AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲೂ ಸಲ್ಲದ ಹತ್ತು ರೂಪಾಯಿ ನಾಣ್ಯ ಅರ್ಚಕರ ತಟ್ಟೆಗೆ ಬಿತ್ತು: ಮಂಡ್ಯದ ದೇವಸ್ಥಾನದಲ್ಲಿ ಪೇಚಿಗೆ ಸಿಲುಕಿದ ಅರ್ಚಕರು

ದೇವಾಲಯದ ಅರ್ಚಕರ ಬಳಿಯಲ್ಲಿ ಈಗ 5 ಸಾವಿರಕ್ಕೂ ಹೆಚ್ಚಿನ ಹತ್ತು ರೂಪಾಯಿಯ ನಾಣ್ಯಗಳು ಸಂಗ್ರಹವಾಗಿವೆ. ಹೀಗೆ ಸಂಗ್ರಹವಾಗಿರುವ ನಾಣ್ಯಗಳನ್ನ ಬ್ಯಾಂಕ್​ನವರಿಗೆ ಕೊಡಲು ಹೋದರೆ ನಮ್ಮಲ್ಲೇ ಸಾಕಷ್ಟು ಸಂಗ್ರಹ ಇದೆ. ನಮಗೆ ಬೇಡ ಎಂಬಂತಹ ಉತ್ತರ ಬರುತ್ತಿದೆ.

ಎಲ್ಲೂ ಸಲ್ಲದ ಹತ್ತು ರೂಪಾಯಿ ನಾಣ್ಯ ಅರ್ಚಕರ ತಟ್ಟೆಗೆ ಬಿತ್ತು: ಮಂಡ್ಯದ ದೇವಸ್ಥಾನದಲ್ಲಿ ಪೇಚಿಗೆ ಸಿಲುಕಿದ ಅರ್ಚಕರು
10 ರೂಪಾಯಿ ನಾಣ್ಯಗಳು
preethi shettigar
| Edited By: |

Updated on:Mar 12, 2021 | 2:47 PM

Share

ಮಂಡ್ಯ: ದೇಶದಲ್ಲಿ ಹತ್ತು ರೂಪಾಯಿ ನಾಣ್ಯ ಚಲಾವಣೆಯಲ್ಲಿದ್ದರೂ ಕಳೆದ ಹಲವು ದಿನಗಳಿಂದ ಹತ್ತು ರೂಪಾಯಿ ನಾಣ್ಯ ಚಲಾವಣೆಯ ಬಗೆಗೆ ಜನರು ನಿರಾಸಕ್ತಿ ತೋರಿಸುತ್ತಿದ್ದಾರೆ. ನಾಣ್ಯಗಳನ್ನ ಕಂಡರೆ ಸಾಕು ಇದು ಬೇಡ ಬೇರೆ ಕೊಡಿ ಎಂಬುವವರೇ ಹೆಚ್ಚು. ಈ ಪರಿಸ್ಥಿತಿ ಮುಂದುವರೆದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನ ಕೆರೆ ಗ್ರಾಮ ದೇವತೆಯ ದೇವಾಲಯ ಒಂದರಲ್ಲಿ ಹತ್ತು ರೂಪಾಯಿ ನಾಣ್ಯ ಕಂಡರೆ ಸಾಕು ಅಲ್ಲಿನ ಅರ್ಚಕರು ಬೆಚ್ಚಿ ಬೀಳಲಾರಂಭಿಸಿದ್ದಾರೆ.

ದೇಶದಲ್ಲಿ ಹತ್ತು ರೂಪಾಯಿ ನಾಣ್ಯದ ಚಲಾವಣೆಯ ಬಗೆಗೆ ಆಗಾಗ ಗೊಂದಲದ ಪರಿಸ್ಥಿತಿಗಳು ನಿರ್ಮಾಣವಾಗುತ್ತಲೇ ಇವೆ. ಈ ಸಂಬಂಧ ಕೇಂದ್ರ ಸರ್ಕಾರ ಹತ್ತು ರೂಪಾಯಿ ನಾಣ್ಯಗಳ ಚಲಾವಣೆಯನ್ನ ಅಧಿಕೃತವಾಗಿ ನಿಷೇಧಿಸಿಲ್ಲವಾದರೂ ಜನರು ಮಾತ್ರ ನಾಣ್ಯಗಳನ್ನ ಚಲಾವಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡರಸಿನ ಕೆರೆ ಗ್ರಾಮದಲ್ಲಿನ ಏಳೂರಮ್ಮ ದೇವಾಲಯದಲ್ಲೂ ಇಂತಹ ಸಮಸ್ಯೆ ಎದುರಾಗಿದ್ದು, ಜನ ಇತ್ತೀಚಿನ ದಿನಗಳಲ್ಲಿ ದೇವಾಲಯಕ್ಕೆ ಬಂದು ಮಂಗಳಾರತಿಗೆ ಹಣ ಹಾಕುವಾಗ ಹತ್ತು ರೂಪಾಯಿ ನಾಣ್ಯಗಳನ್ನ ಮಾತ್ರ ಹಾಕುತ್ತಿದ್ದಾರಂತೆ.

ಇದರಿಂದಾಗಿ ದೇವಾಲಯದ ಅರ್ಚಕರ ಬಳಿಯಲ್ಲಿ ಈಗ 5 ಸಾವಿರಕ್ಕೂ ಹೆಚ್ಚಿನ ಪ್ರಮಾಣದ ಹತ್ತು ರೂಪಾಯಿ ನಾಣ್ಯಗಳು ಸಂಗ್ರಹವಾಗಿವೆ. ಹೀಗೆ ಸಂಗ್ರಹವಾಗಿರುವ ನಾಣ್ಯಗಳನ್ನ ಬ್ಯಾಂಕ್​ನವರಿಗೆ ಕೊಡಲು ಹೋದರೆ ನಮ್ಮಲ್ಲೇ ಸಾಕಷ್ಟು ಸಂಗ್ರಹ ಇದೆ. ನಮಗೆ ಬೇಡ ಎಂಬಂತಹ ಉತ್ತರ ಬರುತ್ತಿದೆ. ಈ ಸಂಬಂಧ ಸರ್ಕಾರ ಏನಾದರೂ ನಿರ್ಧಾರ ಕೈಗೊಳ್ಳಬೇಕು ಎಂದು ಏಳೂರಮ್ಮ ದೇವಾಲಯದ ಅರ್ಚಕರಾದ ಪ್ರಸನ್ನ ಕುಮಾರ್ ಹೇಳಿದ್ದಾರೆ.

10 rupee problem

ಅರ್ಚಕರಾದ ಪ್ರಸನ್ನ ಕುಮಾರ್

10 rupee problem

ದೊಡ್ಡರಸಿನ ಕೆರೆ ಗ್ರಾಮದಲ್ಲಿನ ಏಳೂರಮ್ಮ ದೇವಾಲಯ

ದೊಡ್ಡರಸಿನ ಕೆರೆ ಗ್ರಾಮದಲ್ಲಿರುವ ಏಳೂರಮ್ಮನ ದೇವಾಲಯ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ದೊಡ್ಡರಸಿನ ಕೆರೆ ಗ್ರಾಮ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹೀಗೆ ಬರುವ ಭಕ್ತರು ಇತ್ತೀಚಿನ ದಿನಗಳಲ್ಲಿ ಮಂಗಳಾರತಿಗೆ ಹಣ ಹಾಕುವ ಸಂದರ್ಭದಲ್ಲಿ 10 ರೂಪಾಯಿ ನಾಣ್ಯವನ್ನೇ ಹಾಕಲಾರಂಭಿಸಿದ್ದಾರೆ. ಇದು ಅರ್ಚಕರಿಗೆ ಕಿರಿಕಿರಿ ಉಂಟು ಮಾಡಿದ್ದರೂ ಭಕ್ತರಿಗೆ ಹತ್ತು ರೂಪಾಯಿ ನಾಣ್ಯವನ್ನ ಹಾಕಬೇಡಿ ಎಂದು ಹೇಳಲಾಗುತ್ತಿಲ್ಲ.

10 rupee problem

ದೊಡ್ಡರಸಿನ ಕೆರೆ ಗ್ರಾಮದ ದೇವಾಲಯದ ಚಿತ್ರಣ

ಇತ್ತೀಚಿನ ದಿನಗಳಲ್ಲಿ ಜನ ಹತ್ತು ರೂಪಾಯಿ ನಾಣ್ಯವನ್ನ ಕೊಡುತ್ತಾರೆ. ನಾಣ್ಯಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಏನೂ ಮಾಡಲಾಗದಂತಹ ಸ್ಥಿತಿಯಲ್ಲಿದ್ದಾರೆ. ನಾವು ಕೊಡಲು ಹೋದರೆ ಬೇಡ ಎನ್ನುತ್ತಾರೆ. ಇದು ಇವರೊಬ್ಬರ ಸಮಸ್ಯೆ ಅಲ್ಲ ಎಲ್ಲರ ಸಮಸ್ಯೆಯಾಗಿದೆ ಎಂದು ಬೆಂಗಳೂರಿನಿಂದ ಬಂದಿದ್ದ ಭಕ್ತರಾದ ಜಯರಾಮು ಹೇಳಿದ್ದಾರೆ.

10 rupee problem

ಮಂಗಳಾರತಿ ತಟ್ಟೆಯಲ್ಲಿ 10 ರೂಪಾಯಿ ನಾಣ್ಯಗಳು

ಒಟ್ಟಾರೆ ಹತ್ತು ರೂಪಾಯಿ ನಾಣ್ಯಗಳ ಚಲಾವಣೆಯ ಬಗೆಗೆ ಜನರಲ್ಲಿರುವ ಆತಂಕವೋ ಅಥವಾ ತಪ್ಪು ತಿಳುವಳಿಕೆಯೋ ಆದರೆ ತಮ್ಮಲ್ಲಿರುವ ನಾಣ್ಯಗಳನ್ನ ಬೇರೆಡೆಗೆ ವರ್ಗಾಯಿಸಲು ಮುಂದಾಗುತ್ತಿದ್ದಾರೆಯೇ ಹೊರತು ತಾವು ಮಾತ್ರ ನಾಣ್ಯಗಳನ್ನ ಪಡೆದುಕೊಳ್ಳಲು ಮುಂದೆಬರುತ್ತಿಲ್ಲ ಎನ್ನುವುದು ಸದ್ಯದ ನಿಜಾಂಶವಾಗಿದೆ.

ಇದನ್ನೂ ಓದಿ: ಕೇವಲ 10 ರೂಪಾಯಿಯಲ್ಲಿ ಬಡವರಿಗೆ ಚಿಕಿತ್ಸೆ ನೀಡುವ ಡಾಕ್ಟರ್ ನೂರಿ ಪರ್ವೀನಾ

Published On - 1:00 pm, Fri, 12 March 21

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?