ಆಶ್ಲೇಷ ಪೂಜೆಗಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಿದುಬಂತು ಭಕ್ತಸಾಗರ: ಟಿಕೆಟ್ ಪಡೆಯಲು ಜನರ ಪರದಾಟ

|

Updated on: Dec 06, 2020 | 11:05 AM

ದೇಗುಲದ ಆಡಳಿತ ಮಂಡಳಿ ಆನ್‌ಲೈನ್‌ನಲ್ಲಿ ಟಿಕೆಟ್​ ಬುಕ್ಕಿಂಗ್ ವ್ಯವಸ್ಥೆ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಪೂಜೆಯ ಟಿಕೆಟ್​ ಪಡೆಯಲು ನೂರಾರು ಭಕ್ತರು ಮಧ್ಯರಾತ್ರಿ 12 ಗಂಟೆಯಿಂದಲೇ ಸರತಿಸಾಲಿನಲ್ಲಿ ನಿಲ್ಲಬೇಕಾಯ್ತು ಎಂದು ತಿಳಿದುಬಂದಿದೆ.

ಆಶ್ಲೇಷ ಪೂಜೆಗಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಿದುಬಂತು ಭಕ್ತಸಾಗರ: ಟಿಕೆಟ್ ಪಡೆಯಲು ಜನರ ಪರದಾಟ
ಟಿಕೆಟ್​ಗಾಗಿ.. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎದುರು ಕಂಡುಬಂದ ಸರತಿಸಾಲು
Follow us on

ದಕ್ಷಿಣ ಕನ್ನಡ: ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಪೂಜೆ ನೆರವೇರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹಾಗಾಗಿ, ದೇವಸ್ಥಾನದ ಸುತ್ತಮುತ್ತ ಜನಜಂಗುಳಿ ಕಾಣಿಸಿತು.

ಈ ನಡುವೆ, ಪೂಜೆಗಾಗಿ ಟಿಕೆಟ್ ಪಡೆಯಲು ದೇಗುಲದ ಆಡಳಿತ ಮಂಡಳಿ ಸೂಚನೆ ನೀಡಿತ್ತು. ಹೀಗಾಗಿ, ಟಿಕೆಟ್ ಕೌಂಟರ್ ಎದುರು ಮಾರುದ್ದ ಕ್ಯೂ ಕಂಡುಬಂತು. ಈ ಸರತಿಸಾಲು, ಆಂಜನೇಯನ ಬಾಲದಂತೆ ನಿಧಾನವಾಗಿ ಬೆಳೆದು ದೇವಸ್ಥಾನದ ಮುಂದಿರುವ ರಥ ಬೀದಿಗೆ ಬಂದು ನಿಂತಿತ್ತು. ನೂರಾರು ಭಕ್ತರು ಸರತಿಸಾಲಿನಲ್ಲಿ ನಿಂತಿರುವುದು ಕಂಡುಬಂತು.

ದೇಗುಲದ ಆಡಳಿತ ಮಂಡಳಿ ಆನ್‌ಲೈನ್‌ನಲ್ಲಿ ಟಿಕೆಟ್​ ಬುಕ್ಕಿಂಗ್ ವ್ಯವಸ್ಥೆ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಪೂಜೆಯ ಟಿಕೆಟ್​ ಪಡೆಯಲು ನೂರಾರು ಭಕ್ತರು ಮಧ್ಯರಾತ್ರಿ 12 ಗಂಟೆಯಿಂದಲೇ ಸರತಿಸಾಲಿನಲ್ಲಿ ನಿಲ್ಲಬೇಕಾಯ್ತು ಎಂದು ತಿಳಿದುಬಂದಿದೆ. ಆನ್​ಲೈನ್​ ಬುಕ್ಕಿಂಗ್ ವ್ಯವಸ್ಥೆಯನ್ನು ರದ್ದುಪಡಿಸಿ ಕ್ಯೂನಲ್ಲಿ ಟಿಕೆಟ್​ಗಾಗಿ ಪರದಾಡುವ ಪರಿಸ್ಥಿತಿ ಉಂಟುಮಾಡಿದ ಆಡಳಿತ ಮಂಡಳಿ ವಿರುದ್ಧ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.