ಕಣದಿಂದ ಹಿಂದೆಸರಿಯದಿದ್ರೆ ಕ್ರಮ, ಶರತ್ ಬಚ್ಚೇಗೌಡಗೆ ಅಶೋಕ್ ವಾರ್ನಿಂಗ್
ಬೆಂಗಳೂರು: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಳಿದಿರುವ ಶರತ್ ಬಚ್ಚೇಗೌಡಗೆ ನಾಮಪತ್ರ ವಾಪಸ್ ಪಡೆಯೋವರೆಗೂ ಗಡುವು ನೀಡುವುತ್ತೇನೆ. ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯದ ಬಳಿಕ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ. ಸೋಮವಾರ ಹೊಸಕೋಟೆ ಕ್ಷೇತ್ರಕ್ಕೆ ಭೇಟಿ ನೀಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಶರತ್ ಬಚ್ಚೇಗೌಡರನ್ನ ಕರೆದು 4 ಬಾರಿ ಮಾತಾಡಿದ್ದೇನೆ. ಸಿಎಂ ಯಡಿಯೂರಪ್ಪನವರೂ ಶರತ್ ಬಚ್ಚೇಗೌಡ ಜತೆ ಮಾತನಾಡಿದ್ದಾರೆ. ಇನ್ನು, ಪಕ್ಷದ ಸಂಸದ ಬಿ.ಎನ್.ಬಚ್ಚೇಗೌಡ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸಚಿವ […]

ಬೆಂಗಳೂರು: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಳಿದಿರುವ ಶರತ್ ಬಚ್ಚೇಗೌಡಗೆ ನಾಮಪತ್ರ ವಾಪಸ್ ಪಡೆಯೋವರೆಗೂ ಗಡುವು ನೀಡುವುತ್ತೇನೆ. ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯದ ಬಳಿಕ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ. ಸೋಮವಾರ ಹೊಸಕೋಟೆ ಕ್ಷೇತ್ರಕ್ಕೆ ಭೇಟಿ ನೀಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಶರತ್ ಬಚ್ಚೇಗೌಡರನ್ನ ಕರೆದು 4 ಬಾರಿ ಮಾತಾಡಿದ್ದೇನೆ. ಸಿಎಂ ಯಡಿಯೂರಪ್ಪನವರೂ ಶರತ್ ಬಚ್ಚೇಗೌಡ ಜತೆ ಮಾತನಾಡಿದ್ದಾರೆ. ಇನ್ನು, ಪಕ್ಷದ ಸಂಸದ ಬಿ.ಎನ್.ಬಚ್ಚೇಗೌಡ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸಚಿವ ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ಹೊಸಕೋಟೆ ಬಿಟ್ಟರೆ ನಮಗೆ ಬೇರೆ ಎಲ್ಲೂ ತೊಂದರೆ ಇಲ್ಲ. ಯಶವಂತಪುರ, ಕೆ.ಆರ್. ಪುರಂನಲ್ಲಿ ಹೆಚ್ಚು ಅಂತರದ ಗೆಲುವು ಸಾಧಿಸುತ್ತೇವೆ. 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.