AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Mayor Election: ಚುನಾವಣಾ ರಣತಂತ್ರ ರೂಪಿಸಿದ ‘ಕೈ’; ಹೇಗಿದೆ ಪಕ್ಷಗಳ ಬಲಾಬಲ?

ಮೈಸೂರು ಪಾಲಿಕೆ ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಒಂದೆಡೆ ಬಿಜೆಪಿ ಕೈ-ಜೆಡಿಎಸ್ ಮೈತ್ರಿಯನ್ನು ಮುಂದೆ ನೋಡುತ್ತಿದ್ದು, ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಜಪಿಸುತ್ತಿದೆ. ಕಾಂಗ್ರೆಸ್ ಜೆಡಿಎಸ್ ತನ್ನೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಮುಂದೇನು? ಎಂಬ ಪ್ರಶ್ನೆಗೆ ಉತ್ತರವಾಗಿ ರಣತಂತ್ರ ರೂಪಿಸಿದೆ.

Mysore Mayor Election: ಚುನಾವಣಾ ರಣತಂತ್ರ ರೂಪಿಸಿದ 'ಕೈ'; ಹೇಗಿದೆ ಪಕ್ಷಗಳ ಬಲಾಬಲ?
ಮೈಸೂರು ಮಹಾನಗರ ಪಾಲಿಕೆ
TV9 Web
| Updated By: Rakesh Nayak Manchi|

Updated on:Sep 03, 2022 | 7:23 AM

Share

ಮೈಸೂರು: ಪಾಲಿಕೆ ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮೇಯರ್ ಗಾದಿ ಹಿಡಿಯಲು ಕಾಂಗ್ರೆಸ್ ಪಕ್ಷ ರಣತಂತ್ರ ರೂಪಿಸಿದೆ. ಪಾಲಿಕೆಯಲ್ಲಿ ಗೆದ್ದುಗೆ ಹಿಡಿಯಲು ಸಂಖ್ಯಾ ಬಲವನ್ನು ಹೆಚ್ಚಿಸಲು ಯೋಜನೆಯನ್ನು ಕೈ ನಾಯಕರು ಹಾಕಿಕೊಂಡಿದ್ದಾರೆ. ಅದರಂತೆ ಮಂಡ್ಯ ಪರಿಷತ್​ಗೆ ಕಾಂಗ್ರೆಸ್​​ನಿಂದ ಆಯ್ಕೆಯಾಗಿರುವ ದಿನೇಶ್ ಗೂಳಿಗೌಡ ಅವರು ಹೆಸರು ಮೈಸೂರು ನಿವಾಸಿ ಎಂದು ಮತಪಟ್ಟಿಗೆ ಸೇರಿಸಲಾಗಿದೆ. ಮಧು ಮಾದೇಗೌಡ, ತಿಮ್ಮಯ್ಯ ಕೂಡ ಈಗ ಮತದಾರರು ಅಲ್ಲಿನ ಮತದಾರರಾಗಿದ್ದಾರೆ. ಇದರಿಂದಾಗಿ ಪಾಲಿಕೆ ಚುನಾವಣೆಯಲ್ಲಿ ಓರ್ವ ಕಾಂಗ್ರೆಸ್ ಸದಸ್ಯೆ ಗೆದ್ದುಕೊಂಡು ಸಂಖ್ಯಾ ಬಲವನ್ನು ಹೆಚ್ಚಿಸಿಕೊಂಡಿದೆ. ಹಾಗಿದ್ದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿನ ಸಂಖ್ಯಾ ಬಲ ಹೇಗಿದೆ?

ಕಾಂಗ್ರೆಸ್ ಪಕ್ಷದ ಸಂಖ್ಯಾ ಬಲ

  • ಪಾಲಿಕೆ ಸದಸ್ಯರು-21
  • ಶಾಸಕರ ಸಂಖ್ಯೆ- 01
  • ಪರಿಷತ್ ಸದಸ್ಯರ ಸಂಖ್ಯೆ- 03
  • ಪಕ್ಷೇತರ ಬೆಂಬಲ- 2
  • ಒಟ್ಟು 27

ಬಿಜೆಪಿ ಸಂಖ್ಯಾ ಬಲ

  • ಪಾಲಿಕೆ ಸದಸ್ಯರಸಂಖ್ಯೆ- 22
  • ಶಾಸಕರ ಸಂಖ್ಯೆ- 02
  • ಪರಿಷತ್ ಸದಸ್ಯರ ಸಂಖ್ಯೆ- 01
  • ಸಂಸದರು- 01
  • ಪಕ್ಷೇತರ ಬೆಂಬಲ- 01
  • ಒಟ್ಟು 27

ಜೆಡಿಎಸ್ ಪಕ್ಷದ ಸಂಖ್ಯಾ ಬಲ

  • ಪಾಲಿಕೆ ಸದಸ್ಯರ ಸಂಖ್ಯೆ- 17
  • ಶಾಸಕರ ಸಂಖ್ಯೆ- 01
  • ಪರಿಷತ್ ಸದಸ್ಯರ ಸಂಖ್ಯೆ- 02
  • ಪಕ್ಷೇತರರ ಬೆಂಬಲ- 02
  • ಒಟ್ಟು 22

ಮೈತ್ರಿ ಜಪಿಸುತ್ತಿರುವ ಜೆಡಿಎಸ್

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮುಸುಕಿನ ಗುದ್ದಾಟ ನಡೆದು ಮೇಯರ್ ಗಾದಿಯಲ್ಲಿ ತಟಸ್ಥವಾಗಿ ನಿಂತುಬಿಟ್ಟಿತ್ತು. ಇದರ ಫಲವಾಗಿ ಮೇಯರ್ ಸ್ಥಾನ ಬಿಜೆಪಿ ಪಾಲಾಗಿತ್ತು. ಈ ಬಾರಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹೊಂದಾಣಿಕೆಯಾಗದಿದ್ದರೆ ತಮಗೆ ಮೇಯರ್ ಗಾದಿ ಮತ್ತೊಮ್ಮೆ ಒಲಿಯದೆ ಎಂದು ಬಿಜೆಪಿ ಚಿಂತನೆಯಲ್ಲಿದೆ. ಆದರೆ ಇತ್ತ ಕಾಂಗ್ರೆಸ್ ಜೆಡಿಎಸ್ ನಡೆ ಏನು ಎಂಬುದರ ಮೇಲೆ ಕಣ್ಣಿಟ್ಟುಕೊಂಡಿದೆ. ಮೈತ್ರಿ ಮಾಡದಿದ್ದರೇ ಮುಂದೇನು? ಎಂಬ ಪ್ರಶ್ನೆಗೆ ಉತ್ತರವಾಗಿ ರಣತಂತ್ರ ರೂಪಿಸಿಕೊಂಡಿದೆ. ಇನ್ನೊಂದೆಡೆ ಮೈತ್ರಿ ಜಪಿಸುತ್ತಿರುವ ಜೆಡಿಎಸ್, ಮೇಯರ್ ಸ್ಥಾನ ತಮಗೆ ಬಿಟ್ಟುಕೊಡುವಂತೆ ಹೇಳಿಕೊಳ್ಳುತ್ತಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:23 am, Sat, 3 September 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?