AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಗಾವತಿ ಯುವ ಶಿಲ್ಪಿ ಅಯೋಧ್ಯೆಯಲ್ಲಿ 45 ದಿನ ಮೂರ್ತಿ ಕೆತ್ತನೆ ಕೆಲಸದಲ್ಲಿ ಭಾಗಿ, ಉದ್ಘಾಟನೆ ಬಳಿಕ ಮತ್ತಷ್ಟು ಸೇವೆಗೆ ಸಜ್ಜು

ಶತಕೋಟಿ ಹಿಂದೂಗಳ ಕನಸಿನ ರಾಮ ಮಂದಿರ ಕೆಲವೆ ದಿನಗಳಲ್ಲಿ ಉದ್ಘಾಟನೆ. ವಿಶ್ವವೇ ಈ ಮಂದಿರದತ್ತ ಮುಖ ಮಾಡಿದೆ. ಇಂತಹ ಅದ್ಬುತದಲ್ಲಿ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕ ಪ್ರಶಾಂತ ಅವರು ಗಂಗಾವತಿಯವರು ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ.

ಗಂಗಾವತಿ ಯುವ ಶಿಲ್ಪಿ ಅಯೋಧ್ಯೆಯಲ್ಲಿ 45 ದಿನ ಮೂರ್ತಿ ಕೆತ್ತನೆ ಕೆಲಸದಲ್ಲಿ ಭಾಗಿ, ಉದ್ಘಾಟನೆ ಬಳಿಕ ಮತ್ತಷ್ಟು ಸೇವೆಗೆ ಸಜ್ಜು
ಗಂಗಾವತಿ ಶಿಲ್ಪಿ ಅಯೋಧ್ಯೆಯಲ್ಲಿ 45 ದಿನ ಮೂರ್ತಿ ಕೆತ್ತನೆ ಕೆಲಸದಲ್ಲಿ ಭಾಗಿ
ಸಂಜಯ್ಯಾ ಚಿಕ್ಕಮಠ
| Edited By: |

Updated on: Jan 15, 2024 | 3:32 PM

Share

ಅಯೋಧ್ಯೆಯ ರಾಮನಿಗೂ ರಾಮನ ಬಂಟ ಹನುಮಂತನ ಜನ್ಮಸ್ಥಳವಿರೋ ಕೊಪ್ಪಳ ಜಿಲ್ಲೆಯ ಜನರಿಗೆ ಹತ್ತಿರದ ನಂಟಿದೆ. ಇದೀಗ ದೇಶದ ಬಹುಸಂಖ್ಯಾತ ಜನರು ತಮ್ಮ ಕನಸಿನ ರಾಮ ಮಂದಿರ ಉದ್ಘಾಟನೆಯನ್ನು ಕಣ್ತುಂಬ ನೋಡಲು ಕಾತರಿಂದ ಕಾಯುತ್ತಿದ್ದಾರೆ. ಭವ್ಯ ರಾಮಮಂದಿರ ಕಟ್ಟಡ ಮೂರ್ತಿಗಳ ಕೆತ್ತುವ ಕೆಲಸದಲ್ಲಿ ಕರ್ನಾಟದ ಶಿಲ್ಪಿಗಳು ಕೆಲಸ ಮಾಡಿರೋದು ನಮಗೆಲ್ಲ ಹೆಮ್ಮೆಯ ವಿಷಯ. ಈ ಕೆಲಸದಲ್ಲಿ ಗಂಗಾವತಿ ಶಿಲ್ಪಿಯೊಬ್ಬರು ಕೂಡಾ ಭಾಗಿಯಾಗಿದ್ದಾರೆ.

ಶಿಲ್ಪ ಕೆತ್ತನೆಯಲ್ಲಿ ನಿರತನಾಗಿರೋ ಈ ಶಿಲ್ಪಿಯ ಹೆಸರು ಪ್ರಶಾಂತ್ ಸೋನಾರ್. ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ನಿವಾಸಿಯಾಗಿರೋ ಪ್ರಶಾಂತ್ ಅನೇಕ ಚಂದದ ಶಿಲ್ಪಗಳನ್ನು ಕೆತ್ತುವುದರಲ್ಲಿ ಪ್ರಸಿದ್ದರಾಗಿದ್ದಾರೆ. ಇದೀಗ ಅವರಿಗೆ ಮತ್ತೊಂದು ಹೆಮ್ಮೆಯ ಮತ್ತು ಜೀವನದಲ್ಲಿ ಮರೆಯಲಾರದ ಕ್ಷಣಕ್ಕಾಗಿ ಅವರು ಕೂಡಾ ಕಾಯುತ್ತಿದ್ದಾರೆ.

ಯಾಕಂದ್ರೆ ರಾಮ ಮಂದಿರದ ನಿರ್ಮಾಣ ಕೆಲಸದಲ್ಲಿ ಪ್ರಶಾಂತ್ ಕೂಡಾ ಭಾಗಿಯಾಗಿದ್ದಾರೆ. ಹೌದು ರಾಮ ಮಂದಿರದಲ್ಲಿ 45 ದಿನಗಳ ಕಾಲ ಅನೇಕ ಮೂರ್ತಿ ಕೆತ್ತನೆ ಕೆಲಸ ಮಾಡಿದ್ದಾರೆ. ಹನುಮ ಜನ್ಮ ಸ್ಥಳದಿಂದ ತೆರಳಿ ಪ್ರಭು ಶ್ರೀ ರಾಮ ಮಂದಿರದ ಮೂರ್ತಿ ಕೆತ್ತುವ ಕೆಲಸದಲ್ಲಿ ಗಂಗಾವತಿಯ ಶಿಲ್ಪಿ ಪ್ರಶಾಂತ ಸೋನಾರ್ ಎಂಬು ವವರು ಭಾಗವಹಿಸಿ ಕೆತ್ತನೆ ಕೆಲಸ ಮಾಡಿದ್ದಾರೆ.

ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ಒಟ್ಟು 45 ದಿನಗಳ ಕಾಲ ಮೂರ್ತಿ ಕೆತ್ತನೆ ಕೆಲಸದಲ್ಲಿ ಪ್ರಶಾಂತ ಭಾಗಿಯಾಗಿ ದೀಪಾವಳಿ ಹಬ್ಬಕ್ಕೆ ವಾಪಸ್ ಊರಿಗೆ ಬಂದಿದ್ದಾರೆ. ಭವ್ಯ ರಾಮ ಮಂದಿರ ನಿರ್ಮಾಣದಲ್ಲಿ ತಾವು ಮಾಡಿರುವ ಮೂರ್ತಿ ಕೆತ್ತುವ ಅಳಿಲು ಸೇವೆ ಮಾಡಿರೋದು ತುಂಬಾ ಹೆಮ್ಮೆ ಎನಿಸುತ್ತದೆ ಅಂತಾರೆ ಪ್ರಶಾಂತ ಸೋನಾರ.

Also Read: ಕೃಷ್ಣನೂರು ಉಡುಪಿಯಲ್ಲಿ ರಾಮದೇವರ ಜೀವನ ಚರಿತ್ರೆಯ ವಾಲ್ ಪೇಂಟಿಂಗ್ ಸ್ಪರ್ಧೆ ಆಯೋಜನೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಪ್ರಶಾಂತ ಗೆ ಕರೆ ಬಂದಿತ್ತು. ಖುಷಿಖುಷಿಯಾಗಿ ಈ ಕೆಲಸದಲ್ಲಿ ಭಾಗಿಯಾಗಿ ಪ್ರಶಾಂತ ಕೆಲಸ ಮಾಡಿದ್ದಾರೆ. ದೀಪಾವಳಿ ಹಬ್ಬಕ್ಕೆ ಊರಿಗೆ ಬಂದಿದ್ದಾರೆ. ಸದ್ಯ ಲೋಕಾರ್ಪಣೆ ಯ ಬಳಿಕ ಉಳಿದ ಕೆಲಸ ಮಾಡಲು ಕರೆ ಬರುತ್ತೆ, ಬಂದ ನಂತರ ಬಾಕಿ ಇರುವ ಕೆಲಸ ಮಾಡೋಕೆ ಹೋಗ್ತಿನಿ. ಮಂದಿರ ನಿರ್ಮಾಣ ಕಾರ್ಯ ಮಾಡುವಾಗ, ಹೆಚ್ಚಿನ ಭದ್ರತೆಯಲ್ಲಿಯೆ ಕೆಲಸ ಮಾಡ್ತಿದ್ವಿ, ಒಳಗಡೆ ಯಾರಿಗೂ ಮೊಬೈಲ್ ಗೆ ಅವಕಾಶ ಇರಲಿಲ್ಲ. ಇಂತಹ ಒಂದು ಅದ್ಭುತ ರಾಮ ಮಂದಿರದ ಕೆಲದಲ್ಲಿ ಭಾಗಿಯಾಗಿದ್ದು ಸಂತಸದ ಜೊತೆಗೆ ಹೆಮ್ಮೆ ಆಗ್ತಿದೆ ಎಂದಿದ್ದಾರೆ ಶಿಲ್ಪಿ ಪ್ರಶಾಂತ.

ಶತಕೋಟಿ ಹಿಂದೂಗಳ ಕನಸಿನ ರಾಮ ಮಂದಿರ ಕೆಲವೆ ದಿನಗಳಲ್ಲಿ ಉದ್ಘಾಟನೆ ಯಾಗದಲಿದೆ. ಇಡಿ ವಿಶ್ವವೇ ಈ ಮಂದಿರದತ್ತ ಮುಖ ಮಾಡಲಿದೆ. ಇಂತಹ ಅದ್ಬುತಗಳಲ್ಲಿ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕ ಪ್ರಶಾಂತ ನಮ್ಮ ಗಂಗಾವತಿ ಯವರು ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ