ಅಕ್ರಮ-ಸಕ್ರಮ: ಬೆಂಗಳೂರು ನಿಮ್ಮ ಅಪ್ಪಂದಾ? ಸಿಎಂ ಮುಂದೆ ಕಿತ್ತಾಡಿಕೊಂಡ್ರು

ಬೆಂಗಳೂರು: ಕೊರೊನಾ ಸಂಕಷ್ಟ ಸಂದರ್ಭದಲ್ಲೂ ಅಕ್ರಮ-ಸಕ್ರಮ ಜಾರಿ ವಿಚಾರವಾಗಿ ಇಬ್ಬರು ಹಿರಿಯ ಸಚಿವರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ಕ್ಯಾಬಿನೆಟ್ ಸಭೆ ಅನ್ನೋದನ್ನೂ ಮರೆತು ಬೆಂಗಳೂರು ಯಾರ ಅಪ್ಪಂದು..? ಬೆಂಗಳೂರು ನಿಮ್ಮ ಅಪ್ಪಂದಾ..? ನಮ್ಮ ಅಪ್ಪಂದಾ..? ನಿನಗೇನಾದರೂ ಗೊತ್ತೇನಯ್ಯಾ ಬೆಂಗಳೂರು ಕಷ್ಟ..? ಎಂದು ಇಬ್ಬರು ಮಹಾ ನಾಯಕರು ಟಾಕ್ ವಾರ್ ನಡೆಸಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಸಚಿವ ವಿ. ಸೋಮಣ್ಣ, ಜೆ.ಸಿ. ಮಾಧುಸ್ವಾಮಿ ನಡುವೆ ಮಾತಿನ ಚಕಮಕಿಯಾಗಿದೆ. ಬೆಂಗಳೂರು ಕಷ್ಟ ನಮಗಷ್ಟೇ ಗೊತ್ತು ಎಂದು ಸಚಿವ ಸೋಮಣ್ಣ ಹೇಳಿದ್ದಾರೆ. ಈ […]

ಅಕ್ರಮ-ಸಕ್ರಮ: ಬೆಂಗಳೂರು ನಿಮ್ಮ ಅಪ್ಪಂದಾ? ಸಿಎಂ ಮುಂದೆ ಕಿತ್ತಾಡಿಕೊಂಡ್ರು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಸಾಧು ಶ್ರೀನಾಥ್​

Updated on: May 15, 2020 | 12:11 PM

ಬೆಂಗಳೂರು: ಕೊರೊನಾ ಸಂಕಷ್ಟ ಸಂದರ್ಭದಲ್ಲೂ ಅಕ್ರಮ-ಸಕ್ರಮ ಜಾರಿ ವಿಚಾರವಾಗಿ ಇಬ್ಬರು ಹಿರಿಯ ಸಚಿವರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ಕ್ಯಾಬಿನೆಟ್ ಸಭೆ ಅನ್ನೋದನ್ನೂ ಮರೆತು ಬೆಂಗಳೂರು ಯಾರ ಅಪ್ಪಂದು..? ಬೆಂಗಳೂರು ನಿಮ್ಮ ಅಪ್ಪಂದಾ..? ನಮ್ಮ ಅಪ್ಪಂದಾ..? ನಿನಗೇನಾದರೂ ಗೊತ್ತೇನಯ್ಯಾ ಬೆಂಗಳೂರು ಕಷ್ಟ..? ಎಂದು ಇಬ್ಬರು ಮಹಾ ನಾಯಕರು ಟಾಕ್ ವಾರ್ ನಡೆಸಿದ್ದಾರೆ.

ಕ್ಯಾಬಿನೆಟ್ ಸಭೆಯಲ್ಲಿ ಸಚಿವ ವಿ. ಸೋಮಣ್ಣ, ಜೆ.ಸಿ. ಮಾಧುಸ್ವಾಮಿ ನಡುವೆ ಮಾತಿನ ಚಕಮಕಿಯಾಗಿದೆ. ಬೆಂಗಳೂರು ಕಷ್ಟ ನಮಗಷ್ಟೇ ಗೊತ್ತು ಎಂದು ಸಚಿವ ಸೋಮಣ್ಣ ಹೇಳಿದ್ದಾರೆ. ಈ ವೇಳೆ ಬೆಂಗಳೂರು ಏನು ನಿಮ್ಮಪ್ಪಂದಾ, ಬೆಂಗಳೂರು ಎಲ್ಲರದ್ದು ಕಾನೂನು ವಿಚಾರ ಏನಿದೆ ಅದನ್ನು ಹೇಳುತ್ತಿದ್ದೇನೆ ಎಂದು ಸೋಮಣ್ಣ ವಿರುದ್ಧ ಸಚಿವ ಮಾಧುಸ್ವಾಮಿ ನಿಗಿನಿಗಿ ಕೆಂಡಕಾರಿದ್ದಾರೆ.

ಸೋಮಣ್ಣ-ಮಾಧುಸ್ವಾಮಿ ಇಬ್ಬರ ಕಿತ್ತಾಟದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಕ್ಕಾಬಿಕ್ಕಿಯಾಗಿದ್ದಾರೆ. ಈ ರೀತಿ ಕಿತ್ತಾಡಿದ್ರೆ ಸರ್ಕಾರದ ಇಮೇಜ್ ಏನಾಗಬೇಕು? ಹಿರಿಯ ಸಚಿವರೇ ಕಿತ್ತಾಡ್ತಿದ್ದಾರೆ ಅಂತಾ ಜನ ಆಡಿಕೊಳ್ತಾರೆ. ಜಗಳ ನಿಲ್ಲಿಸಿ ಸುಮ್ಮನಿರುವಂತೆ ಬಿಎಸ್​ವೈ ಪರಿಪರಿಯಾಗಿ ಬೇಡಿಕೊಂಡರು. ಯಡಿಯೂರಪ್ಪ ರಿಕ್ವೆಸ್ಟ್​ಗೂ ಹಿರಿಯ ಸಚಿವರು ಕಿವಿಗೊಡಲಿಲ್ಲ. ಕೊನೆಗೆ ಇಬ್ಬರ ಜಗಳದಲ್ಲಿ ಮೂಕ ಪ್ರೇಕ್ಷಕನಾಗಿ ಸುಮ್ಮನೆ ಕುಳಿತರು.

 

 

Published On - 11:32 am, Fri, 15 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us