ಮುಳ್ಳನ್ನ ಮುಳ್ಳಿನಿಂದ ತೆಗೆಯುವ ಕೆಲಸ ಮಾಡ್ತಿದ್ದೇವೆ: ಸಚಿವ ಸಿ.ಟಿ.ರವಿ
ಕಲಬುರಗಿ: ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್ ಪಕ್ಷವನ್ನು ಇಬ್ಭಾಗ ಮಾಡಿ, ಜಮೀರ್ ಅಹ್ಮದ್ ಸೇರಿ ಹಲವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡರು. ಆಗ ಸಿದ್ದರಾಮಯ್ಯ ನೈತಿಕತೆ ರಾಜಕಾರಣ ಮಾಡಿದರಾ? ಅದಕ್ಕೆ ನಾವೀಗ ಮುಳ್ಳನ್ನ ಮುಳ್ಳಿನಿಂದ ತೆಗೆಯುವ ಕೆಲಸ ಮಾಡ್ತಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಅನರ್ಹ ಶಾಸಕರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಅನರ್ಹರಿಗೆ ಟಿಕೆಟ್ ನೀಡೋದು, ಗೆಲ್ಲಿಸುವುದು ನಮ್ಮ ಕರ್ತವ್ಯ. ಈ ಹಿಂದೆ ನಿಷ್ಠಾವಂತರಿಗೆ ಟಿಕೆಟ್ ನೀಡಲಾಗಿತ್ತು. ಅವರು ಗೆಲ್ಲದಿದ್ದಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿರಲಿಲ್ಲ […]

ಕಲಬುರಗಿ: ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್ ಪಕ್ಷವನ್ನು ಇಬ್ಭಾಗ ಮಾಡಿ, ಜಮೀರ್ ಅಹ್ಮದ್ ಸೇರಿ ಹಲವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡರು. ಆಗ ಸಿದ್ದರಾಮಯ್ಯ ನೈತಿಕತೆ ರಾಜಕಾರಣ ಮಾಡಿದರಾ? ಅದಕ್ಕೆ ನಾವೀಗ ಮುಳ್ಳನ್ನ ಮುಳ್ಳಿನಿಂದ ತೆಗೆಯುವ ಕೆಲಸ ಮಾಡ್ತಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಅನರ್ಹ ಶಾಸಕರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಅನರ್ಹರಿಗೆ ಟಿಕೆಟ್ ನೀಡೋದು, ಗೆಲ್ಲಿಸುವುದು ನಮ್ಮ ಕರ್ತವ್ಯ. ಈ ಹಿಂದೆ ನಿಷ್ಠಾವಂತರಿಗೆ ಟಿಕೆಟ್ ನೀಡಲಾಗಿತ್ತು. ಅವರು ಗೆಲ್ಲದಿದ್ದಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿರಲಿಲ್ಲ ಎಂದು ಸಚಿವ ರವಿ ತಿಳಿಸಿದರು.