ಕಟ್ಟಡದ ಮೇಲೆ ಗಾರೆ ಕೆಲಸ ಮಾಡುವಾಗ.. ವಿದ್ಯುತ್​ ತಂತಿ ತಗುಲಿ ವಿಜಯಪುರದ ಕಾರ್ಮಿಕ ಸಾವು

|

Updated on: Jan 29, 2021 | 6:28 PM

ವಿದ್ಯುತ್​ ತಂತಿ ತಗುಲಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಗರದ ಹೊನ್ನಸಂದ್ರದಲ್ಲಿ ನಡೆದಿದೆ. ಕಟ್ಟಡದ ಮೇಲೆ ಕೆಲಸ ಮಾಡುವಾಗ ದುರ್ಘಟನೆ ಸಂಭವಿಸಿದೆ.

ಕಟ್ಟಡದ ಮೇಲೆ ಗಾರೆ ಕೆಲಸ ಮಾಡುವಾಗ.. ವಿದ್ಯುತ್​ ತಂತಿ ತಗುಲಿ ವಿಜಯಪುರದ ಕಾರ್ಮಿಕ ಸಾವು
ವಿದ್ಯುತ್​ ತಂತಿ ತಗುಲಿ ಕೂಲಿ ಕಾರ್ಮಿಕ ಸಾವು
Follow us on

ಬೆಂಗಳೂರು: ವಿದ್ಯುತ್​ ತಂತಿ ತಗುಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಗರದ ಹೊನ್ನಸಂದ್ರದಲ್ಲಿ ನಡೆದಿದೆ. ಕಟ್ಟಡದ ಮೇಲೆ ಕೆಲಸ ಮಾಡುವಾಗ ದುರ್ಘಟನೆ ಸಂಭವಿಸಿದೆ.

ವಿಜಯಪುರ ಮೂಲದ ದೇವಲಾ(20) ಮೃತ ಕೂಲಿ ಕಾರ್ಮಿಕ. ಸಿದ್ಧಲಿಂಗೇಶ್ವರ ಸ್ವಾಮಿ ಎಂಬುವವರಿಗೆ ಸೇರಿದ ಜಾಗದಲ್ಲಿ ಕರೆಂಟ್​ ಲೈನ್ ಕೆಳಗಡೆ ಕಟ್ಟಡ ನಿರ್ಮಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಇದೀಗ, ವಿದ್ಯುತ್ ತಂತಿಯ ಕೆಳಗಡೆ ಅಕ್ರಮವಾಗಿ ಕೆಲಸ ನಡೀತಿದ್ರೂ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜೊತೆಗೆ, ಬೆಸ್ಕಾಂ ಸಿಬ್ಬಂದಿ ವಿರುದ್ಧ ಸ್ಥಳೀಯ ನಿವಾಸಿಗಳ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಫುಟ್​ಪಾತ್​ ಟ್ರಾನ್ಸ್​ಫಾರ್ಮರ್​ಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ -BESCOM

Published On - 6:17 pm, Fri, 29 January 21