AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದಲ್ಲಿ ಹನಿ ನೀರಿಗೂ ಹಾಹಾಕಾರ; ಶಾಲೆ ಬಿಟ್ಟು ನೀರಿಗಾಗಿ ಓಡುತ್ತಿರುವ ಮಕ್ಕಳು

ಕೊಪ್ಪಳ ತಾಲೂಕಿನ ಇಂದಿರಾ ನಗರ ತಾಂಡಾದಲ್ಲಿ ಹನಿ ನೀರಿಗಾಗಿಯೂ ಪರಿತಪಿಸುವಂತಹ ಸ್ಥಿತಿ ಇದೆ. ಕೊಳವೆಬಾವಿಗಳು ಬತ್ತುತ್ತಿದ್ದು ಒಂದು ಬಿಂದಿಗೆ ನೀರಿಗಾಗಿಯೂ ಜನರು ಪರದಾಡುತ್ತಿದ್ದಾರೆ. ಓದಿಗಿಂತ ಹನಿ ನೀರು ಮುಖ್ಯ ಎಂದು ಶಾಲೆ ಬಿಟ್ಟು ನೀರು ಹಿಡಿಯಲು ಕೆಲ ಮಕ್ಕಳು ತಮ್ಮ ಓದನ್ನೇ ತ್ಯಾಗ ಮಾಡಿದ್ದಾರೆ. ತಮಗೆ ಶಾಶ್ವತ ನೀರು ಪೂರೈಕೆ ಮಾಡಬೇಕು ಎಂದು ಇಲ್ಲಿನ ಜನ ಒತ್ತಾಯಿಸಿದ್ದಾರೆ.

Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಆಯೇಷಾ ಬಾನು

Updated on:Feb 15, 2024 | 2:54 PM

ಕೊಪ್ಪಳ, ಫೆ.15: ಬೇಸಿಗೆ ಆರಂಭದಲ್ಲಿಯೇ ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ (Drinking Water) ಹಾಹಾಕಾರ ಶುರುವಾಗಿದೆ. ಕೊಳವೆಬಾವಿಗಳು ಬತ್ತುತ್ತಿದ್ದು ಒಂದು ಬಿಂದಿಗೆ ನೀರಿಗಾಗಿಯೂ ಜನರು ಪರದಾಡುತ್ತಿದ್ದಾರೆ. ಓದಿಗಿಂತ ಹನಿ ನೀರು ಮುಖ್ಯ ಎಂದು ಶಾಲೆ ಬಿಟ್ಟು ನೀರು ಹಿಡಿಯಲು ಕೆಲ ಮಕ್ಕಳು ತಮ್ಮ ಓದನ್ನೇ ತ್ಯಾಗ ಮಾಡುವಂತಹ ಸ್ಥಿತಿ ಕೊಪ್ಪಳದಲ್ಲಿ (Koppal) ನಿರ್ಮಾಣವಾಗಿದೆ. ಹೆತ್ತವರು ಕೂಲಿ ಕೆಲಸಕ್ಕೆ ಹೋದ್ರೆ, ಮಕ್ಕಳು (Students) ನೀರು ಹಿಡಿಯೋ ಅನಿವಾರ್ಯತೆ ಎದುರಾಗಿದೆ.

ನೀರಿನ ಸಮಸ್ಯೆಯಿಂದ ಮಕ್ಕಳು ಸರಿಯಾಗಿ ಓದಲಿಕ್ಕಾಗದೇ ವಿಧ್ಯೆಯಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳು, ಮಹಿಳೆಯರು ಬಿಂದಿಗೆ ನೀರಿಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಕೊಪ್ಪಳ ತಾಲೂಕಿನ ಇಂದಿರಾ ನಗರ ತಾಂಡಾದಲ್ಲಿ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ಇದೆ. ತಾಂಡಾದಲ್ಲಿ ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಆದರೆ ತಾಂಡಾಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಕೊಳವೆ ಬಾವಿಗಳು ಬತ್ತಿವೆ. ಇದೀಗ ಪರ್ಯಾಯವಾಗಿ ನೀರು ಪೂರೈಕೆ ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ತಾಂಡಾ ನಿವಾಸಿಗಳು ಖಾಸಗಿ ವ್ಯಕ್ತಿ ಬಳಿ ಕಾದು ಕಾದು ನೀರು ತಗೆದುಕೊಂಡು ಹೋಗುತ್ತಿದ್ದಾರೆ. ಕರೆಂಟ್ ಇದ್ದಾಗ ಬೇರೆಲ್ಲ ಕೆಲಸ ಬಿಟ್ಟು ನೀರು ಹಿಡಿಯಲು ಓಡುವಂತಾಗಿದೆ.

ತಾಂಡಾದಲ್ಲಿ ಮನೆ ಮನೆಗೆ ಗಂಗೆ ಯೋಜನೆಯಡಿ ನಲ್ಲಿ ಸಂಪರ್ಕ ಇದೆ. ಆದ್ರೆ ಜಲಜೀವನ ಮಿಷನ ಯೋಜನೆ ಕೈಕೊಟ್ಟಿದೆ. ನಲ್ಲಿ ಸಂಪರ್ಕ ಕೊಟ್ಟರು ಇಲ್ಲಿವರಗೆ ಹನಿ ನೀರು ಕೂಡ ಬಂದಿಲ್ಲ ಎಂದು ತಾಂಡಾ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ತಮಗೆ ಶಾಶ್ವತ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಹಣ ಡಬಲ್​ ಮಾಡಿಕೊಡುವುದಾಗಿ ನಂಬಿಸಿ ನೂರಾರು ಜನರಿಂದ 4.79 ಕೋಟಿ ವಂಚನೆ

ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ವೈಭವ ಕಂಡ ಸಾಮ್ರಾಜ್ಯವಾಗಿತ್ತು. ನಂತರ ವಿಜಯನಗರ ಸಾಮ್ರಾಜ್ಯ ಹಾಳಾದ ಬಳಿಕ ಉದಯವಾಗಿದ್ದೇ ಆದಿಲ್ ಶಾಹಿಗಳ ವಿಜಯಪುರ ಸಾಮ್ರಾಜ್ಯ. ವಿಜಯಪುರ ಸಾಮ್ರಾಜ್ಯವನ್ನು 400ಕ್ಕೂ ಆಧಿಕ ವರ್ಷಗಳ ಕಾಲ ಆಳಿದ ಆದಿಲ್ ಶಾಹಿಗಳು ಅಂದಿನ ಕಾಲದಲ್ಲಿ ಕುಡಿಯೋ ನೀರಿಗೆ ಬಹಳ ಪ್ರಾಮುಖ್ಯತೆ ನೀಡಿದ್ದರು. ಆಗಿನ ಕಾಲದಲ್ಲೇ ತಂತ್ರಜ್ಞಾನದ ಬಳಕೆ ಮಾಡಿದ್ದರು. ಸಮತಟ್ಟಾದ ಪ್ರದೇಶದಲ್ಲಿ ನೀರು ಸಂಗ್ರಹ ಮಾಡಿ ಪೂರೈಕೆ ಮಾಡುವುದು ಕಷ್ಟದ ಕೆಲಸವಾಗಿತ್ತು. ಅದಕ್ಕಾಗಿ ಅಂದಿನ ಕಾಲದಲ್ಲಿ ತಮ್ಮ ಸಾಮ್ರಾಜ್ಯದ ರಾಜಧಾನಿಯಾಗಿದ್ದ ವಿಜಯಪುರ ನಗರದ ಸುತ್ತಲೂ ನಾಲ್ಕೂ ದಿಕ್ಕಿಗೂ ದೊಡ್ಡ ದೊಡ್ಡ ಕೆರೆಗಳನ್ನು ಕಟ್ಟಿಸಿದ್ದರು. ಆ ಕೆರೆಗಳಿಗೆ ಸಂಪರ್ಕ ಹೊಂದುವಂತೆ ಭೂಮಿಯಾಳದಲ್ಲಿ ದೊಡ್ಡ ದೊಡ್ಡ ಕಾಲುವೆಗಳನ್ನು ಸುರಂಗದ ಮಾದರಿಯಲ್ಲೇ ನಿರ್ಮಾಣ ಮಾಡಿದರು.

ಆ ಅಂಡರ್ ಗ್ರೌಂಡ್ ಟ್ಯೂನಲ್ ಮೂಲಕ ನಗರದಲ್ಲಿರೋ ದೊಡ್ಡ ದೊಡ್ಡ ಬಾವಿಗಳಿಗೆ ಮಸೀದಿ, ದೇವಸ್ಥಾನಗಳಿಗೆ ಹರಿದು ಬರುವಂತೆ ಮಾಡಿದ್ದರು. ಈ ನೀರು ಗಂಜ್ ಗಳನ್ನು ನಿಲ್ಲುವಂತೆ ಮಾಡಿದ್ದರು. ಇಂಥ ತಂತ್ರಜ್ಞಾನ ಪರ್ಷಿಯಾ ದೇಶ ಬಿಟ್ಟರೆ ಕೇವಲ ವಿಜಯಪುರ ಹಾಗೂ ಬೀದರ್ ನಲ್ಲಿ ಮಾತ್ರ ಕಂಡು ಬರುತ್ತದೆ. ಬೀದರ್ ನಲ್ಲಿ ಸುಮಾರು 3 ಕಿಲೋ ಮೀಟರ್ ಮಾತ್ರ ಕಂಡು ಬರುವ ಭೂಮಿಯಾಳದ ಕಾಲುವೆ ವಿಜಯಪುರದಲ್ಲಿ 5 ಕಿಲೋ ಮೀಟರ್ ಗೂ ಆಧಿಕ ಅಂತರವವನ್ನು ಹೊಂದಿವೆ. ಈ ಕಾಲುವೆಗಳಿಗೆ ಅಲ್ಲಲ್ಲಿ ಬೆಳಕು ಬೀಳಲು ಕಸಕಡ್ಡಿಗಳು ಬಿದ್ದರೆ ತೆಗೆಯಲು ಮ್ಯಾನ್ ಹೋಲ್ ಮಾದರಿಯಲ್ಲಿ ಕಿಂಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಇದು ಭೂಮಿಯಾಳದ ಕಾಲುವೆಗಳಿಂದ ನೀರು ಪೂರೈಕೆ ಮಾಡುವ ತಂತ್ರಜ್ಞಾನವಾಗಿತ್ತು.

ಸದ್ಯ ಭೂಮಿಯಾಳದಲ್ಲಿರೋ ಕಾಲುವೆಗಳು ಹೂಳಿನಿಂದ ತುಂಬಿ ಹೋಗಿವೆ. 500 ವರ್ಷಗಳಿಂದ ಉಪಯೋಗ ಮಾಡದೇ ಹಾಳಾಗಿ ಹೋಗಿವೆ. ಇದನ್ನು ದುರಸ್ಥಿ ಮಾಡುವ ಮಾತುಗಳು ಕೇಳಿ ಬಂದವು ಹೊರತು ಯಾವುದೇ ಕೆಲಸ ಕಾಮಗಾರಿ ಆಗಲಿಲ್ಲಾ. ಇಂದಿನ ಆಧುನಿಕ ತಂತ್ರಜ್ಞಾನ ಬಳಸಿ ಪುರಾತನವಾದ ಭೂಮಿಯಾಳದ ಕಾಲುವೆಗಳ ದುರಸ್ಥಿ ಮಾಡಿಸಬೇಕೆಂದು ನಗರದ ಜನರು ಒತ್ತಾಯ ಮಾಡುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:03 am, Thu, 15 February 24

ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ