AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಗವಾನ್ ಮೇಲೆ ವಕೀಲೆ ಮೀರಾ ಮಸಿ ಬಳಿದಿದ್ದು ಸರಿ ಅಲ್ಲ, ಆದರೆ.. -ಸಚಿವ ಸುರೇಶ್ ಕುಮಾರ್

ಭಗವಾನ್ ಮೇಲೆ ಮಸಿ ಬಳಿದ ವಕೀಲೆ ಮೀರಾ ನಡೆ ಸರಿ ಅಲ್ಲ ಎಂದು ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿಯಲ್ಲಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಆದ್ರೆ ನಾನು ಸಾಹಿತಿ ಭಗವಾನ್​ರನ್ನ ಸಮರ್ಥನೆ ಮಾಡಿಕೊಳ್ತಿಲ್ಲ ಎಂದು ಸಹ ಹೇಳಿದರು.

ಭಗವಾನ್ ಮೇಲೆ ವಕೀಲೆ ಮೀರಾ ಮಸಿ ಬಳಿದಿದ್ದು ಸರಿ ಅಲ್ಲ, ಆದರೆ.. -ಸಚಿವ ಸುರೇಶ್ ಕುಮಾರ್
K.S.ಭಗವಾನ್ (ಎಡ); ವಕೀಲೆ ಮೀರಾ (ಬಲ)
KUSHAL V
|

Updated on: Feb 05, 2021 | 4:35 PM

Share

ಚಿಕ್ಕಬಳ್ಳಾಪುರ: ಭಗವಾನ್ ಮೇಲೆ ಮಸಿ ಬಳಿದ ವಕೀಲೆ ಮೀರಾ ನಡೆ ಸರಿ ಅಲ್ಲ ಎಂದು ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿಯಲ್ಲಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಆದ್ರೆ ನಾನು ಸಾಹಿತಿ ಭಗವಾನ್​ರನ್ನ ಸಮರ್ಥನೆ ಮಾಡಿಕೊಳ್ತಿಲ್ಲ ಎಂದು ಸಹ ಹೇಳಿದರು.

ಕೋರ್ಟ್​ ಆವರಣದಲ್ಲಿ ಆ ರೀತಿ ಮಾಡಿದ್ರೇ ಕೆಟ್ಟ ಸಂದೇಶ ಹೋಗುತ್ತದೆ. ನ್ಯಾಯಾಲಯದ ಮೂಲಕ ಏನ್ ಬೇಕಾದರೂ ಮಾಡಲಿ. ಹಾಗಂತ ಭಗವಾನ್ ಸಮರ್ಥನೀಯ ವ್ಯಕ್ತಿ ಅಲ್ಲವೇ ಅಲ್ಲ. ಇಷ್ಟು ವಯಸ್ಸಾದ್ರೂ ಭಾವನೆಗಳನ್ನ ಬದಲಾಯಿಸಿಕೊಂಡಿಲ್ಲ. ಸಾಹಿತಿ ಭಗವಾನ್ ಬುದ್ಧಿ ಜೀವಿಗಳ ಹೆಸರಿಗೆ ಅಪವಾದ ಎಂದು ಕಲ್ಲಿನಾಯಕನಹಳ್ಳಿಯಲ್ಲಿ ಸಚಿವ ಸುರೇಶ್ ಕುಮಾರ್ ಹೇಳಿದರು.

ಸರ್ಕಾರಿ ಶಾಲೆಯೊಂದಕ್ಕೆ ಸಚಿವರು ಭೇಟಿ ನೀಡಿದ್ದ ವೇಳೆ ಪ್ರತಿಕ್ರಿಯಿಸಿದ ಸುರೇಶ್​ ಕುಮಾರ್,​ ಭಗವಾನ್ ಏನು ಅಂತಾ ಎಲ್ಲರಿಗೂ ಗೊತ್ತಿರುವ ವಿಚಾರ. ಪಾಪ ಅವರ ತಂದೆ ತಾಯಿ ಆ ಹೆಸರು ಇಟ್ಟುಬಿಟ್ಟಿದ್ದಾರೆ. ನಿರಂತರವಾಗಿ ಸಾಮಾನ್ಯ ಜನರ ಭಾವನೆ ಮೇಲೆ ಭಗವಾನ್ ಹಲ್ಲೆಮಾಡುತ್ತಾರೆ ಎಂದು ಹೇಳಿದರು.

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ.. ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ