಿಂತಿದ್ದರು. ಗಾಂಧಿ ನಗರ ನಿವಾಸಿಗಳಾದ ಗಿರಿಜಾ-ಪ್ರೀತಿ 19 ವರ್ಷಗಳ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ಇದನ್ನು ಕೇಳಿ ಮನಸು ಕರಗಿದ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸಹೋದರಿಯರಿಬ್ಬರಿಗೂ ಇಂದು ಮೊಬೈಲ್ ಕೊಡಿಸಿದ್ದಾರೆ.

24 ಗಂಟೆಯಲ್ಲಿಯೇ ಸೋದರಿಯರಿಗೆ ಸಿಕ್ತು ಮೊಬೈಲ್​: ಮೊಬೈಲ್ ಇಲ್ಲದಿದ್ದಕ್ಕೆ ಆನ್‌ಲೈನ್ ಕ್ಲಾಸ್ ಕೇಳಲು ಪರದಾಡುತ್ತಿದ್ದ ಸಹೋದರಿಯರಿಬ್ಬರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸಂಗಣ್ಣ ಕರಡಿ ಮೊಬೈಲ್ ಕೊಡಿಸಿದ್ದಾರೆ. ಬಿಜೆಪಿ ಸಂಸದ ಸಂಗಣ್ಣ ಕರಡಿ ಪುತ್ರ ಗವಿಸಿದ್ದಪ್ಪ ಕರಡಿ ಅವರು ಈ ಇಬ್ಬರು ವಿದ್ಯಾರ್ಥಿನಿಯರಿಗೆ ಮೊಬೈಲ್ ವಿತರಣೆ ಮಾಡಿದರು.

ಪತಿಯ ಸಾವು ಹಿನ್ನೆಲೆಯಲ್ಲಿ ಗಿರಿಜಾ-ಪ್ರೀತಿ ಅವರ ತಾಯಿ ನಿಂಬೆಹಣ್ಣು ಮಾರಾಟ ಮಾಡಿ, ಮಕ್ಕಳಿಬ್ಬರನ್ನೂ ಪೋಷಿಸುತ್ತಿದ್ದಾರೆ. ಯಾರಾದ್ರೂ ಸಹಾಯ ಮಾಡಿ, ತಮ್ಮ ಕಷ್ಟಕ್ಕೆ ನೆರವಾಗಿ ಎಂದು ಭಿತ್ತಿಪತ್ರ ಹಿಡಿದು ಮನವಿ ಮಾಡಿದ್ದರು. ಗಿರಿಜಾ ಎಂಟನೇ ತರಗತಿ ಓದುತ್ತಿದ್ರೆ, ಪ್ರೀತಿ ಹತ್ತನೆ ತರಗತಿಯಲ್ಲಿ ಓದುತ್ತಿದ್ದಾಳೆ. ಕೊಪ್ಪಳದಲ್ಲಿ ಸಹೋದರಿಯರಿಗೆ ಸಿಗುತ್ತಿಲ್ಲ ಆನ್​ಲೈನ್​ ಶಿಕ್ಷಣ; ಮೊಬೈಲ್​ ಕೊಡಿಸಿ ಅಂತ ಭಿತ್ತಿ ಪತ್ರ ಹಿಡಿದು ರಸ್ತೆಯಲ್ಲಿ ನಿಂತ ವಿದ್ಯಾರ್ಥಿಗಳು

( Koppal bjp mp sanganna karadi helps two school going sisters stand on road pleading mobile phone for online education )

Follow Us
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​