ಚುನಾವಣೆ ಮೊದಲೇ ಕಾಂಗ್ರೆಸ್​​ನ ಪಂಚ ಕೌರವರು ಜಾತಿ ಹೆಸರಿನಲ್ಲಿ ಸಿಎಂ ಆಗುವ ಹಗಲು ಕನಸು ಕಾಣ್ತಿದಾರೆ: ಸಚಿವ ಕೆಎಸ್ ಈಶ್ವರಪ್ಪ

| Updated By: ಸಾಧು ಶ್ರೀನಾಥ್​

Updated on: Jul 05, 2021 | 3:55 PM

KS Eshwarappa: ರಾಜ್ಯದ ಜನರು ಪಾಂಡವರನ್ನು ಇಷ್ಟ ಪಡುತ್ತಾರೆ. ಧರ್ಮ ಉಳಿಸುವ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುತ್ತಾರೆ. ಧರ್ಮ ಹಾಳು ಮಾಡುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ಅಧಿಕಾರಕ್ಕೆ ತರುವುದಿಲ್ಲ. ಕಾಂಗ್ರೆಸ್ ಪಕ್ಷ ಈ ಜನ್ಮದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ತಿರುಗೇಟು ನೀಡಿದರು.

ಚುನಾವಣೆ ಮೊದಲೇ ಕಾಂಗ್ರೆಸ್​​ನ ಪಂಚ ಕೌರವರು ಜಾತಿ ಹೆಸರಿನಲ್ಲಿ ಸಿಎಂ ಆಗುವ ಹಗಲು ಕನಸು ಕಾಣ್ತಿದಾರೆ: ಸಚಿವ ಕೆಎಸ್ ಈಶ್ವರಪ್ಪ
ಚುನಾವಣೆ ಮೊದಲೇ ಕಾಂಗ್ರೆಸ್​​ನ ಪಂಚ ಕೌರವರು ಜಾತಿ ಹೆಸರಿನಲ್ಲಿ ಸಿಎಂ ಆಗುವ ಹಗಲು ಕನಸು ಕಾಣ್ತಿದಾರೆ: ಸಚಿವ ಕೆಎಸ್ ಈಶ್ವರಪ್ಪ
Follow us on

ಶಿವಮೊಗ್ಗ: ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಪಕ್ಷಗಳಿಗೆ ಹೋದವರನ್ನು ಘರ್​​ವಾಪಸಿ ಮಾದರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ಮತ್ತೆ ಪಕ್ಷಕ್ಕೆ ಆಹ್ವಾನಿಸಿರುವ ವಿಚಾರವಾಗಿ ಸಚಿವ ಕೆ.ಎಸ್​. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಳಯ ಆದ್ರೂ ಸೇರಿಸಿಕೊಳ್ಳಲ್ಲ ಅಂತಾ ಸಿದ್ದರಾಮಯ್ಯ ಹೇಳ್ತಾರೆ; ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷಕ್ಕೆ ಯಾರಾದ್ರೂ ಸೇರಿಕೊಳ್ತಾರಾ?:
ಪ್ರಳಯ ಆದ್ರೂ ಸೇರಿಸಿಕೊಳ್ಳಲ್ಲ ಅಂತಾ ಸಿದ್ದರಾಮಯ್ಯ ಹೇಳ್ತಾರೆ; ಆದರೆ ಡಿಕೆ ಶಿವಕುಮಾರ್​ ಹೇಳ್ತಾರೆ ಯಾರು ಬೇಕಾದರೂ ಬನ್ನಿ ಅಂತಾ! ಇದು ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿ. ಕಾಂಗ್ರೆಸ್ ನವರ ಬಹಿರಂಗ ಬೆತ್ತಲು ರಾಜಕಾರಣ ಇದು. ಸಿದ್ದರಾಮಯ್ಯ ಆ 17 ಜನ ತೆಗೆದುಕೊಳ್ಳಲ್ಲ ಅಂತಾ.. ಡಿಕೆಶಿ ಹೇಳ್ತಾರೆ ಯಾರೂ ಬೇಕಾದ್ರೂ ಬನ್ನಿ ಕಾಂಗ್ರೆಸ್​ಗೆ ಸೇರಿಸಿಕೊಳ್ಳಲು ತಯಾರಿದ್ದೇವೆ ಅಂತಾರೆ. ನಿಮ್ಮನ್ನು ಮೂಸಿರುವವರು ಯಾರು? ಅರ್ಜಿ ಹಾಕೋಕೆ ಯಾರಾದ್ರೂ ತಯಾರಿದ್ದಾರಾ? ಸತ್ತು ಹೋಗಿರುವ ಪಕ್ಷ ಕಾಂಗ್ರೆಸ್. ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷಕ್ಕೆ ಯಾರಾದ್ರೂ ಸೇರಿಕೊಳ್ಳುತ್ತಾರೆ? ಎಂದು ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಭದ್ರಾವತಿ ತಾಲೂಕಿನ ಬಿಆರ್​ಪಿ ಭದ್ರಾ ಜಲಾಶಯದ ಬಳಿ ಸಚಿವ ಕೆ ಎಸ್ ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಕೆ ಶಿವಕುಮಾರ್​ ಅವರ ಇತ್ತೀಚಿನ ಹೇಳಿಕೆಯನ್ನು ಹೀಗೆ ವ್ಯಾಖ್ಯಾನಿಸಿದರು.

ಇನ್ನು, ತಮ್ಮ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಈಶ್ವರಪ್ಪ ಯಾರು ಯಾರೋ ಏನೇನೋ ಹೇಳಿಕೆ ಕೊಡ್ತಾರೆ. ಅದಕ್ಕೆಲ್ಲ ನಾನು ಉತ್ತರ ಕೊಡೋಕೆ ಇಲ್ಲ. ಬಿಜೆಪಿ ಪಕ್ಷದ ಇಬ್ಬರು ಮೂವರು ಶಾಸಕರು ಅಲ್ಲೊಂದು ಇಲ್ಲೊಂದು ಬಹಿರಂಗ ಹೇಳಿಕೆ ಕೊಡುತ್ತಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ. ನಮ್ಮ ಪಕ್ಷದಲ್ಲಿ ಇಂತಹ ಬೆಳವಣಿಗೆ ಇರಲಿಲ್ಲ. ಅವರಿಗೆ ಬುದ್ಧಿ ಹೇಳುವ ಕೆಲಸ ಮಾಡುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು.

ಚುನಾವಣೆ ಮೊದಲೇ ಜಾತಿ ಹೆಸರಿನಲ್ಲಿ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ:
ಚುನಾವಣೆ ಮೊದಲೇ ಕಾಂಗ್ರೆಸ್ ಪಕ್ಷದ ಸಿದ್ದರಮಾಯ್ಯ, ಡಿಕೆ ಶಿವಕುಮಾರ್, ಡಾ. ಪರಮೇಶ್ವರ್, ತನ್ವೀರ್ ಸೇಠ್, ಎಂ.ಬಿ ಪಾಟೀಲ್ ಪಂಚ ಕೌರವರು ಜಾತಿ ಹೆಸರಿನಲ್ಲಿ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ. ರಾಜ್ಯದ ಜನರು ಪಾಂಡವರನ್ನು ಇಷ್ಟ ಪಡುತ್ತಾರೆ. ಧರ್ಮ ಉಳಿಸುವ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುತ್ತಾರೆ. ಧರ್ಮ ಹಾಳು ಮಾಡುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ಅಧಿಕಾರಕ್ಕೆ ತರುವುದಿಲ್ಲ. ಕಾಂಗ್ರೆಸ್ ಪಕ್ಷ ಈ ಜನ್ಮದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ತಿರುಗೇಟು ನೀಡಿದರು.

(minister ks eshwarappa on political developments in karnataka congress)