AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುವಿಖ್ಯಾತ ವೀಪಿಗೆ ಸನ್ಮಾನ ವಿಚಾರ, ವೇದಿಕೆಯಲ್ಲೇ MLA, DC ಕಿರಿಕ್

ಕೊಪ್ಪಳ: ಗಾಯಕ ವಿಜಯ್ ಪ್ರಕಾಶ್‌ಗೆ ಸನ್ಮಾನ ಮಾಡುವ ವಿಚಾರಕ್ಕೆ ಕಿರಿಕ್ ಆಗಿದೆ. ಆನೆಗೊಂದಿ ಉತ್ಸವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ರವರಿಗೆ ಸನ್ಮಾನಿಸಲು ಅಹ್ವಾನಿಸಲಾಗಿತ್ತು. ಆದರೆ ಅವರನ್ನು ಸನ್ಮಾನಿಸುವ ವಿಷಯದಲ್ಲಿ ಎಡವಟ್ಟಾಗಿದೆ. ಇದರಿಂದ ದೊಡ್ಡ ಗಾಯಕರೊಬ್ಬರಿಗೆ ಅವಮಾನ ಮಾಡಲಾಗಿದೆ ಎಂಬ ಮಾತುಗಳು ಹೇಳಿ ಬರುತ್ತಿವೆ. ಕಾರ್ಯಕ್ರಮದಲ್ಲಿ ಡಿಸಿ ಸುನಿಲ್ ಕುಮಾರ್‌ ಹಾಗೂ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಇಬ್ಬರು ಸೇರಿ ವಿಜಯ್‌ ಪ್ರಕಾಶ್‌ ರವರಿಗೆ ಸನ್ಮಾನ ಮಾಡಬೇಕಿತ್ತು. ಆದರೆ ಶಾಸಕರು ಬರುವುದನ್ನು ತಡ […]

ಸುವಿಖ್ಯಾತ ವೀಪಿಗೆ ಸನ್ಮಾನ ವಿಚಾರ, ವೇದಿಕೆಯಲ್ಲೇ MLA, DC ಕಿರಿಕ್
ಸಾಧು ಶ್ರೀನಾಥ್​
|

Updated on:Jan 10, 2020 | 11:20 AM

Share

ಕೊಪ್ಪಳ: ಗಾಯಕ ವಿಜಯ್ ಪ್ರಕಾಶ್‌ಗೆ ಸನ್ಮಾನ ಮಾಡುವ ವಿಚಾರಕ್ಕೆ ಕಿರಿಕ್ ಆಗಿದೆ. ಆನೆಗೊಂದಿ ಉತ್ಸವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ರವರಿಗೆ ಸನ್ಮಾನಿಸಲು ಅಹ್ವಾನಿಸಲಾಗಿತ್ತು. ಆದರೆ ಅವರನ್ನು ಸನ್ಮಾನಿಸುವ ವಿಷಯದಲ್ಲಿ ಎಡವಟ್ಟಾಗಿದೆ. ಇದರಿಂದ ದೊಡ್ಡ ಗಾಯಕರೊಬ್ಬರಿಗೆ ಅವಮಾನ ಮಾಡಲಾಗಿದೆ ಎಂಬ ಮಾತುಗಳು ಹೇಳಿ ಬರುತ್ತಿವೆ. ಕಾರ್ಯಕ್ರಮದಲ್ಲಿ ಡಿಸಿ ಸುನಿಲ್ ಕುಮಾರ್‌ ಹಾಗೂ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಇಬ್ಬರು ಸೇರಿ ವಿಜಯ್‌ ಪ್ರಕಾಶ್‌ ರವರಿಗೆ ಸನ್ಮಾನ ಮಾಡಬೇಕಿತ್ತು.

ಆದರೆ ಶಾಸಕರು ಬರುವುದನ್ನು ತಡ ಮಾಡಿದ್ದಕ್ಕೆ ಡಿಸಿ ವಿಜಯ್‌ ಪ್ರಕಾಶ್‌ ರವರಿಗೆ ಸನ್ಮಾನ ಮಾಡಿ ವೇದಿಕೆಯಿಂದ ಹೊರಟು ಹೋಗಿದ್ದಾರೆ. ಹೀಗಾಗಿ ಡಿಸಿ ವಿರುದ್ಧ ಶಾಸಕ ಪರಣ್ಣ ಮುನವಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಎದುರು ಆಕ್ರೋಶ ಹೊರಹಾಕಿದ್ದಾರೆ. ನಂತರ ವೇದಿಕೆ ಕೆಳಗಡೆ ಹೋಗಿ ಕುಳಿತುಕೊಂಡಿದ್ದಾರೆ. ಅಧಿಕಾರಿಗಳಾದ ಎಸ್ಪಿ ಸಂಗೀತಾ, ಎಸಿ ಗೀತಾ ರವರು ಶಾಸಕರಿಗೆ ಮತ್ತೊಮ್ಮೆ ಸನ್ಮಾನ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಶಾಸಕರು ಅಧಿಕಾರಿಗಳ ಮಾತಿಗೆ ಸಮ್ಮತಿ ಸೂಚಿಸದೇ ಸುಮ್ಮನೆ ಕುಳಿತಿದ್ದರು.

ವಿಜಯ್ ಪ್ರಕಾಶ್ ರಂಪಾಟಕ್ಕೆ ಬೇಸತ್ತು ಕಾರ್ಯಕ್ರಮ ನಿಲ್ಲಿಸಿ, ಕೊನೆಗೆ ವೇದಿಕೆಯಿಂದ ಕೆಳಗೆ ಇಳಿದು ಬಂದು ಶಾಸಕರನ್ನು ಮನವೊಲಿಸಿ ವೇದಿಕೆ ಮೇಲೆ ಬರಲು ಮನವಿ ಮಾಡಿದ್ದಾರೆ. ನಂತರ ಶಾಸಕರು ತಮ್ಮ ಬೆಂಬಲಿಗರ ಜತೆ ಗಾಯಕ ವಿಜಯ್ ಪ್ರಕಾಶ್‌ ರವರಿಗೆ ಪುನಃ ಸನ್ಮಾನ ಮಾಡಿದ್ದಾರೆ. ಈ ರೀತಿ ಒಂದೇ ವೇದಿಕೆ ಮೇಲೆ ಎರಡು ಬಾರಿ ವಿಜಯ್ ಪ್ರಕಾಶ್‌ ರವರಿಗೆ ಸನ್ಮಾನ ಮಾಡಲಾಯಿತು.

Published On - 9:29 am, Fri, 10 January 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ