ಆನೇಕಲ್: ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನ ಕೊಲೆ- ಕಂಠ ಪೂರ್ತಿ ಕುಡಿದು ಹತ್ಯೆಯಾದ ಮನೆಯಲ್ಲಿಯೇ ಮಲಗಿಬಿಟ್ಟಿದ್ದ ನಿವೃತ್ತ ಎಎಸ್ಐ!

ಆನೇಕಲ್​ನ ಪಂಪ್ ಹೌಸ್ ನಿವಾಸಿ ಮುನಿರಾಜು (50) ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ ಮನೆಯ ಮಾಲೀಕ ಶ್ರೀಧರ್, ಮೃತ ವ್ಯಕ್ತಿ ಮುನಿರಾಜು ಮತ್ತು ನಿವೃತ್ತ ಎಎಸ್​ಐ​ ಅರಸುರನ್ನು ಒಳಗೊಂಡತೆ ಮೂವರು ಸ್ನೇಹಿತರಿಂದ ಎಣ್ಣೆ ಪಾರ್ಟಿ ನಡೆದಿದ್ದು, ಕುಡಿದ ಮತ್ತಿನಲ್ಲಿ ಮುನಿರಾಜುರನ್ನು ಕೊಲೆ ಮಾಡಿ ಆರೋಪಿಗಳು  ಪರಾರಿಯಾಗಿದ್ದಾರೆ.

ಆನೇಕಲ್: ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನ ಕೊಲೆ- ಕಂಠ ಪೂರ್ತಿ ಕುಡಿದು ಹತ್ಯೆಯಾದ ಮನೆಯಲ್ಲಿಯೇ ಮಲಗಿಬಿಟ್ಟಿದ್ದ ನಿವೃತ್ತ ಎಎಸ್ಐ!
ಮುನಿರಾಜು
Updated By: ಸಾಧು ಶ್ರೀನಾಥ್​

Updated on: Feb 13, 2021 | 4:14 PM

ಆನೇಕಲ್: ಮದ್ಯದ ಅಮಲಿನಲ್ಲಿ ಸ್ನೇಹಿತರೇ ಗೆಳೆಯನನ್ನು ಕೊಲೆ ಮಾಡಿದ ಘಟನೆ ಬೆಂಗಳೂರು ನಗರದ ಆನೇಕಲ್​ನ ಬಸವಣ್ಣ ಬೀದಿಯ ಶ್ರೀಧರ್ ಮನೆಯಲ್ಲಿ ನಡೆದಿದೆ. ಆನೇಕಲ್​ನ ಪಂಪ್ ಹೌಸ್ ನಿವಾಸಿ ಮುನಿರಾಜು (50) ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ ಮನೆಯ ಮಾಲೀಕ ಶ್ರೀಧರ್, ಮೃತ ವ್ಯಕ್ತಿ ಮುನಿರಾಜು ಮತ್ತು ನಿವೃತ್ತ ಎಎಸ್​ಐ​ ಅರಸುರನ್ನು ಒಳಗೊಂಡತೆ ಮೂವರು ಸ್ನೇಹಿತರು ಎಣ್ಣೆ ಪಾರ್ಟಿ ನಡೆಸಿದ್ದು, ಕುಡಿದ ಮತ್ತಿನಲ್ಲಿ ಮುನಿರಾಜುರನ್ನು ಕೊಲೆ ಮಾಡಿ ಆರೋಪಿಗಳು  ಪರಾರಿಯಾಗಿದ್ದಾರೆ.

ಮುನಿರಾಜುವನ್ನು ಹತ್ಯೆ ಮಾಡಿದ ಆರೋಪಿಗಳು ಮನೆಗೆ ಬೀಗ ಹಾಕಿ  ಪರಾರಿಯಾಗಿದ್ದಾರೆ. ಆದರೆ ಹೆಚ್ಚು ಪ್ರಮಾಣದಲ್ಲಿ ಕುಡಿದಿದ್ದ ನಿವೃತ್ತ ಎಎಸ್​ಐ ಅರಸು ಅದೇ ಮನೆಯಲ್ಲಿಯೇ ಮಲಗಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಮುನಿರಾಜುವಿನ ಮೃತ ದೇಹ ಪಕ್ಕದಲ್ಲಿಯೇ ಕಂಡುಬಂದಿದೆ.ಅದನ್ನು ನೋಡಿ ಅರಸು ಕಿರುಚಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದ್ದು, ಸದ್ಯ ನಿವೃತ್ತ ಎಎಸ್ಐ ಅರಸುನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿವಾಹಿತ ಮಹಿಳೆ ಹಾಗೂ ಯುವಕನನ್ನ ಕೊಚ್ಚಿ ಕೊಚ್ಚಿ ಕೊಂದ್ರು..