AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1983 ಅಲ್ಲ, 1973ರಿಂದಲೇ ಚನ್ನಪಟ್ಟಣದ ಜೊತೆ ತನಗೆ ಬಾಂಧವ್ಯ ಅಂತ ನಿಖಿಲ್​ಗೆ ಹೇಳಿದ ದೇವೇಗೌಡ

1983 ಅಲ್ಲ, 1973ರಿಂದಲೇ ಚನ್ನಪಟ್ಟಣದ ಜೊತೆ ತನಗೆ ಬಾಂಧವ್ಯ ಅಂತ ನಿಖಿಲ್​ಗೆ ಹೇಳಿದ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 09, 2024 | 6:01 PM

ನಿನ್ನೆ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ರಾಮನಗರ ಮತ್ತು ಚನ್ನಪಟ್ಟಣಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿಯವರ ಕೊಡುಗೆ ಏನು ಅಂತ ಡಿಕೆ ಶಿವಕುಮಾರ್ ಕೇಳಿದ್ದರು. ಆದಕ್ಕೆ ಪ್ರತಿಯಾಗಿ; ಮೂರು ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸದರಾಗಿ ಅಯ್ಕೆಯಾಗಿದ್ದ ಡಿಕೆ ಸುರೇಶ್ ಅವರ ಕೊಡುಗೆ ಏನು ಎಂದು ನಿಖಿಲ್ ಕೇಳಿದರು.

ರಾಮನಗರ: ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಚನ್ನಪಟ್ಟಣದಲ್ಲಿ ಪ್ರಚಾರದ ಅಬ್ಬರ ಹೆಚ್ಚುತ್ತಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಸಮ್ಮುಖದಲ್ಲಿ ತೌಟಹಳ್ಳಿಯಲ್ಲಿ ಪ್ರಚಾರ ಭಾಷಣ ಮಾಡಿದ ನಿಖಿಲ್ ಕುಮಾರಸ್ವಾಮಿ ತಮ್ಮ ಮಾತಿನ ಭರದಲ್ಲಿ ತಪ್ಪು ಮಾಹಿತಿ ನೀಡಿದಾಗ ಹಿರಿಯ ಗೌಡರು ಅವರನ್ನು ತಿದ್ದಿದರು. ತಾನು ಹುಟ್ಟಿದ್ದು 1988ರಲ್ಲಾದರೂ 1983ರಿಂದ ದೇವೇಗೌಡರು ಚನ್ನಪಟ್ಟಣದೊಂದಿಗೆ ಬಾಂಧವ್ಯ ಹೊಂದಿದ್ದಾರೆ ಅಂದಾಗ ಗೌಡರು 83 ಅಲ್ಲ 1973 ಅನ್ನುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜೆಡಿಎಸ್​ನಿಂದ ಕಾಂಗ್ರೆಸ್ ಸೇರಿ ಮಂತ್ರಿಗಳಾದವರಿಗೆ ನಿಖಿಲ್ ಕುಮಾರಸ್ವಾಮಿ ಬಗ್ಗೆ ವಿಶೇಷ ಮಮತೆ!