AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಳ್ಳನ್ನ ಮುಳ್ಳಿನಿಂದ ತೆಗೆಯುವ ಕೆಲಸ ಮಾಡ್ತಿದ್ದೇವೆ: ಸಚಿವ ಸಿ.ಟಿ.ರವಿ

ಕಲಬುರಗಿ: ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್​ ಪಕ್ಷವನ್ನು ಇಬ್ಭಾಗ ಮಾಡಿ, ಜಮೀರ್​ ಅಹ್ಮದ್​ ಸೇರಿ ಹಲವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡರು. ಆಗ ಸಿದ್ದರಾಮಯ್ಯ ನೈತಿಕತೆ ರಾಜಕಾರಣ ಮಾಡಿದರಾ? ಅದಕ್ಕೆ ನಾವೀಗ ಮುಳ್ಳನ್ನ ಮುಳ್ಳಿನಿಂದ ತೆಗೆಯುವ ಕೆಲಸ ಮಾಡ್ತಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಅನರ್ಹ ಶಾಸಕರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಅನರ್ಹರಿಗೆ ಟಿಕೆಟ್​ ನೀಡೋದು, ಗೆಲ್ಲಿಸುವುದು ನಮ್ಮ ಕರ್ತವ್ಯ. ಈ ಹಿಂದೆ ನಿಷ್ಠಾವಂತರಿಗೆ ಟಿಕೆಟ್​​ ನೀಡಲಾಗಿತ್ತು. ಅವರು ಗೆಲ್ಲದಿದ್ದಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿರಲಿಲ್ಲ […]

ಮುಳ್ಳನ್ನ ಮುಳ್ಳಿನಿಂದ ತೆಗೆಯುವ ಕೆಲಸ ಮಾಡ್ತಿದ್ದೇವೆ: ಸಚಿವ ಸಿ.ಟಿ.ರವಿ
ಸಾಧು ಶ್ರೀನಾಥ್​
|

Updated on: Nov 16, 2019 | 6:33 PM

Share

ಕಲಬುರಗಿ: ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್​ ಪಕ್ಷವನ್ನು ಇಬ್ಭಾಗ ಮಾಡಿ, ಜಮೀರ್​ ಅಹ್ಮದ್​ ಸೇರಿ ಹಲವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡರು. ಆಗ ಸಿದ್ದರಾಮಯ್ಯ ನೈತಿಕತೆ ರಾಜಕಾರಣ ಮಾಡಿದರಾ? ಅದಕ್ಕೆ ನಾವೀಗ ಮುಳ್ಳನ್ನ ಮುಳ್ಳಿನಿಂದ ತೆಗೆಯುವ ಕೆಲಸ ಮಾಡ್ತಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಅನರ್ಹ ಶಾಸಕರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಅನರ್ಹರಿಗೆ ಟಿಕೆಟ್​ ನೀಡೋದು, ಗೆಲ್ಲಿಸುವುದು ನಮ್ಮ ಕರ್ತವ್ಯ. ಈ ಹಿಂದೆ ನಿಷ್ಠಾವಂತರಿಗೆ ಟಿಕೆಟ್​​ ನೀಡಲಾಗಿತ್ತು. ಅವರು ಗೆಲ್ಲದಿದ್ದಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿರಲಿಲ್ಲ ಎಂದು ಸಚಿವ ರವಿ ತಿಳಿಸಿದರು.