AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಲುಕೋಟೆ ವೈರಮುಡಿ ಉತ್ಸವ: ಚೆಲುವನಾರಾಯಣನಿಗೆ ತೆಪ್ಪೋತ್ಸವ, ಮೊದಲ ಬಾರಿಗೆ ಗಂಗಾರತಿ ಸೇವೆ

ಇದೇ ಮೊದಲ ಬಾರಿಗೆ ಚೆಲುವನಾರಾಯಣನಿಗೆ ಗಂಗಾರತಿ ಮಾಡಲಾಗಿದೆ. ಪುರಾಣ ಪ್ರಸಿದ್ಧ ಪಂಚ ಕಲ್ಯಾಣಿಯಲ್ಲಿ ನಡೆದ ತೆಪ್ಪೋತ್ಸವ ಜೊತೆಗೆ ಮೇಲುಕೋಟೆಯಲ್ಲಿ ಮೊದಲ ಬಾರಿಗೆ ಗಂಗಾ ಪೂಜೆ ನಡೆದಿದೆ. ತೆಪ್ಪೋತ್ಸವ, ಗಂಗಾರತಿಯನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ.

ಮೇಲುಕೋಟೆ ವೈರಮುಡಿ ಉತ್ಸವ: ಚೆಲುವನಾರಾಯಣನಿಗೆ ತೆಪ್ಪೋತ್ಸವ, ಮೊದಲ ಬಾರಿಗೆ ಗಂಗಾರತಿ ಸೇವೆ
TV9 Web
| Updated By: ganapathi bhat|

Updated on:Mar 19, 2022 | 11:02 AM

Share

ಮಂಡ್ಯ: ಮೇಲುಕೋಟೆಯಲ್ಲಿ ವೈರಮುಡಿ ಉತ್ಸವದ ಸಂಭ್ರಮ ಭಕ್ತರ ಮನತಣಿಸಿದೆ. ತೆಪ್ಪೋತ್ಸವ ಮೇಲುಕೋಟೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ರಾಜಮುಡಿ ಕಿರೀಟ ತೊಟ್ಟ ಚೆಲುವನಿಗೆ ತೆಪ್ಪೋತ್ಸವ ಸೇವೆ ಮಾಡಲಾಗಿದೆ. ಗಂಗಾರತಿಯೊಂದಿಗೆ ಚೆಲುವನಾರಾಯಣನ ತೆಪ್ಪೋತ್ಸವ ನಡೆದಿದ್ದು, ಇದೇ ಮೊದಲ ಬಾರಿಗೆ ಚೆಲುವನಾರಾಯಣನಿಗೆ ಗಂಗಾರತಿ ಮಾಡಲಾಗಿದೆ. ಪುರಾಣ ಪ್ರಸಿದ್ಧ ಪಂಚ ಕಲ್ಯಾಣಿಯಲ್ಲಿ ನಡೆದ ತೆಪ್ಪೋತ್ಸವ ಜೊತೆಗೆ ಮೇಲುಕೋಟೆಯಲ್ಲಿ ಮೊದಲ ಬಾರಿಗೆ ಗಂಗಾ ಪೂಜೆ ನಡೆದಿದೆ. ತೆಪ್ಪೋತ್ಸವ, ಗಂಗಾರತಿಯನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ.

ತೆಪ್ಪೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ತುಂಬಿದೆ. ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೂಲಕ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಪೈಕಿ ಲೇಸರ್ ಲೈಟ್ ಶೋ ಜನರನ್ನು ಆಕರ್ಷಿಸಿದೆ. ಲೇಸರ್ ಶೋ ಮೂಲಕ ಮೇಲುಕೋಟೆ ಇತಿಹಾಸ, ನಾಡಿನ ಸಂಸ್ಕೃತಿ ಅನಾವರಣ ಮಾಡಲಾಗಿದೆ. ವಿಶೇಷ ದೀಪಾಲಂಕಾರದ ಮೂಲಕ ಕಂಗೊಳಿಸುತ್ತಿದ್ದ ಕಲ್ಯಾಣಿ ಜನರ ಮನಸೂರೆಗೊಂಡಿದೆ.

ಮೈಸೂರು: ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯ ಕಲ್ಯಾಣೋತ್ಸವ

ಮೈಸೂರು ಜಿಲ್ಲೆ‌ ಟಿ ನರಸೀಪುರದ ದೇಗುಲ ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯ ಕಲ್ಯಾಣೋತ್ಸವ ನಡೆದಿದೆ. ಇಂದು (ಮಾರ್ಚ್ 19) ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಹಿನ್ನೆಲೆ, ಕಳೆದ 10 ದಿನಗಳಿಂದ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಬ್ರಹ್ಮರಥೋತ್ಸವ ತೆರಳುವ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಗಿದೆ. ಶ್ರೀ ಮಹಾಲಕ್ಷ್ಮಿ ಸಹಿತ ಗುಂಜಾನರಸಿಂಹಸ್ವಾಮಿ ಕಲ್ಯಾಣೋತ್ಸವವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಇಂದು 12.30ಕ್ಕೆ ಗುಂಜಾನರಸಿಂಹಸ್ವಾಮಿ ಬ್ರಹ್ಮರಥೋತ್ಸವ ನೆರವೇರಲಿದೆ.

ತುಮಕೂರು: ಜಾತ್ರೆಯಲ್ಲಿ ತಮಟೆ ಬಾರಿಸುವ ಮೂಲಕ ಸಂಭ್ರಮಿಸಿದ ಎಸಿ

ಇತ್ತ, ತುಮಕೂರು ಜಿಲ್ಲೆ ಮಧುಗಿರಿ ಉಪವಿಭಾಗದ ಅಧಿಕಾರಿ ಸೋಮಪ್ಪ ಕಡಕೋಳ ಜಾತ್ರೆಯಲ್ಲಿ ತಮಟೆ ಬಾರಿಸುವ ಮೂಲಕ ಸಂಭ್ರಮಿಸಿದ್ದಾರೆ. ಅಧಿಕಾರಿ ಒಬ್ಬರು ತಮಟೆ ಬಾರಿಸಿ ಜನರೊಂದಿಗೆ ಎಂಜಾಯ್ ಮಾಡಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದಲ್ಲಿ ಘಟನೆ ನಡೆದಿದೆ. ಇತಿಹಾಸ ಪ್ರಸಿದ್ಧ ದಂಡಿಮಾರಮ್ಮನ ಜಾತ್ರೆಗೆ ಚಾಲನೆ ನೀಡಿದ ಬಳಿಕ ಎಸಿ ತಮಟೆ ಬಾರಿಸಿದ್ದಾರೆ. ಜನರೊಂದಿಗೆ ಬೆರೆತು ಜಾತ್ರೆಯನ್ನು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಮೇಲುಕೋಟೆಯಲ್ಲಿ ಇಂದು ವೈರಮುಡಿ ಉತ್ಸವಕ್ಕೆ ಸರ್ವ ಸಿದ್ಧತೆ: ಸ್ಥಾನಿಕರಿಂದ ಆಭರಣ ವಾಹನಕ್ಕೆ ಅಡ್ಡಿ, ಭಕ್ತರಲ್ಲಿ ಬೇಸರ

ಇದನ್ನೂ ಓದಿ: ಕೊರೊನಾದಿಂದ ನಿಂತುಹೋಗಿದ್ದ ಮೇಲುಕೋಟೆ ವೈರಮುಡಿ ಉತ್ಸವ ಈ ಬಾರಿ ಅದ್ದೂರಿ! ಇಲ್ಲಿನ ಪುರಾಣ ಇತಿಹಾಸ ಏನು?

Published On - 8:23 am, Sat, 19 March 22