AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರುತೇಶ್ವರನ ಜಾತ್ರೆಯಲ್ಲಿ ಮೂಟೆಗಟ್ಟಲೆ ತೆಂಗಿನಕಾಯಿ ತೂರಾಡಿ ಭಕ್ತರ ಸಂಭ್ರಮ

ಬಾಗಲಕೋಟೆ: ನಿಂತಲ್ಲೇ ಕಿಕ್ ಕೊಡೋ ಡಿಜೆ ಮ್ಯೂಸಿಕ್.. ಹೆಜ್ಜೆ ಹೆಜ್ಜೆಗೂ ಹೆಚ್ಚಾಗೋ ಜೋಶ್.. ತಾಳ ಮೇಳ ಕಿವಿಗೆ ಬೀಲ್ತಾ ಇದ್ರೆ ಕುಣೀಬೇಕು ಅನ್ಸುತ್ತೆ.. ಎಲ್ಲರ ಜೊತೆ ಎಲ್ಲವನ್ನೂ ಮರೆತು ಮೈ ಮನ ಕುಣಿಸ್ಬೇಕು ಅನ್ಸುತ್ತೆ.. ಅತ್ತ ರೋಡ್ ತುಂಬಾ ಕುಣಿಯೋರ ಗ್ಯಾಂಗ್.. ಇತ್ತ ಭಕ್ತಿಯ ಅಲೆಯಲ್ಲೇ ತೇಲೋ ಮಂದಿ.. ಸರ್ವಾಲಂಕಾರಗಳಲ್ಲಿ ಕಂಗೊಳಿಸೋ ದೇವನನ್ನ ನೋಡ್ತಾ ಜನ ಭಕ್ತಿಯಲ್ಲಿ ಕಳೆದೋಗಿದ್ರು. ತೆಂಗಿನ ಕಾಯಿ ತೂರೋದೇ ಜಾತ್ರೆಯ ವಿಶೇಷ:  ಬಾಗಲಕೋಟೆ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರೆಯ ಸಂಭ್ರಮವಿದು. […]

ಮಾರುತೇಶ್ವರನ ಜಾತ್ರೆಯಲ್ಲಿ ಮೂಟೆಗಟ್ಟಲೆ ತೆಂಗಿನಕಾಯಿ ತೂರಾಡಿ ಭಕ್ತರ ಸಂಭ್ರಮ
ಸಾಧು ಶ್ರೀನಾಥ್​
|

Updated on:Dec 18, 2019 | 12:13 PM

Share

ಬಾಗಲಕೋಟೆ: ನಿಂತಲ್ಲೇ ಕಿಕ್ ಕೊಡೋ ಡಿಜೆ ಮ್ಯೂಸಿಕ್.. ಹೆಜ್ಜೆ ಹೆಜ್ಜೆಗೂ ಹೆಚ್ಚಾಗೋ ಜೋಶ್.. ತಾಳ ಮೇಳ ಕಿವಿಗೆ ಬೀಲ್ತಾ ಇದ್ರೆ ಕುಣೀಬೇಕು ಅನ್ಸುತ್ತೆ.. ಎಲ್ಲರ ಜೊತೆ ಎಲ್ಲವನ್ನೂ ಮರೆತು ಮೈ ಮನ ಕುಣಿಸ್ಬೇಕು ಅನ್ಸುತ್ತೆ.. ಅತ್ತ ರೋಡ್ ತುಂಬಾ ಕುಣಿಯೋರ ಗ್ಯಾಂಗ್.. ಇತ್ತ ಭಕ್ತಿಯ ಅಲೆಯಲ್ಲೇ ತೇಲೋ ಮಂದಿ.. ಸರ್ವಾಲಂಕಾರಗಳಲ್ಲಿ ಕಂಗೊಳಿಸೋ ದೇವನನ್ನ ನೋಡ್ತಾ ಜನ ಭಕ್ತಿಯಲ್ಲಿ ಕಳೆದೋಗಿದ್ರು.

ತೆಂಗಿನ ಕಾಯಿ ತೂರೋದೇ ಜಾತ್ರೆಯ ವಿಶೇಷ:  ಬಾಗಲಕೋಟೆ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರೆಯ ಸಂಭ್ರಮವಿದು. ಈ ಜಾತ್ರೆಯಲ್ಲಿ ವಿಶೇಷ ಅಂದ್ರೆ ತೆಂಗಿನ ಕಾಯಿ ತೂರೋದು. ಜಾತ್ರೆಗೆ ಬರೋ ಭಕ್ತರು ಮೂಟೆಗಟ್ಟಲೇ ತಂದ ತೆಂಗಿನಕಾಯಿಯನ್ನ ದೇವಸ್ಥಾನದ ಆವರಣದಲ್ಲಿ ತೂರಾಡಿ ಸಂಭ್ರಮ ಪಡುತ್ತಾರೆ. ತೂರಿದ ತೆಂಗಿನಕಾಯಿಯನ್ನು ಹಿಡಿಯೋದಕ್ಕೆ ಯುವಕರು ಮುಗಿಬೀಳ್ತಾರೆ. ಈ ತೆಂಗಿನಕಾಯಿ ತೂರುವ ಸಂಭ್ರಮವನ್ನು ನೋಡ್ಬೇಕು ಅಂತಾನೇ ಸಾವಿರಾರು ಜನ ಬರ್ತಾರೆ. ಮಾರುತೇಶ್ವರನಿಗೆ ಪೂಜೆ ಸಲ್ಲಿಸಿ ಜಾತ್ರೆಯ ಸಂಭ್ರಮ ಕಂಡು ಸಂಭ್ರಮ ಪಡುತ್ತಾರೆ.

ಜಾತ್ರೆಗೆ ನೂರಾರು ವರ್ಷಗಳ ಇತಿಹಾಸ:  ಇನ್ನು ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹನುಮದೇವರ ಹೊತ್ತ ಪಲ್ಲಕ್ಕಿ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಜಾತ್ರೆಗೆ ಬಂದ ಭಕ್ತರೆಲ್ಲರೂ ಪಲ್ಲಕ್ಕಿ ಮೆರವಣಿಗೆ ವೇಳೆ ಹೂವು, ಮಂಡಕ್ಕಿಯನ್ನ ಪಲ್ಲಕ್ಕಿ ಮೇಲೆ ತೂರಿ ಭಕ್ತಿ ಸಮರ್ಪಿಸಿದರು. ಇನ್ನು ಈ ಜಾತ್ರೆಯಲ್ಲಿ ತೆಂಗಿನ ಕಾಯಿ ತೂರುವ ಹಿನ್ನೆಲೆಗೆ ನೂರಾರು ವರ್ಷಗಳ ಇತಿಹಾಸವಿದೆ.

ಹಿಂದೆ ಮಾರುತೇಶ್ವರ ದೇವರಿಗೆ ಭಕ್ತನೊಬ್ಬ ಬೇಡಿಕೆ ಈಡೇರಿದಾಗ ತೆಂಗಿನ ಕಾಯಿ ತೂರಿ ಹರಕೆ ತೀರಿಸಿದ್ದನಂತೆ. ಅಂದಿನಿಂದ ಈ ಹನುಮನಿಗೆ ಬೇಡಿಕೊಂಡವರೆಲ್ಲರೂ ದೇವಸ್ಥಾನಕ್ಕೆ ತೆಂಗಿನಕಾಯಿ ತೂರುತ್ತಾ ಹರಕೆ ಸಮರ್ಪಿಸ್ತಾರೆ. ಮನೆ ಮಾಳಿಗೆ ಮೇಲೆ ನಿಂತು ಸಾವಿರಾರು ತೆಂಗಿನಕಾಯಿಗಳನ್ನು ಆಕಾಶಕ್ಕೆ ಮೇಲ್ಮುಖ ಮಾಡಿ ತೂರ್ತಾರೆ.

ಹೀಗೆ ತೂರಿ ಬಂದ ತೆಂಗಿನಕಾಯಿಯನ್ನ ಹಿಡಿಯೋಕೆ ಅಂತ್ಲೇ ಕೆಲವ್ರು ಸರ್ಕಸ್ ಮಾಡ್ತಾರೆ. ಜಾತ್ರೆಗಳು ಅಂದ್ರೆನೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಜಾತ್ರೆಯಲ್ಲೂ ಒಂದೊಂದು ರೀತಿಯ ಆಚರಣೆಗಳಿರುತ್ತವೆ. ಅದ್ರಂತೆ ಈ ಜಾತ್ರೆಯಲ್ಲಿ ತೆಂಗಿನಕಾಯಿ ತೂರೋದು ಪ್ರತೀತಿಯಾಗಿ ಬಂದಿದ್ದು, ಇದು ಇಲ್ಲಿನ ಜನರ ನಂಬಿಕೆಯೂ ಆಗಿದೆ.

Published On - 6:49 am, Wed, 18 December 19

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ