AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುವಿಖ್ಯಾತ ವೀಪಿಗೆ ಸನ್ಮಾನ ವಿಚಾರ, ವೇದಿಕೆಯಲ್ಲೇ MLA, DC ಕಿರಿಕ್

ಕೊಪ್ಪಳ: ಗಾಯಕ ವಿಜಯ್ ಪ್ರಕಾಶ್‌ಗೆ ಸನ್ಮಾನ ಮಾಡುವ ವಿಚಾರಕ್ಕೆ ಕಿರಿಕ್ ಆಗಿದೆ. ಆನೆಗೊಂದಿ ಉತ್ಸವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ರವರಿಗೆ ಸನ್ಮಾನಿಸಲು ಅಹ್ವಾನಿಸಲಾಗಿತ್ತು. ಆದರೆ ಅವರನ್ನು ಸನ್ಮಾನಿಸುವ ವಿಷಯದಲ್ಲಿ ಎಡವಟ್ಟಾಗಿದೆ. ಇದರಿಂದ ದೊಡ್ಡ ಗಾಯಕರೊಬ್ಬರಿಗೆ ಅವಮಾನ ಮಾಡಲಾಗಿದೆ ಎಂಬ ಮಾತುಗಳು ಹೇಳಿ ಬರುತ್ತಿವೆ. ಕಾರ್ಯಕ್ರಮದಲ್ಲಿ ಡಿಸಿ ಸುನಿಲ್ ಕುಮಾರ್‌ ಹಾಗೂ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಇಬ್ಬರು ಸೇರಿ ವಿಜಯ್‌ ಪ್ರಕಾಶ್‌ ರವರಿಗೆ ಸನ್ಮಾನ ಮಾಡಬೇಕಿತ್ತು. ಆದರೆ ಶಾಸಕರು ಬರುವುದನ್ನು ತಡ […]

ಸುವಿಖ್ಯಾತ ವೀಪಿಗೆ ಸನ್ಮಾನ ವಿಚಾರ, ವೇದಿಕೆಯಲ್ಲೇ MLA, DC ಕಿರಿಕ್
ಸಾಧು ಶ್ರೀನಾಥ್​
|

Updated on:Jan 10, 2020 | 11:20 AM

Share

ಕೊಪ್ಪಳ: ಗಾಯಕ ವಿಜಯ್ ಪ್ರಕಾಶ್‌ಗೆ ಸನ್ಮಾನ ಮಾಡುವ ವಿಚಾರಕ್ಕೆ ಕಿರಿಕ್ ಆಗಿದೆ. ಆನೆಗೊಂದಿ ಉತ್ಸವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ರವರಿಗೆ ಸನ್ಮಾನಿಸಲು ಅಹ್ವಾನಿಸಲಾಗಿತ್ತು. ಆದರೆ ಅವರನ್ನು ಸನ್ಮಾನಿಸುವ ವಿಷಯದಲ್ಲಿ ಎಡವಟ್ಟಾಗಿದೆ. ಇದರಿಂದ ದೊಡ್ಡ ಗಾಯಕರೊಬ್ಬರಿಗೆ ಅವಮಾನ ಮಾಡಲಾಗಿದೆ ಎಂಬ ಮಾತುಗಳು ಹೇಳಿ ಬರುತ್ತಿವೆ. ಕಾರ್ಯಕ್ರಮದಲ್ಲಿ ಡಿಸಿ ಸುನಿಲ್ ಕುಮಾರ್‌ ಹಾಗೂ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಇಬ್ಬರು ಸೇರಿ ವಿಜಯ್‌ ಪ್ರಕಾಶ್‌ ರವರಿಗೆ ಸನ್ಮಾನ ಮಾಡಬೇಕಿತ್ತು.

ಆದರೆ ಶಾಸಕರು ಬರುವುದನ್ನು ತಡ ಮಾಡಿದ್ದಕ್ಕೆ ಡಿಸಿ ವಿಜಯ್‌ ಪ್ರಕಾಶ್‌ ರವರಿಗೆ ಸನ್ಮಾನ ಮಾಡಿ ವೇದಿಕೆಯಿಂದ ಹೊರಟು ಹೋಗಿದ್ದಾರೆ. ಹೀಗಾಗಿ ಡಿಸಿ ವಿರುದ್ಧ ಶಾಸಕ ಪರಣ್ಣ ಮುನವಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಎದುರು ಆಕ್ರೋಶ ಹೊರಹಾಕಿದ್ದಾರೆ. ನಂತರ ವೇದಿಕೆ ಕೆಳಗಡೆ ಹೋಗಿ ಕುಳಿತುಕೊಂಡಿದ್ದಾರೆ. ಅಧಿಕಾರಿಗಳಾದ ಎಸ್ಪಿ ಸಂಗೀತಾ, ಎಸಿ ಗೀತಾ ರವರು ಶಾಸಕರಿಗೆ ಮತ್ತೊಮ್ಮೆ ಸನ್ಮಾನ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಶಾಸಕರು ಅಧಿಕಾರಿಗಳ ಮಾತಿಗೆ ಸಮ್ಮತಿ ಸೂಚಿಸದೇ ಸುಮ್ಮನೆ ಕುಳಿತಿದ್ದರು.

ವಿಜಯ್ ಪ್ರಕಾಶ್ ರಂಪಾಟಕ್ಕೆ ಬೇಸತ್ತು ಕಾರ್ಯಕ್ರಮ ನಿಲ್ಲಿಸಿ, ಕೊನೆಗೆ ವೇದಿಕೆಯಿಂದ ಕೆಳಗೆ ಇಳಿದು ಬಂದು ಶಾಸಕರನ್ನು ಮನವೊಲಿಸಿ ವೇದಿಕೆ ಮೇಲೆ ಬರಲು ಮನವಿ ಮಾಡಿದ್ದಾರೆ. ನಂತರ ಶಾಸಕರು ತಮ್ಮ ಬೆಂಬಲಿಗರ ಜತೆ ಗಾಯಕ ವಿಜಯ್ ಪ್ರಕಾಶ್‌ ರವರಿಗೆ ಪುನಃ ಸನ್ಮಾನ ಮಾಡಿದ್ದಾರೆ. ಈ ರೀತಿ ಒಂದೇ ವೇದಿಕೆ ಮೇಲೆ ಎರಡು ಬಾರಿ ವಿಜಯ್ ಪ್ರಕಾಶ್‌ ರವರಿಗೆ ಸನ್ಮಾನ ಮಾಡಲಾಯಿತು.

Published On - 9:29 am, Fri, 10 January 20

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ