AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದಲ್ಲಿ ಹಾಲಿನೋಕುಳಿಯ ರಥೋತ್ಸವ, ಊರಿನ ತುಂಬಾ ಹಬ್ಬದ ರಂಗು

ಕೊಪ್ಪಳ: ಶಿಳ್ಳೆ ಕೇಕೆ.. ವಾದ್ಯಗಳ ನಿನಾದ.. ಕಲಾತಂಡಗಳ ಕಲರವ.. ಎಲ್ಲರನ್ನೂ ಸೀಳಿ ರಥ ಮುನ್ನುಗ್ತಿದ್ರೆ ನೋಡೋವ್ರ ಕಣ್ಣು ತಣಿದಿದ್ವು. ಮನಸ್ಸು ತುಂಬಿ ಬಂದಿತ್ತು. ಮೈತುಂಬಾ ಆಧ್ಯಾತ್ಮದ ಸಿಂಚನವಾದಂತಿತ್ತು. ಭಕ್ತಿ ಭಂಡಾರವನ್ನ ಎರಚುತ್ತಾ ಮಂದಿ ಸಾಗ್ತಿದ್ರೆ ಕಣ್ಣಿಗೆ ಹಬ್ಬದಂತಿತ್ತು. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಮುಸಲಾಪೂರ ಗ್ರಾಮದಲ್ಲಿ ನಡೆದ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥೋತ್ಸವಕ್ಕೂ ಮುನ್ನ ಹಾಲೋಕುಳಿ ಆಡಿದ್ರು. ಯಾವದ ಸಮುದಾಯದವ್ರು ತಮ್ಮ ಜಾನುವಾರುಗಳಿಗೆ ಏನೂ ಆಗಬಾರದು ಹಾಗೂ ಗ್ರಾಮದ ಒಳಿತಿಗಾಗಿ ಹಾಲೋಕುಳಿಯಲ್ಲಿ ಮಿಂದೆದ್ರು. ಕಳೆದ 11 […]

ಕೊಪ್ಪಳದಲ್ಲಿ ಹಾಲಿನೋಕುಳಿಯ ರಥೋತ್ಸವ, ಊರಿನ ತುಂಬಾ ಹಬ್ಬದ ರಂಗು
ಸಾಧು ಶ್ರೀನಾಥ್​
|

Updated on:Dec 27, 2019 | 5:21 PM

Share

ಕೊಪ್ಪಳ: ಶಿಳ್ಳೆ ಕೇಕೆ.. ವಾದ್ಯಗಳ ನಿನಾದ.. ಕಲಾತಂಡಗಳ ಕಲರವ.. ಎಲ್ಲರನ್ನೂ ಸೀಳಿ ರಥ ಮುನ್ನುಗ್ತಿದ್ರೆ ನೋಡೋವ್ರ ಕಣ್ಣು ತಣಿದಿದ್ವು. ಮನಸ್ಸು ತುಂಬಿ ಬಂದಿತ್ತು. ಮೈತುಂಬಾ ಆಧ್ಯಾತ್ಮದ ಸಿಂಚನವಾದಂತಿತ್ತು. ಭಕ್ತಿ ಭಂಡಾರವನ್ನ ಎರಚುತ್ತಾ ಮಂದಿ ಸಾಗ್ತಿದ್ರೆ ಕಣ್ಣಿಗೆ ಹಬ್ಬದಂತಿತ್ತು.

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಮುಸಲಾಪೂರ ಗ್ರಾಮದಲ್ಲಿ ನಡೆದ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥೋತ್ಸವಕ್ಕೂ ಮುನ್ನ ಹಾಲೋಕುಳಿ ಆಡಿದ್ರು. ಯಾವದ ಸಮುದಾಯದವ್ರು ತಮ್ಮ ಜಾನುವಾರುಗಳಿಗೆ ಏನೂ ಆಗಬಾರದು ಹಾಗೂ ಗ್ರಾಮದ ಒಳಿತಿಗಾಗಿ ಹಾಲೋಕುಳಿಯಲ್ಲಿ ಮಿಂದೆದ್ರು.

ಕಳೆದ 11 ವರ್ಷಗಳ ಹಿಂದೆ ಮುಸಲಾಪೂರ ಗ್ರಾಮದಲ್ಲಿ ಚನ್ನಬಸವೇಶ್ವರ ಜಾತ್ರೆಗೆ ರಥೋತ್ಸವ ನಿರ್ಮಾಣ ಮಾಡಿದ್ರು. ಇನ್ನು ಚನ್ನಬಸವೇಶಸ್ವರ ರಥೋತ್ಸವದ 11 ದಿನ ಮುಂಚಿನಿಂದಲೇ ಗ್ರಾಮದಲ್ಲಿ ತಮ್ಮ ಜಾನುವಾರು ಹಾಲನ್ನು ಉಪಯೋಗಿಸದೆ ಹಾಲೋಕುಳಿಗೆ ಮೀಸಲಿಡುತ್ತಾರೆ.

ರಥೋತ್ಸವದ ದಿನ ಎಲ್ಲ ಹಾಲನ್ನು ಒಂದೆಡೆ ಸಂಗ್ರಹಿಸಿ ಅದಕ್ಕೆ ಪೂಜೆ ಮಾಡಿ ಬಳಿಕ ರಥೋತ್ಸವದ ಪೂರ್ವದಲ್ಲಿ ಹಾಲೋಕುಳಿ ಆಡುತ್ತಾರೆ. ಕೇವಲ ಮುಸಲಾಪೂರ ಅಲ್ಲದೆ ಕನಕಗಿರಿ, ವೆಂಕಟಾಪೂರ, ಬಂಕಾಪೂರ ಸೇರಿದಂತೆ 10 ಕ್ಕೂ ಹೆಚ್ಚು ಹಳ್ಳಿಗಳ ಯಾದವ ಸಮಾಜದವರು ಪಾಲ್ಗೊಳ್ಳುತ್ತಾರೆ. ಹೀಗೆ ಹಾಲೋಕುಳಿ ಆಡುವುದರಿಂದ ಜಾನುವಾರು ಹಾಗೂ ಗ್ರಾಮಸ್ಥರಿಗೆ ಒಳ್ಳೇದಾಗುತ್ತೆ ಅನ್ನೋದು ನಂಬಿಕೆ.

Published On - 11:40 am, Fri, 27 December 19

ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?