ಕೆಆರ್ ಪೇಟೆಯಲ್ಲಿ ಮಿನಿ ಆಪರೇಶನ್​ ಕಮಲ, ಇಬ್ಬರು ಮುಖಂಡರು ಬಿಜೆಪಿಗೆ

ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಮುಖಂಡರಿಬ್ಬರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜಾತ್ಯತೀತ ಜನತಾದಳ ಪಕ್ಷದ ಮುಖಂಡ ಕಿಕ್ಕೇರಿ ಪ್ರಭಾಕರ್‌ ಮತ್ತು ಕಾಂಗ್ರೆಸ್‌ ಮುಖಂಡ ಶೀಳನೆರೆ ಅಂಬರೀಶ್‌ ಬಿಜೆಪಿ ಸೇರ್ಪಡೆಯಾದವರು. ಕೆಆರ್ ಪೇಟೆಯಲ್ಲಿ ಮಿನಿ ಆಪರೇಶನ್​ ಕಮಲ: ಜೆಡಿಎಸ್ ಮುಖಂಡ ಕಿಕ್ಕೇರಿ ಪ್ರಭಾಕರ್ ಮಂಡ್ಯ ಜಿ ಪಂ ಉಪಾಧ್ಯಕ್ಷರಾಗಿದ್ದರು. ಶೀಳನೆರೆ ಅಂಬರೀಶ್‌, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದವರು. ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಬ್ಬರನ್ನೂ ನಿಗಮ ಮಂಡಳಿಗೆ ಆಯ್ಕೆ ಮಾಡುವುದಾಗಿ ಬಿಜೆಪಿ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕೆಆರ್ ಪೇಟೆಯಲ್ಲಿ ಮಿನಿ ಆಪರೇಶನ್​ ಕಮಲ, ಇಬ್ಬರು ಮುಖಂಡರು ಬಿಜೆಪಿಗೆ

Updated on: Nov 16, 2019 | 6:35 PM

ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಮುಖಂಡರಿಬ್ಬರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜಾತ್ಯತೀತ ಜನತಾದಳ ಪಕ್ಷದ ಮುಖಂಡ ಕಿಕ್ಕೇರಿ ಪ್ರಭಾಕರ್‌ ಮತ್ತು ಕಾಂಗ್ರೆಸ್‌ ಮುಖಂಡ ಶೀಳನೆರೆ ಅಂಬರೀಶ್‌ ಬಿಜೆಪಿ ಸೇರ್ಪಡೆಯಾದವರು.

ಕೆಆರ್ ಪೇಟೆಯಲ್ಲಿ ಮಿನಿ ಆಪರೇಶನ್​ ಕಮಲ:
ಜೆಡಿಎಸ್ ಮುಖಂಡ ಕಿಕ್ಕೇರಿ ಪ್ರಭಾಕರ್ ಮಂಡ್ಯ ಜಿ ಪಂ ಉಪಾಧ್ಯಕ್ಷರಾಗಿದ್ದರು. ಶೀಳನೆರೆ ಅಂಬರೀಶ್‌, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದವರು. ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಬ್ಬರನ್ನೂ ನಿಗಮ ಮಂಡಳಿಗೆ ಆಯ್ಕೆ ಮಾಡುವುದಾಗಿ ಬಿಜೆಪಿ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Published On - 6:20 pm, Sat, 16 November 19