Mandya News: ಸ್ನೇಹಿತರ ದಿನದಂದೇ ಮಂಡ್ಯದಲ್ಲಿ ಚಾಕುವಿನಿಂದ ಇರಿದು ಗೆಳೆಯನ ಭೀಕರ ಕೊಲೆ

| Updated By: ರಮೇಶ್ ಬಿ. ಜವಳಗೇರಾ

Updated on: Aug 07, 2023 | 7:25 AM

ನಿನ್ನೆ ಅಂದರೆ ಆಗಸ್ಟ್ 07ರಂದು ಸ್ನೇಹಿತರ ದಿನಾಚರಣೆ ಸಂಭ್ರಮದಲ್ಲಿದ್ದರೆ, ಇತ್ತ ಮಂಡ್ಯದಲ್ಲಿ ತನ್ನ ಗೆಳೆಯನನ್ನೇ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

Mandya News: ಸ್ನೇಹಿತರ ದಿನದಂದೇ ಮಂಡ್ಯದಲ್ಲಿ ಚಾಕುವಿನಿಂದ ಇರಿದು ಗೆಳೆಯನ ಭೀಕರ ಕೊಲೆ
ಚಾಕುವಿನಿಂದ ಇರಿದು ಕೊಲೆ
Follow us on

ಮಂಡ್ಯ, (ಆಗಸ್ಟ್ 07): ನಿನ್ನೆ (ಆಗಸ್ಟ್ 06) ಸ್ನೇಹಿತರ ದಿನಾಚರಣೆಯನ್ನು(Friendship Day) ಆಚರಿಸಲಾಯ್ತು. ಸ್ನೇಹಿತರ (Friends) ದಿನವು ಸ್ನೇಹಿತರ ನಡುವಿನ ಪ್ರೀತಿಯ ಬಂಧಗಳನ್ನು ಆಚರಿಸುವ ವಿಶೇಷ ಸಂದರ್ಭವಾಗಿದೆ. ಹೀಗಾಗಿ ಕೆಲವರು ತಮ್ಮ-ತಮ್ಮ ಗೆಳೆತಿ-ಗೆಳೆಯರಿಗೆ ಶುಭಾಶಯಗಳನ್ನು ತಿಳಿಸಿ ಕೈಗೆ ಫ್ರೆಂಡ್​ಶಿಪ್​ ಬ್ಯಾಂಡ್​ ಕಟ್ಟಿ ಖುಷಿಪಟ್ಟಿದ್ದಾರೆ. ಆದ್ರೆ, ಮಂಡ್ಯದಲ್ಲಿ (Mandya) ಸ್ನೇಹಿತರ ದಿನದಂದೇ ಗೆಳೆಯನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ನಡೆದಿದ್ದು, ಜಯಂತ್( 24) ಕೊಲೆಯಾದ ಯುವಕ.

ಇದನ್ನೂ ಓದಿ: ಮಚ್ಚು ಹಿಡಿದು ಮೆರೆದವನು ಮಚ್ಚಿನಿಂದಲೇ ಅಂತ್ಯ, ತನ್ನ ಭವಿಷ್ಯವನ್ನು ತಾನೇ ನುಡಿದಿದ್ದ ಹತ್ಯೆಯಾದ ರೌಡಿಶೀಟರ್

ಕ್ಷುಲ್ಲಕ ಕಾರಣಕ್ಕೆ ಶುರುವಾದ ಮಾತಿನ ಚಕಮಕಿಯಲ್ಲಿ ಕೀರ್ತಿ ಎಂಬಾತ ತನ್ನ ಸ್ನೇಹಿತ ಜಯಂತ್ ಎನ್ನುವಾತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ಬಗ್ಗೆ ಕೆರೆಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,, ತಲೆಮರೆಸಿಕೊಂಡಿರುವ ಕೀರ್ತಿನನ್ನ ಬಂಧಿಸಲು ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ