
ಮೈಸೂರು: ಕಡವೆ ಮಾಂಸ ಶೇಖರಿಸಿಟ್ಟಿದ್ದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಹುಣಸೂರು ತಾಲೂಕಿನ ಲಕ್ಷ್ಮೀಪುರದಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ತಂಬಾಕು ಬ್ಯಾರನ್ನಲ್ಲಿ 80 ಕೆಜಿ ಕಡವೆ ಮಾಂಸ ಪತ್ತೆಯಾಗಿದೆ.
ಮಾಂಸ ಶೇಖರಿಸಿಟ್ಟಿದ್ದ ಸ್ವಾಮಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾದ ನಾಲ್ವರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ.
Published On - 8:54 am, Wed, 18 December 19